ಕವಿರಾಜ್ ಹೇಳಿದ್ದಾರೆ-ಹಾಗೆಲ್ಲಾ ಅಂದುಕೊಳ್ಳಬೇಡಿ !ಸಾಂಗತ್ಯ - ಗುರುವಾರ ೧೨:೪೧, ಮೇ ೧೭, ೨೦೧೨ ಎಷ್ಟೋ ಬಾರಿ ಹೀಗನ್ನಿಸುವುದಿದೆ. ಹಳೆಯದ್ದೆಲ್ಲಾ ಚೆನ್ನಾಗೇ ಇತ್ತು. ಈ ಮಾತು ಚಿತ್ರ ಸಂಗೀತಕ್ಕೂ ಅನ್ವಯ. ಹಳೆಯದ್ದೆಲ್ಲಾ ಮಧುರ ಗೀತೆಗಳೇ, ಈಗಿನದ್ದೇನೋ ಇಷ್ಟವಾಗದು ಎಂಬ ಮಾತು ಸದಾ ಕೇಳಿಬರುತ್ತಲೇ ಇರುತ್ತದೆ. ಅದು ಹಾಗಲ್ಲ, ಹಾಗೆಲ್ಲಾ ಅಂದುಕೊಳ್ಳಬೇಡಿ ಎಂದಿದ್ದಾರೆ ಗೀತ ರಚನಕಾರ ಕವಿರಾಜ್. ಓದಿ ಅಭಿಪ್ರಾಯಿಸಿ. ಪರಿವರ್ತನೆ ಜಗದ ನಿಯಮ’. ಅನಾಗರೀಕಕಾಡುಪ್ರಾಣಿಯಾಗಿ, ನಗ್ನನಾಗಿ, ಕಾಡುಮೇಡು ಅಲೆಯುತ್ತ, ಗೆಡ್ಡೆಗೆಣಸುತಿನ್ನುತ್ತಾ, ಬೇಟೆಯಾಡಿದಪ್ರಾಣಿಗಳಹಸಿಮಾಂಸ ತಿನ್ನುತ್ತಾ, ಚಿಂಪಾಂಜಿ ರೂಪದಲ್ಲಿಬದುಕು ಆರಂಭಿಸಿದಮಾನವ ಇಂದಿನಹೈ-ಫೈಯುಗದಸೊಫಿಸ್ಟಿಕೇಟೆಡ್ ನಾಗರೀಕನಾಗಲು ಕಾರಣ, ಕಾಲಚಕ್ರದೊಡನೆ ಮಿಳಿತಗೊಂಡಿರುವ ಪರಿವರ್ತನೆಯ ನಿಯಮ. ನಿಜ ಹೇಳಬೇಕೆಂದರೆ ಯುಗಯುಗಾಂತರಗಳಿಂದಲೂ ಮಾನವ [...]
ವಿಸ್ಮಯಯುತ ನಾಲ್ಕನೇ ಆಯಾಮ ಮತ್ತು ದೇವರುನನ್ನ ನದರು-Nanna Nadaru(My Perspective) - ಬುಧವಾರ ೧೧:೫೦, ಮೇ ೧೬, ೨೦೧೨ ಮೊದಲ ಮೂರು ಆಯಾಮಗಳು(dimensions) ನಮಗೆ ತಿಳಿದದ್ದೇ. ಎರಡು ಬಿಂದುಗಳನ್ನು ಸೇರಿಸಿದರೆ ಮೊದಲನೇ ಆಯಾಮ ಸಿಗುತ್ತದೆ, ಅದರಂತೆ ಒಂದು ಗೆರೆಗೆ ಅಡ್ಡಡ್ಡ ಅಂದರೆ ಪರ್ಪೆಂಡಿಕ್ಯುಲರ್ ಆಗಿ ಇನ್ನೊಂದು ಗೆರೆ ಎಳೆದರೆ ಒಂದು ಸಮತಲ ಅಂದರೆ ಎರಡನೇ ಆಯಾಮ ಸಿಗುತ್ತದೆ. ಎರಡನೇ ಆಯಾಮದಲ್ಲಿ ಅಡ್ಡ ಮತ್ತು ಉದ್ದ ಮಾತ್ರ ಅಳತೆಗಳು, ಎತ್ತರ ಇರುವದಿಲ್ಲ. ಮುಂದುವರೆದು ಮೂರು ಸಮತಲಗಳನ್ನು ಒಂದಕ್ಕೊಂದು ಪರ್ಪೆಂಡಿಕ್ಯುಲರ್ ಆಗಿ ಇರಿಸಿದರೆ, ನಮಗೆ ಮೂರನೇ ಆಯಾಮ ಸಿಗುತ್ತದೆ ಅಲ್ಲವೇ? ಅಂದರೆ ಮೂರು ಸಮತಲಗಳ ನಡುವಿನ ಸ್ಫೇಸ್. ಅದೇ ರೀತಿ ನಾಕು ಸ್ಫೇಸ್ ಒಂದಕ್ಕೊಂದು ಪರ್ಪೆಂಡಿಕ್ಯಲರ್ ಆಗಿ ಇದ್ದಿದ್ದರೆ, ಅಲ್ಲಿ ಸಿಗುವದೇ ನಾಲ್ಕನೇ ಆಯಾಮದ ಜಗತ್ತು!! ನಾಲ್ಕನೇ ಆಯಾಮವನ್ನು ಮನುಜ ಮಿದುಳಿಗೆ ಊಹಿಸಿಕೊಳ್ಳಲು ಸಾದ್ಧ್ಯವೇ ಇಲ್ಲ. ಆದರೆ ಅದರ ಇರುವಿಕೆಯಿಂದ ನಮ್ಮ ಮೂರು ಆಯಾಮಗಳ ಜಗತ್ತಿನ ಮೇಲಾಗುವ ಪರಿಣಾಮ ಊಹಿಸಿಕೊಳ್ಳಬಹುದು. ಎರಡನೇ ಆಯಾಮದಲ್ಲಿ ಬದುಕುವ ಜೀವಿಗೆ ಹೇಗೆ ನಮ್ಮ 3D ಜಗತ್ತಿನ ಇರುವಿಕೆ ಊಹೆಗೆ ನಿಲುಕದ್ದೋ ಹಾಗೆಯೇ ನಮ್ಮ ಪರಿಸ್ಥಿತಿ. ಇರುವೆಗೆ ಮೂರನೇ ಆಯಾಮ ಊಹೆಗೆ ನಿಲುಕದ್ದು ಅನ್ನುವ ನಂಬಿಕೆ ಇದೆ. ನೆಲದಿಂದ ಗೋಡೆ ಹತ್ತುವಾಗ ಇರುವೆಗೆ ಒಂದು ಸಮತಲದಿಂದ ಇನ್ನೊಂದು ಸಮತಲಕ್ಕೆ ಕಾಲಿಡುವಂತೆ ಅಸ್ಟೇ. ಮೊದಲ ಸಮತಲಕ್ಕೆ ಅಡ್ಡವಾಗಿ ತಾನು ನಡಿಯುತ್ತಿದ್ದೇನೆಂದಾಗಲಿ, ಎತ್ತರಕ್ಕೆ ಏರುತ್ತಿದ್ದೇನೆಂಬ ಪರಿಕಲ್ಪನೆಯಾಗಲಿ ಅದಕ್ಕೆ ಮೂಡದು.  ನಾಲ್ಕನೇ ಆಯಾಮದ ವಿಸ್ಮಯಗಳೇನೆಂದರೆ, ನಾಲ್ಕು ಒಂದಕ್ಕೊಂದು ಪರ್ಪೆಂಡಿಕ್ಯುಲರ್ ಇರುವ ಸ್ಪೇಸ್ಗಳ ನಡುವಿನ ಜಾಗ(ಇದನ್ನು ಹೈಪರ್ಸ್ಫೇಸ್ ಅನ್ನಬಹುದ?)ದಿಂದ ನೋಡಿದಾಗ, ನಮ್ಮ 3D ಸ್ಪೇಸ್ನ ವಸ್ತುಗಳ ಹೊರ ಒಳ ಭಾಗಗಳು ಒಟ್ಟಿಗೆ ತೋರುತ್ತದೆ. ಅಂದರೆ ಒಂದು ಸಾಲಿಡ್ ಚೆಂಡಿನ ಹೂರಣದೊಳಗೆ ಮತ್ತೊಂದು ಸಾಲಿಡ್ ಆದ, ಕ್ಯೂಬ್ ಒಂದನ್ನು ಹುದುಗಿಸಲಾಗಿದೆ ಅಂದುಕೊಳ್ಳಿ, ಹೈಪಸ್ಪೇಸ್ನಿಂದ ನೋಡಿದಾಗ ಚೆಂಡು, ಅದರೊಳಗಿನ ಹೂರಣ, ಮತ್ತು ಅದರಲ್ಲಿ ಹುದುಗಿಸಿದ ಕ್ಯೂಬ್ ಎಲ್ಲವೂ ಒಟ್ಟಿಗೆ ತೋರುತ್ತದೆ. ಇದು ಹೇಗೆಂದರೆ, ಸಮತಲದ ಮೇಲೊಂದು, squareನ್ನು ಚಿತ್ರಿಸಲಾಗಿದೆ ಅನ್ನಿ. ಸಮತಲದ ಮೇಲಿಂದ ನೋಡಿದಾಗ, ಅದರ ದಂಡೆಗಳು ಅಂದರೆ edges ಮಾತ್ರ ಕಾಣುತ್ತದೆ. ಅದೇ ಮೂರನೇ ಆಯಾಮದ ಎತ್ತರದಿಂದ ನೋಡಿದಾಗ ಆ ಸರ್ಕಲ್ ನ ಒಳಭಾಗ, ಅದರಲ್ಲಿ ತುಂಬಲಾದ ಬಣ್ಣ ಎಲ್ಲವೂ ತೋರುತ್ತದೆ. ಅದೇ ರೀತಿ ಮೂರನೇ ಆಯಾಮದ ವಸ್ತುಗಳ ಒಳ ಮತ್ತು ಹೊರ ಭಾಗಗಳು ನಾಲ್ಕನೇ ಆಯಾಮದಿಂದ ಒಟ್ಟಿಗೇ ತೋರುತ್ತವೆ.   ಇನ್ನೊಂದು ಉದಾಹರಣೆ, ಪೇಪರ್ ಒಂದರ ಮೇಲೆ clockwise ಆಗಿ ಮುಕ್ಕಾಲು ಸರ್ಕಲ್ ಹಾಕಿ, ಅದರ ತುದಿಗೆ ಬಾಣದ ಗುರುತು ಹಾಕಿ. ಈ ತಿರುಚು ಬಾಣದ ದಿಕ್ಕನ್ನು anticlockwise ಬದಲಾಯಿಸಬೇಕೆಂದರೆ, ಅದರ ಬಾಣದ ಗುರುತನ್ನು ಅಳಿಸಿ, ಅದರ ಬಾಲಕ್ಕೆ ಸಿಕ್ಕಿಸಬೇಕಲ್ಲವೇ? ಆದರ ಏನನ್ನೂ ಬದಲಾಯಿಸದೇ ಅದರ ದಿಕ್ಕನ್ನು ಬದಲಾಯಿಸಲು ಸಾಧ್ಯವೇ? ಸಾಧ್ಯ ಹೇಗೆಂದರೆ ಪೇಪರ್ transparent ಇದೆ ಅನ್ಕೊಳ್ಳಿ, ಆಗ ಪೇಪರ್ ಅನ್ನು flip ಅಂದರೆ ಅದರ ಬೆನ್ನು ಭಾಗವನ್ನು ಮೇಲೆ ಮಾಡಿದರೆ ಆಯ್ತು, ತಿರುಚು ಬಾಣದ ದಿಕ್ಕು ಈಗ anticlockwise ಆಗುತ್ತದೆ. ಥೇಟ್ ಇದೇ ರೀತಿ, ಈಗ ತುದಿಯೊಂದಕ್ಕೆ ಬಾಣದ ಗುರುತಿರುವ ಸ್ಪ್ರಿಂಗ್ ಒಂದನ್ನು ತೆಗೆದುಕೊಳ್ಳಿ. ಸ್ಪ್ರಿಂಗ್ನ ತಿರುಚಿನ ದಿಕ್ಕನ್ನು ಬದಲಾಯಿಸಲು ಅದರ ಬಾಣವನ್ನು ಕಿತ್ತು, ಕೆಳ ತುದಿಗೆ ಅಂಟಿಸಬೇಕು ಮತ್ತು ಮೇಲಿಂದ ಕೆಳಗೆ ಬರಬೇಕು. ಆದರೆ ನಾಲ್ಕನೇ ಆಯಾಮದಲ್ಲಿ ಸ್ಪೇಸನ್ನು flip ಮಾಡಿದರೆ ಸಾಕು, ಸ್ಪ್ರಿಂಗನ್ನು ಮುಟ್ಟದೆಯೇ ಅದರ ತಿರುಚು ದಿಕ್ಕನ್ನು ಬದಲಾಯಿಸಿ ಬಿಡಬಹುದು. ಸಮತಲದ ಮೂಲಕ 3ಡಿ ಚೆಂಡೊಂದು ಹಾಯ್ದು ಹೋಗುವಾಗ, ಸಮತಲದ ಮೇಲಿನ 2ಡಿ ಜೀವಿಗೆ ಅದು ಹೇಗೆ ತೋರುತ್ತದೆ? ಶೂನ್ಯದಿಂದ ಸರ್ಕಲ್ ಒಂದು ಹುಟ್ಟಿ, ಅದು ದೊಡ್ಡದಾಗುತ್ತ ಹೋಗಿ, ಒಂದು ಗಾತ್ರ ತಲುಪಿದ ಮೇಲೆ, ಮತ್ತೆ ಚಿಕ್ಕದಾಗುತ್ತ ಹೋಗಿ, ಮಾಯವಾಗುತ್ತದೆ. ಅದೇ ರೀತಿ 4ಡಿಯ ಹೈಪರ್ಚೆಂಡು 3ಡಿ ಸ್ಪೇಸ್ನಲ್ಲಿ ಹಾಯ್ದು ಹೋಗುವಾಗ ಹೇಗೆ ತೋರುತ್ತದೆಯೆಂದರೆ, ಶೂನ್ಯದಿಂದ ಚೆಂಡೊಂದು ಹುಟ್ಟಿ, ಗಾತ್ರದಲ್ಲಿ ದೊಡ್ಡದಾಗುತ್ತ, ಒಂದು ಗಾತ್ರ ತಲುಪಿದ ಮೇಲೆ, ಮತ್ತೆ ಚಿಕ್ಕದಾಗುತ್ತ ಹೋಗಿ, ಮಾಯವಾಗಿ ಬಿಡುತ್ತದೆ. ನೂರಾರು ವರ್ಷ ತಪಸ್ಸುಗೈದ ರುಷಿಮುನಿಗೆ ದರುಶನ ನೀಡಿ ಮಾಯವಾಗುವ ದೇವತೆಯಂತೆ!! ಹಿಂದೂ ಪುರಾಣಗಳ ದೇವತೆಗಳ ಕಲ್ಪನೆ ನಿಜವಿರುವದಾದರೆ ಅವರು 4D ಜೀವಿಗಳಾಗಿರಬೇಕು!
ಜೊತೆಯಲ್ಲಿಲ್ಲದವಳ ನೆನೆದು, ನೆನೆದುಹೊದೆ ಮಳೆಯಲಿ ಅವಳ ಜೊತೆಯಲಿಸಂಪದ - Sampada - ಬುಧವಾರ ೦೮:೪೮, ಮೇ ೧೬, ೨೦೧೨ ನೆನೆದಿರುವೆ ಪ್ರತೀದಿನವು ಜೊತೆಯಲ್ಲಿಲ್ಲದವಳ, ನೆನೆದು ನೆನೆದು ಕರಗದ ಕಲ್ಲಾದೆ ಮಳೆಯಲಿ ಅವಳ ನೆನಪಲಿ ನಾನಿಷ್ಟು ನೆನೆಯಲು ನಿನ್ನ ಕಣ್ಣೆ ಕಾರಣ ತುಟಿಗಳೆ ಪ್ರೆರಣ ಕಣ್ಗಳೆರಡು ಕಂಡು ನೆನೆಯುವಂತೆ ಮಾಡಿತು ತುಟಿಗಳೆರಡು ಬಂದು ಚಳಿಯನ್ನೆ ಓಡಿಸಿತು ಎಷ್ತು ನೆನೆದರು ಚಳಿಯಿಲ್ಲಾ ತುಟಿಗಳೇಕೊ ಬಿಡುತ್ತಿಲ್ಲಾ ಜೊತೆಯಲ್ಲಿಲ್ಲದವಳ ನೆನೆದು ನೆನೆದುಹೊದೆ ಮಳೆಯಲಿ ಅವಳ ನೆನಪಲಿ, ತುಂತುರು ಅನಿಗಳು ನೆನೆಯಲೂ ಬಿಡುತ್ತಿಲ್ಲಾ ಚಳಿಯನ್ನೂ ತರುತ್ತಿಲ್ಲಾ ಕಣ್ಗಳೂ ಕಾಣುತ್ತಿಲ್ಲಾ ತುಟಿಗಳೂ ಸಿಗುತ್ತಿಲ್ಲಾ, ಮಳೆಗಾಗಿ ಕಾದಿರುವೆ ಜೊತೆಯಲ್ಲಿಲ್ಲದವಳ ನೆನೆದು. ನೀವು ಓಮ್ಮೆ  ಮುಂದೆ ಓದಿ...
ಜೊತೆಯಲ್ಲಿಲ್ಲದವಳ ನೆನೆದು, ನೆನೆದುಹೊದೆ ಮಳೆಯಲಿ ಅವಳ ಜೊತೆಯಲಿಸಂಪದ - Sampada - ಬುಧವಾರ ೦೮:೪೮, ಮೇ ೧೬, ೨೦೧೨ ನೆನೆದಿರುವೆ ಪ್ರತೀದಿನವು ಜೊತೆಯಲ್ಲಿಲ್ಲದವಳ, ನೆನೆದು ನೆನೆದು ಕರಗದ ಕಲ್ಲಾದೆ ಮಳೆಯಲಿ ಅವಳ ನೆನಪಲಿ ನಾನಿಷ್ಟು ನೆನೆಯಲು ನಿನ್ನ ಕಣ್ಣೆ ಕಾರಣ ತುಟಿಗಳೆ ಪ್ರೆರಣ ಕಣ್ಗಳೆರಡು ಕಂಡು ನೆನೆಯುವಂತೆ ಮಾಡಿತು ತುಟಿಗಳೆರಡು ಬಂದು ಚಳಿಯನ್ನೆ ಓಡಿಸಿತು ಎಷ್ತು ನೆನೆದರು ಚಳಿಯಿಲ್ಲಾ ತುಟಿಗಳೇಕೊ ಬಿಡುತ್ತಿಲ್ಲಾ ಜೊತೆಯಲ್ಲಿಲ್ಲದವಳ ನೆನೆದು ನೆನೆದುಹೊದೆ ಮಳೆಯಲಿ ಅವಳ ನೆನಪಲಿ, ತುಂತುರು ಅನಿಗಳು ನೆನೆಯಲೂ ಬಿಡುತ್ತಿಲ್ಲಾ ಚಳಿಯನ್ನೂ ತರುತ್ತಿಲ್ಲಾ ಕಣ್ಗಳೂ ಕಾಣುತ್ತಿಲ್ಲಾ ತುಟಿಗಳೂ ಸಿಗುತ್ತಿಲ್ಲಾ, ಮಳೆಗಾಗಿ ಕಾದಿರುವೆ ಜೊತೆಯಲ್ಲಿಲ್ಲದವಳ ನೆನೆದು. ನೀವು ಓಮ್ಮೆ  ಮುಂದೆ ಓದಿ...
ಸುಲಭದ ಮಾತಲ್ಲಸಂಪದ - Sampada - ಬುಧವಾರ ೦೧:೫೪, ಮೇ ೧೬, ೨೦೧೨
ವರುಷಗಳುರೊಳಿದರೆ
ಹರುಷದ ಹದಿಹರಯ ಬರುವುದೆಂದು
ಹೇಳಿದ್ದ ಕೇಳಿದ್ದ ಮಾತದು ದಿಟ, ಸುಳ್ಲಾಗಳಿಲ್ಲ
ಆಗೆಂದ ಮಾತ್ರಕ್ಕೆ,
ದೊಡ್ದವಾರಗುವಿದಿಲ್ಲ ಬರಿ
ವಯಸ್ಸು ಹೆಚ್ಛಾದಂತೆಲ್ಲ
ಹಿರಿಯಾರಗುವುದಶ್ಟು ಸುಲಭದ ಮಾತಲ್ಲ!
ಮುತ್ಸದ್ದಿಯಾಗುವುದಂತೊ ಕಬ್ಬಿಣದ ಕಡಲೆ, ಬೇರೆ ಮಾತಿಲ್ಲ.
no short cuts ಸಂಶಯವಿಲ್ಲ 
ಸುಲಭದ ಮಾತಲ್ಲಸಂಪದ - Sampada - ಬುಧವಾರ ೦೧:೫೪, ಮೇ ೧೬, ೨೦೧೨
ವರುಷಗಳುರೊಳಿದರೆ
ಹರುಷದ ಹದಿಹರಯ ಬರುವುದೆಂದು
ಹೇಳಿದ್ದ ಕೇಳಿದ್ದ ಮಾತದು ದಿಟ, ಸುಳ್ಲಾಗಳಿಲ್ಲ
ಆಗೆಂದ ಮಾತ್ರಕ್ಕೆ,
ದೊಡ್ದವಾರಗುವಿದಿಲ್ಲ ಬರಿ
ವಯಸ್ಸು ಹೆಚ್ಛಾದಂತೆಲ್ಲ
ಹಿರಿಯಾರಗುವುದಶ್ಟು ಸುಲಭದ ಮಾತಲ್ಲ!
ಮುತ್ಸದ್ದಿಯಾಗುವುದಂತೊ ಕಬ್ಬಿಣದ ಕಡಲೆ, ಬೇರೆ ಮಾತಿಲ್ಲ.
no short cuts ಸಂಶಯವಿಲ್ಲ 
ಗೆಳೆತನಛಾಯಾಕನ್ನಡಿ - ಬುಧವಾರ ೧೧:೫೮, ಮೇ ೧೬, ೨೦೧೨ ಅದೊಂದು ಅನಿರೀಕ್ಷಿತ ಬೇಟಿ ಗೆಳೆಯ ಸಿಕ್ಕಿದ್ದ ಇಪ್ಪತ್ತು ವರ್ಷಗಳ ನಂತರ ಉಭಯ ಕುಶಲೋಪರಿ, ಕಷ್ಟ ಸುಖ, ಉದ್ಯೋಗ, ಮದುವೆ ಆಚಾರ ವಿಚಾರಗಳು ಇಣುಕಿತ್ತು ಕೈ ಕುಲುಕಿ, ಮನಕಲಕಿ ಅತಿ ವಿನಯದ ನಾಗರೀಕತೆಯ ತೆರೆಯೊಳಗೆ ಕೃತಕತೆ, ಇಗೋಗಳ ಪೊರೆಯೊಳಗೆ. ಬಾಲ್ಯದಲ್ಲಿ ಜೊತೆಗೂಡಿ ಆಡಿದ್ದು, ತಿಂದಿದ್ದು, ರೇಗಿಸಿದ್ದು, ಕಿಚಾಯಿಸಿದ್ದು ಅರಳಲು ಕಾತರಿಸುವ ಮೊಗ್ಗಿನ ಹಾಗೆ ಎಲೆಯಿಂದ ಜಾರಿದ ಇಬ್ಬನಿ ನಯವಾಗಿ ಹೂದಳದಲ್ಲಿ ಇಳಿದ ಹಾಗೆ. ಎಲ್ಲವೂ ತೆರೆದ ಬೆತ್ತಲು ಮನಸ್ಸಿನೊಳಗೆ ಹಸಿ ಹಸಿ ಮುಗ್ದತೆಯೊಳಗೆ. ಅದೆಲ್ಲವೂ ಅಂದು ಹೂ ಪರಿಮಳದಂತೆ ವಾಸ್ತವ. ಇಂದು ವಿದೇಶಿ ಪರಿಮಳದಂತೆ ಕೃತಕ. ಬಾಲ್ಯದ ದಟ್ಟ ಸ್ನೇಹದ ಕುಚೇಲಗಳು ಇಂದು ಆತ್ಮಿಯತೆ ಆಚೆಗಿನ ಹೊರನೋಟದ ಚೇಲಗಳು.
ಈ ಕವನವನ್ನು ಬರೆದಿದ್ದು 1997 ರಲ್ಲಿ. ಆಗ ನನ್ನೊಳಗಿನ ಬರವಣಿಗೆಯ ತುಡಿತವೇ ಇಂಥ ಪುಟ್ಟ ಪುಟ್ಟ ಕವನಗಳು. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಶಿವು.ಕೆ
ರಜತ-ಸ್ನೇಹ-ಸಮ್ಮಿಲನಸುಪ್ತದೀಪ್ತಿ Inner Light - ಬುಧವಾರ ೧೧:೩೯, ಮೇ ೧೬, ೨೦೧೨ ಅತ್ತ ಮರೆಯುವ ಮುನ್ನ ಮತ್ತೆ ಬೆರೆಯುವ ಚೆನ್ನ ಅವಕಾಶ ಹೊಂದಿಸುತ ಕರೆಯುತಿರುವೆ
ಬನ್ನಿ ನೀವುಗಳೆಲ್ಲ ಮನದ ಮೂಲೆಯ ಮೆಲ್ಲ ತಡವುತ್ತ ನೆನಹುಗಳ ಕರೆದುತೆರೆದು
ಸೇರಿ ಕಲೆಯುತ ನಗುವ ಹರುಷ ಹಂಚುತ ನೆನೆವ ಕಳೆದ ವರುಷಗಳನ್ನು ಗುಣಿಸಿಗಣಿಸಿ
ಇಂದು ತರತಮವಿಲ್ಲ ಸಂದ ದಿನಗಳನೆಲ್ಲ ಹೊರಳಿ ಕುಲುಕಿಸಿ ಬೆದಕಿ ತೆಗೆವ, ಬನ್ನಿ
ಮೊದಲ ಹೆಜ್ಜೆಯನಿಟ್ಟು ಬಗಲಿನೊಜ್ಜೆಯ ಬಿಟ್ಟು ಮರಳಿ ಬೆರೆಯುವ ನಿಲುವ ತಳೆವ, ಬನ್ನಿ
ಕೆಚ್ಚುಗುಚ್ಚುಗಳಿರದ ಬೆಚ್ಚನೆಯ ಮಕರಂದ ತುಂಬುಹೃದಯದಲೆಂದು ಉಳಿಸೆ ಬನ್ನಿ
ಪಡೆದ ಪದವಿಗೆ ರಜತ ನಡೆದ ಹಾದಿಯ ಸವೆತ ಎಲ್ಲ ಮೆಲ್ಲುತ ಹುರುಪುಗೊಳುವ ಬನ್ನಿ
(೨೨-ಎಪ್ರಿಲ್-೨೦೧೨)
ಥಟ್ ಅಂತ ಹೇಳಿ - ಲಿಮ್ಕ ದಾಖಲೆ!ಸಂಪದ - Sampada - ಬುಧವಾರ ೧೧:೨೩, ಮೇ ೧೬, ೨೦೧೨ ಗೆಳೆಯರೆ!
ನಿಮಗೆಲ್ಲ ತಿಳಿದಿರುವ ಹಾಗೆ ಚಂದನ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಕನ್ನಡ ಕ್ವಿಜ಼್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮ ಈಗ ಅಧಿಕೃತವಾಗಿ ಲಿಮ್ಕ ದಾಖಲೆಯನ್ನು ಸೇರಿದೆ. ಸಂಬಂಧಿತ ದಾಖಲೆ ಪತ್ರವನ್ನು ಲಗತ್ತಿಸಿದ್ದೇನೆ. ಈ ಬಗ್ಗೆ ಮಾಹಿತಿಯು ೨೦೧೨ ಆವೃತ್ತಿಯ ಲಿಮ್ಕ ಪುಸ್ತಕದಲ್ಲಿ ಬಂದಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಸುದೀರ್ಘ ಕಾಲ ಕ್ವಿಜ಼್ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಈ ದಾಖಲೆ ಸಂದಿದೆ.
 ಮುಂದೆ ಓದಿ...
ಕಣ್ಣ ಅಂಚಿನಲಿಸಂಪದ - Sampada - ಬುಧವಾರ ೦೯:೩೫, ಮೇ ೧೬, ೨೦೧೨
ಕಣ್ಣ ಅಂಚಿನಲಿ ಒಲವ ನೆನಪೊಂದು
ಬಳಿ ಸಾರಿದೆ ಧರೆ ನೋಡಿದೆ
ಹೃದಯ ಗೂಡಿಗೆ ಸಿಡಿಲು
ತಾ ಬಡಿದು ನೋವು ಮಳೆಯಾಗಿ
ಒಲವು ಕುರುಡಾಗಿ
ರಜತ-ಸ್ನೇಹ-ಸಮ್ಮಿಲನಹರಿವ ಲಹರಿ Hariva Lahari - ಬುಧವಾರ ೦೯:೧೫, ಮೇ ೧೬, ೨೦೧೨
ಅತ್ತ ಮರೆಯುವ ಮುನ್ನ ಮತ್ತೆ ಬೆರೆಯುವ ಚೆನ್ನ ಅವಕಾಶ ಹೊಂದಿಸುತ ಕರೆಯುತಿರುವೆ ಬನ್ನಿ ನೀವುಗಳೆಲ್ಲ ಮನದ ಮೂಲೆಯ ಮೆಲ್ಲ ತಡವುತ್ತ ನೆನಹುಗಳ ಕರೆದುತೆರೆದು ಸೇರಿ ಕಲೆಯುತ ನಗುವ ಹರುಷ ಹಂಚುತ ನೆನೆವ ಕಳೆದ ವರುಷಗಳನ್ನು ಗುಣಿಸಿಗಣಿಸಿ ಇಂದು ತರತಮವಿಲ್ಲ ಸಂದ ದಿನಗಳನೆಲ್ಲ ಹೊರಳಿ ಕುಲುಕಿಸಿ ಬೆದಕಿ ತೆಗೆವ, ಬನ್ನಿಮೊದಲ ಹೆಜ್ಜೆಯನಿಟ್ಟು ಬಗಲಿನೊಜ್ಜೆಯ ಬಿಟ್ಟು ಮರಳಿ ಬೆರೆಯುವ ನಿಲುವ ತಳೆವ, ಬನ್ನಿ ಕೆಚ್ಚುಗುಚ್ಚುಗಳಿರದ ಬೆಚ್ಚನೆಯ ಮಕರಂದ ತುಂಬುಹೃದಯದಲೆಂದು ಉಳಿಸೆ ಬನ್ನಿ ಪಡೆದ ಪದವಿಗೆ ರಜತ
ಗುಣಾತ್ಮಕ ಶಿಕ್ಷಣಕ್ಕಾಗಿ ಸಂಪನ್ಮೂಲ ಡೈರಕ್ಟರಿಸಂಪದ - Sampada - ಬುಧವಾರ ೦೮:೫೪, ಮೇ ೧೬, ೨೦೧೨ ಗುಣಾತ್ಮಕ ಶಿಕ್ಷಣಕ್ಕಾಗಿ ಸಂಪನ್ಮೂಲ ಡೈರಕ್ಟರಿ ಯಾವುದೇ ದೇಶದ ಅಭಿವೃದ್ದಿಯ ಮೇಲೆ ಆ ದೇಶದ ಸಂಪನ್ಮೂಲಗಳು ಹೇಗೆ ಪ್ರಭಾವ ಬೀರುತ್ತವೆಯೋ ಹಾಗೆಯೇ ಶಿಕ್ಷಣದ ಅಭಿವೃದ್ದಿ ಹಾಗೂ ಸಾಕಾರದಲ್ಲಿ ಆಯಾ ಶಾಲೆಗಳು ಹೊಂದಿರುವ ಸಂಪನ್ಮೂಲಗಳು ಪ್ರಬಾವ ಬೀರುತ್ತವೆ. ದೇಶದ ಅಭಿವೃದ್ದಿಯನ್ನು ಆ ದೇಶವು ಹೊಂದಿರುವ ಸಂಪನ್ಮೂಲಗಳು ಹಾಗೂ ತಲಾದಾಯ, ಜನರ ಜೀವನಮಟ್ಟದ ಮೂಲಕ ಅಳತೆ ಮಾಡಿದರೆ ಹಾಗೆ ಒಂದು ಶಾಲೆಯ ಶಿಕ್ಷಣದ ಗುಣಮಟ್ಟದ ಬಗ್ಗೆ ಆ ಶಾಲೆ ಹೊಂದಿರುವ ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಪ್ರಗತಿಯನ್ನು ಅವಲಂಬಿಸಿದೆ. ಒಟ್ಟಿನಲ್ಲಿ ಒಂದು ದೇಶ/ರಾಜ್ಯ, ಹಾಗೂ ಶಾಲೆಯಾಗಲಿ ಅಭಿವೃದ್ದಿ ಪಥದಡಗೆ ಸಾಗುವಲ್ಲಿ ಸಂಪನ್ಮೂಲಗಳು ತೀರಾ ಅಗತ್ಯವಾಗಿದೆ. ಶಿಕ್ಷಣದಲ್ಲಿ ಸಂಪನ್ಮೂಲ ಡೈರಕ್ಟರಿಯ ಪಾತ್ರದ ಕುರಿತು ಚರ್ಚಿಸುವುದು ಇಂದು ತುಂಬಾ ಅಗತ್ಯವಾಗಿದೆ. ಸಂಪನ್ಮೂಲಗಳನ್ನು ನಾವು ಭೌತಿಕ ಸಂಪನ್ಮೂಲ ಹಾಗೂ ಮಾನವ ಸಂಪನ್ಮೂಲಗಳೆಂದು ವಿಂಗಡಿಸುತ್ತೆವೆ .  ಮುಂದೆ ಓದಿ...
ಸೇವಾ ಕ್ಷೇತ್ರದಿಂದ ವಿಮುಖ, ಶಿಕ್ಷಣ ಕ್ಷೇತ್ರಹೊನ್ನೆವಾಣಿ - ಬುಧವಾರ ೦೭:೩೨, ಮೇ ೧೬, ೨೦೧೨ ಭಾರತ ಸರ್ಕಾರ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ-2009ನ್ನು ಜಾರಿಗೊಳಿಸಿದೆ. ಆ ಮೂಲಕ ದೇಶದ ಯಾವುದೇ ರಾಜ್ಯಗಳಲ್ಲಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹತ್ವಾಕಾಂಕ್ಷೆ ಮೆರೆದಿದೆ. ಈ ಸಂಬಂದ ಅಗಸ್ಟ್ 27, 2009ರಂದು ಹೊರಡಿಸಿರುವ ಗೆಜೆಟ್ ಸಂಖ್ಯೆ-39ರಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಕಾಯಿದೆ-2009ನ್ನು ಪ್ರಕಟಿಸಿದೆ. ಕಾಯಿದೆಯ ಅಧ್ಯಾಯ 7ರ ಶೆಡ್ಯೂಲಿನಲ್ಲಿ ಸೆಕ್ಷನ್ 19 ಹಾಗೂ 25ರಲ್ಲಿ ನಮ್ಮ ಶಾಲಾ ಮಕ್ಕಳಿಗೆ ಎಂತಹ ಕಟ್ಟಡಗಳನ್ನು ಒದಗಿಸಬೇಕೆಂಬ ಸ್ಪಷ್ಟ ನಿರ್ದೇಶನವಿದೆ. ಆದರೆ ಇಂದು ಶಿಕ್ಷಣ ರಂಗವೇ ವಾಣಿಜ್ಯೀಕರಣಗೊಂಡು, ಶಿಕ್ಷಣೋದ್ಯಮವಾಗುತ್ತಿದೆ. ಶಿಕ್ಷಣ ಈಗ ಸೇವಾ ಕ್ಷೇತ್ರದಿಂದ ವಿಮುಖಗೊಳ್ಳುತ್ತಿದ್ದು, ಬಹುತೇಕ ಉದ್ಯಮ ರಂಗದ ತೆಕ್ಕೆಗೊಳಪಟ್ಟಿದೆ. ಮಾತೃ ಭಾಷೆಯಲ್ಲಿ ವ್ಯಾಸಂಗ ಮಾಡಿದರೆ ಉತ್ತಮ ಉದ್ಯೋಗ ದೊರೆಯುವುದಿಲ್ಲ ಎಂಬ ಕಾರಣಕ್ಕಾಗಿ ಆಂಗ್ಲ ಭಾಷಾ ಮಾಧ್ಯಮದತ್ತ ಮಕ್ಕಳು, ಪಾಲಕರು ಆಕರ್ಷಿತರಾಗುತ್ತಿರುವುದು ಶಿಕ್ಷಣವನ್ನು ಉದ್ಯಮವಾಗಿ ಪರಿವರ್ತಿಸುವವರ ಪಾಲಿಗೆ ಬಹುದೊಡ್ಡ ವರದಾನವಾಗಿದೆ. ಕ್ಯಾಪಿಟೇಷನ್, ಡೊನೇಷನ್ಗಳ ಸಂಗ್ರಹಕ್ಕಾಗಿಯೇ ಇಂದು ನಾಡಿನ ಹಳ್ಳಿ -ಹಳ್ಳಿಗಳಲ್ಲಿ ತಲೆ ಎತ್ತಿರುವ ಖಾಸಗಿ ಶಾಲೆಗಳು, ಸರ್ಕಾರ ರೂಪಿಸಿರುವ ಹಲವಾರು ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಪಾಲಕರಲ್ಲಿನ ಆಂಗ್ಲಭಾಷಾ ಪ್ರೀತಿಯನ್ನೇ ತಮ್ಮ ಬಂಡವಾಳವಾಗಿಸಿಕೊಂಡಿರುವ ಖಾಸಗಿ ಶಾಲೆಗಳು ನಾನಾ ಹಂತಗಳಲ್ಲಿ ಮಕ್ಕಳ ಬೇಕು-ಬೇಡಗಳನ್ನು ನಿರ್ಲಕ್ಷಿಸುತ್ತಿವೆ. ಶಿಕ್ಷಣ ಕಾಯಿದೆಯ ಮಾರ್ಗಸೂಚಿಯ ಉಲ್ಲಂಘನೆ ನಿರಾತಂಕವಾಗಿ ನಡೆಯುತ್ತಲೇ ಇದೆ. ಕನಿಷ್ಠ ಅವಶ್ಯಕತೆಗಳಾದ ಸಮರ್ಪಕ ಗಾಳಿ-ಬೆಳಕು ಸುಳಿದಾಡುವಂತಹ ಸುಸಜ್ಜಿತ ಕಟ್ಟಡ, ಚಳಿ-ಮಳೆ-ಬಿಸಿಲಿನಿಂದ ರಕ್ಷಣೆ ಒದಗಿಸುವಂತಹ ಸರ್ವ ಋತು ಕಟ್ಟಡ, ಆಟದ ಬಯಲು, ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳಿರಬೇಕೆಂಬ ನಿಯಮಗಳನ್ನು ಬಹುತೇಕ ಶಾಲೆಗಳು ಗಾಳಿಗೆ ತೂರುತ್ತಿವೆ. ಅತಿ ಹೆಚ್ಚು ಬಿಸಿಲಿನ ಪ್ರದೇಶಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅಲ್ಲಿನ ತಾಪಮಾನಕ್ಕೆ ಹೊಂದಿಕೆಯಾಗುವಂತಹ ಕಟ್ಟಡಗಳಿಗೆ ಆದ್ಯತೆ ನೀಡಬೇಕು, ಇಲ್ಲದಿದ್ದರೆ ಎಳೆಯ ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮಗಳುಂಟಾಗುತ್ತವೆ. ಆದರೆ ಈ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಓದುತ್ತಿರುವ ಮಕ್ಕಳು ತಮ್ಮ ಕನಸುಗಳನ್ನು ಕಟ್ಟಿಕೊಳ್ಳಲು, ಭವಿಷ್ಯ ರೂಪಿಸಿಕೊಳ್ಳಲು ಕಿಷ್ಕಂದದಂತಹ ಕಟ್ಟಡಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ರಾಜ್ಯದ ಕೆಲವೆಡೆಯ ಶಾಲೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲ. ಕೆಲವು ಶಾಲೆಗಳು ಬಾಡಿಗೆಗೆ ಪಡೆದ ಇಕ್ಕಟ್ಟಾದ ಮನೆಗಳಲ್ಲಿ ನಡೆಯುತ್ತಿವೆ. ಬಿದಿರು, ಬೊಂಬುಗಳಿಂದ ನಿರ್ಮಿಸಿದ ಗೋಡೆಗಳ ಮೇಲೆ ತಗಡುಗಳನ್ನು ಹಾಕಿ ಸುರಿವ ಬಿಸಿಲು, ಝಳದ ನಡುವೆ ಮಕ್ಕಳು ಓದು ಮುಂದುವರಿಸಬೇಕಾಗುತ್ತದೆ. ಬಹಳಷ್ಟು ಖಾಸಗಿ ಶಾಲೆಗಳಿಗೆ ಆಟದ ಬಯಲಂತೂ ಇರುವುದೇ ಇಲ್ಲ. ಶೌಚಾಲಯಗಳು ಇದ್ದರೂ ಉಪಯೋಗಿಸಲು ಬಾರದಂತಿರುತ್ತವೆ. ನೀರಿನ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆಗಳೂ ಇರುವುದಿಲ್ಲ.
ನಡೆಯುತ್ತಲೇ ನಿಂತವರು, ನಿಂತೂ ನಡೆವವರು….ಓ ನನ್ನ ಚೇತನಾ... - ಬುಧವಾರ ೦೨:೪೮, ಮೇ ೧೬, ೨೦೧೨ ನದಿ ಹರೀತಿದೀನಿ ಅಂದುಕೊಳ್ಳತ್ತೆ ಉಹು… ಅದು, ಉಗಮ – ಅಂತಗಳ ನಡುವೆ ನಿಂತಿದೆ. ನಾವು ಬಾಳುವೆ ನಡೆಸ್ತಿದೀವಿ ಅಂದುಕೊಳ್ತೀವಿ. ತಾವೋ ಹೇಳುತ್ತೆ, ‘ಬಾಳು ಅದರ ಪಾಡಿಗೆ ನಡೆಯುತ್ತೆ. ಅಸ್ತಿತ್ವ ಅದರ ಕಾಳಜಿ ವಹಿಸತ್ತೆ.’ ಬಾಳು, ಹುಟ್ಟು – ಸಾವುಗಳ ನಡುವೆ ನಿಂತಿದೆ. ನಾವು ನಡೆದರೂನು ನಿಂತರೂನು ಅದು ಶತಸ್ಸಿದ್ಧವೇ. ~ ಅಹಂಕಾರ ಇರೋವನಿಗೆ ಸಮುದ್ರದಲ್ಲಿ ಅಲೆಗಳ ವಿರುದ್ಧ ಈಜೋ ಆಸೆ. ಹರಿವಿನೊಳಗೆ ಒಂದಾಗಿ ಹರಿದರೆ ಹಮ್ಮಿಗೆ ತೃಪ್ತಿ ಎಲ್ಲಿ? ಮರದ ಕುಂಟೆ ಹರಿವಿಗೆ ತನ್ನ ಕೊಟ್ಟುಕೊಂಡು, ಅದು [...]
೧ ೨ ೩ ೪ ೫ ೬ ೭ ೮ ೯ ೧೦ ಮುಂದೆ› ಕೊನೆ»
|