ಕನ್ನಡಲೋಕ

೧೦ ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦ ಮುಂದೆ› ಕೊನೆ»


ನೆಂಟ್ರ್ ಉಪ್ಚಾರ… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 14
ಕುಂದಾಪ್ರ ಕನ್ನಡ - ಮಂಗಳವಾರ ೧೦:೩೪, ಮೇ ೨೧, ೨೦೧೩

ಕುಟ್ಟಿ ಮದಿ ಆಯ್ ಐದ್ ವರ್ಷ ಆಯ್ತ್…ಆ ಖುಷಿಯಗೆ ಕುಟ್ಟಿ ಹೆಂಡ್ತಿ ಹತ್ರ ಹೇಳ್ದಾ… “ನಮ್ಮ ಮದಿ ಆಯಿ 5 ವರ್ಷ ಆಯ್ತ್ ಕಾಣ್… ನಿಂಗ್ ಎಂತಾರು ಆಸಿ ಇದ್ರ್ ಹೇಳ್” ಹೆಂಡ್ತಿ ಸಿಕ್ಕದ್ದೇ ಚಾನ್ಸ್ ಅಂದ್ಕಂಡ್ ಹೇಳಿದ್ಲ್… “ಹ್ವಾಯ್… ನಮ್ಮದಿ ಆಯಿ ಇಷ್ಟ್ ಸಮಿ ಆಯ್ತ್ ಹೌದ… ನನ್ನ್ ಯಾವ್ದಾರೂ ಕ್ವಾಷ್ಟ್ಲೀ ಜಾಗಕ್ಕ್ ಒಂದ್ಸಲ ಆರೂ ಕರ್ಕಂಡ್ ಹೊಯಿರ್ಯಾ? ಇವತ್ತಾರೂ ಕರ್ಕಂಡ್ ಹೋಯ್ನಿ ಕಾಂಬ” ಕುಟ್ಟಿ ಅಲ್ಲೇ ಇದ್ದ ಅವ್ನ್ ಅಮ್ಮನ ಕರ್ದ್ ಹೇಳ್ದ… “ಅಮ್ಮಾ… […]


ಚಂದ್ರಚೂಡ ಶಿವಶಂಕರ ಪಾರ್ವತಿರಮಣನೆ ನಿನಗೆ ನಮೋ ನಮೋ
ದಾಸ ವಾಣಿ - ಮಂಗಳವಾರ ೧೦:೩೪, ಮೇ ೨೧, ೨೦೧೩


ಚಂದ್ರಚೂಡ ಶಿವಶಂಕರ ಪಾರ್ವತಿರಮಣನೆ ನಿನಗೆ ನಮೋ ನಮೋ

ಸುಂದರ ಮೃಗವರ ಪಿನಾಕಧನುಕರ ಗಂಗಾತೀರ ಗಜಚರ್ಮಾಂಬರಧರ

ನಂದಿವಾಹನಾನಂದದಿಂದ ಮೂರ್ಜಗದಿ ಮೆರೆವ ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರ ನೀನೆ
ಇಂದಿರೇಶ ಶ್ರೀರಾಮನ ಪಾದವ ಚಂದದಿ ಪೊಗಳುವ ನೀನೆ

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೆ
ಕಾಲಕೂಟವನು ಪಾನಮಾಡಿದ ನೀಲಕಂಠನು ನೀನೆ
ಜಾಲಮಾಡಿದ ಗೋಪಾಲನೆಂಬ ಪೆಣ್ಣಿಗೆ ಮರುಳಾದವ ನೀನೆ

ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೆ
ಕೊರಳೊಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ


ಕುಟ್ಟಿ ಕುಂದಾಪ್ರ ಜೋಕ್ಸ್…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 13
ಕುಂದಾಪ್ರ ಕನ್ನಡ - ಮಂಗಳವಾರ ೧೦:೨೦, ಮೇ ೨೧, ೨೦೧೩

ಮಾಷ್ಟ್ರು: ಕುಟ್ಟಿ, ಸಮುದ್ರ ಮಧ್ಯದಗ್ ಒಂದ್ ಮಾಯ್ನ್ ಮರ ಇತ್ತ್… ಅದ್ರಗೆ ಮಾಯ್ನ್ ಹಣ್ ಆರೆ ಹ್ಯಾಂಗ್ ಕೊಯ್ಕಂಡ್ ಬತ್ತೆ? ಕುಟ್ಟಿ : ನಾ ಹಾರ್ಕಂಡ್ ಹೋಯ್ ಕೊಯ್ಕ ಬತ್ತೆ… ಸರ್ ಮಾಷ್ಟ್ರು: ಹಾರ್ಕಂಡ್ ಹೋಪ್ಕೆ ರೆಕ್ಕಿ ಯಾರ್ ನಿನ್ನ ಅಜ್ಜ ಕೊಡ್ತನಾ? ಕುಟ್ಟಿ: ಮತ್ತೆಂತ… ಸಮುದ್ರ ಮಧ್ಯದಗ್ ಮಾಯ್ನ್ ಮರ ನಿಮ್ಮ ಅಜ್ಜಿ ನೆಟ್ ಬತ್ರಾ ? _____________________________________________________________ ಕುಟ್ಟಿ ಬಾಲ್ವಾಡಿ ಬಿಟ್ಟ್ ಮನಿಗ್ ಬಂದ ಕುಟ್ಟಿಯ ಅಮ್ಮ ಕುಟ್ಟಿ ಹತ್ರ ಕೇಂಡ್ಳು… “ಮಗಾ, ಇವತ್ತ್ […]


BBA-MBA ಒಟ್ಟಿಗ್ ಮಾಡ್ಕಾ…ಓದಿ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 12
ಕುಂದಾಪ್ರ ಕನ್ನಡ - ಮಂಗಳವಾರ ೧೦:೦೮, ಮೇ ೨೧, ೨೦೧೩

ಒಂದ್ ಮಾತಿತ್ತ್ ಕಾಣಿ… ಎಂತದಂದ್ರೆ… ದೇವ್ರ್ ಹತ್ರ ಮತ್ತ್ ಡಾಕ್ಟ್ರ ಹತ್ರ ಸಿಟ್ಟ್ ಮಾಡ್ಕಂಬ್ಕಾಗ ಅಂಬ್ರ್ ಎಂತಕ್ ಕೇಂತ್ರಿಯಾ…? ಎಂತಕ್ ಅಂದ್ರೆ… ದೇವ್ರ್ ಹತ್ರ ಸಿಟ್ಟ್ ಮಾಡ್ಕಂಡ್ರೆ… ಅಂವ ಡಾಕ್ಟ್ರ ಹತ್ರ ಕಳ್ಸತಾ ಅಂಬ್ರ್ ಡಾಕ್ಟ್ರ ಹತ್ರ ಸಿಟ್ಟ್ ಮಾಡ್ಕಂಡ್ರೆ… ಅವ್ರ್ ದೇವ್ರ್ ಹತ್ರ ಕಳ್ಸತ್ರ್ ಅಂಬ್ರ್… ______________________________________________________________________________________ ಚೀಂಕ್ರ: ಹ್ವಾಯ್ ನೀವ್ ಈಗ ಎಂತ ಮಾಡ್ಕಂಡಿದ್ರಿ? ಕುಟ್ಟಿ : ನಾನ್ ಬೆಳಿಗ್ಗೆ BBA ಮಾಡ್ತೆ… ಸಾಯಂಕಾಲ ಆರ್ ಮೇಲೆ MBA ಮಾಡ್ತೆ ಚೀಂಕ್ರ: ಅದ್ ಹ್ಯಾಂಗ್ […]


ಕುಟ್ಟಿ ಕೋಳಿಗ್ ಬಿಸ್ನೀರ್ ಕುಡ್ಸಿದ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 11
ಕುಂದಾಪ್ರ ಕನ್ನಡ - ಮಂಗಳವಾರ ೦೯:೪೦, ಮೇ ೨೧, ೨೦೧೩

ಒಟ್ಟ್ ಕುಶಾಲ್ ಮರ್ರೆ… ಮೂರ್ ಸಣ್ಣ ಸಣ್ಣ ಕುಂದಾಪ್ರ ಜೋಕ್ಸ್… ಓದಿ ಗಮ್ಮತಗೆ ಹೆಂಡ್ತಿ: “ಹ್ವಾಯ್… ನಿಮ್ಗೆ ನನ್ನ ಮದಿ ಆಯ್ಕಿದ್ರೆ ಮೊದ್ಲೇ ರಾಣಿ ಅಂದೇಳಿ ಒಬ್ಳ್ ಹೆಂಡ್ತಿ ಇದ್ಲ್ ಅಂತ್ ನೀವ್ ನಂಗ್ ಹೇಳ್ಲೇ ಇಲ್ಲ” ಗಂಡ: “ಸ್ವಲ್ಪ ಸುಮ್ನಾಯ್ಕಂತ್ಯಾ? ನಾ ಹೇಳಲ್ಯ… ಅವತ್ತೇ ಹೇಳಿದೆ… ನಿನ್ನ ಮದಿಯಾರ್ ಮೇಲೆ ರಾಣಿ ಕಂಡಗೆ ಕಂಡ್ಕಂತೆ ಅಂದೇಳಿ… ನಿಂಗ್ ಸೂಕ್ಷ್ಮ ಅರ್ಥ ಆಯ್ದಿರ್ ನಾ ಎಂತ ಮಾಡುದ್?” ___________________________________________________________________________ ಗಂಡ ಹೆಂಡ್ತಿ ಹತ್ರ ಕೇಂಡ… “ಏ ಇವಳೇ… […]


ನೆಗಾಡಿ ಅಷ್ಟ್ ಸಾಕ್… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 10
ಕುಂದಾಪ್ರ ಕನ್ನಡ - ಮಂಗಳವಾರ ೦೯:೨೪, ಮೇ ೨೧, ೨೦೧೩

ಮೂರು ಸಣ್ಣ ಸಣ್ಣ ಕುಂದಾಪ್ರ ಕನ್ನಡ ಜೋಕ್ಸ್ ಮರ್ರೆ… ಓದಿ ಲಾಯ್ಕಿದ್ರ್ ಹೇಳಿ ಚೀಂಕ್ರ: ಹ್ವಾಯ್ ಪರ್ಸ್ ಮನಿಯಲ್ ಬಿಟ್ಟ್ ಬಂದೆ ಮರ್ರೆ… ಅರ್ಜೆಂಟ್ ಒಂದ್ ಸಾವ್ರ್ ರೂಪಾಯಿ ಇದ್ರೆ ಕೊಡಿ ಕುಟ್ಟಿ: ಅದಕ್ ಮಂಡಿ ಬಿಸಿ ಎಂತಕಾ… ಇಗ… ಈ 20 ರುಪಾಯ್ ತಕೋ… ರಿಕ್ಷದಲ್ ಮನಿಗ್ ಹೋಯ್ ಪರ್ಸ್ ತಕಂಬಾ ಅಕಾ? ______________________________________________________________________________________ ಕುಟ್ಟಿ : ಡಾಕ್ಟ್ರೆ… ನಂಗ್ ಜೋರ್ ಕೆಮ್ಮ ಮರ್ರೆ… ಸುರು ಆಯ್ ಮೂರ್ ತಿಂಗ್ಳ್ ಆಯ್ತ್ ಡಾಕ್ಟ್ರು: ಅಲ್ಲ ಮರ್ರೆ… […]


ಕೊಡ್ಪಾನಕ್ ಜ್ವರ ಬಂದ್ರ್ ಎಂತ ಮಾಡ್ಕ್?…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 9
ಕುಂದಾಪ್ರ ಕನ್ನಡ - ಮಂಗಳವಾರ ೦೯:೦೭, ಮೇ ೨೧, ೨೦೧೩

ಕೊಡ್ಪಾನಕ್ ಜ್ವರ ಬಂದ್ರ್ ಎಂತ ಮಾಡ್ಕ್ ? ನಮ್ ಕುಟ್ಟಿ ಹತ್ರ ಕೇಂಬ ಬನಿ… ಇದ್ ನಮ್ಕು ಕುಂದಾಪ್ರ ಕುಟ್ಟಿ ಬುದ್ದಿವಂತ ಆಯ್ಕಿದ್ರೆ ಮೊದ್ಲ್ ನೆಡದ್ದ್ ಕುಟ್ಟಿ ಮನ್ಯಗೆ ಒಂದ್ ಎಲಿಮನ್ ಕೊಡ್ಪಾನ ಇದ್ದಿತ್. ಅದ್ ಒಂದಿನ ಹೆರ್ಗ್ ಬಿಸ್ಲಗೇ ಇದ್ದಿತ್ ಅಂಬ್ರ್. ಬಿಸ್ಲ್ ಜೋರಿದ್ದಿತ್ತಾ ಕಾಂತ್. ಕುಟ್ಟಿ ಸಾಂಯ್ಕಾಲ ಶಾಲಿ ಬಿಟ್ಟ್ ಮನಿಗ್ ಬಪ್ಪತಿಗೆ ಕೊಡ್ಪಾನ ಸಮಾ ಬಿಸಿ ಆಯಿದ್ದಿತ್. ಕುಟ್ಟಿ ಬಂದನೇ ಕೊಡ್ಪಾನ ಮುಟ್ಟಿ ಕಂಡ. ಕೊಡ್ಪಾನ ಬಿಸಿ ಕೊದಿತಿತ್ತ್. ಅವ್ರ್ ನೆರ್ಮನಿಯಗ್ ಒಬ್ರ್ […]


ಎಕ್ಕೆ ಹೂವು...!
ಸಂಪದ - Sampada - ಮಂಗಳವಾರ ೦೮:೩೨, ಮೇ ೨೧, ೨೦೧೩

   

ನಳ ನಳಿಸುವ ಹಸಿರು ಎಲೆಗಳ
ಎಕ್ಕೆಯ ಪೊದೆ
ಬಿಳಿಯ ಹೂಗುಚ್ಛಗಳರಳಿಸಿ
ನಲಿಯುತ್ತ ನಿಂತಿದೆ
ನೋಡುತ್ತ ನಿಂತಿದ್ದಾಳೊಬ್ಬ
ಮುಗ್ಧ ಭಾವದ ಮುಗುದೆ
ನಿರಪೇಕ್ಷ ಭಾವ ಹೊತ್ತು


ಬಡಕಲು ಶರೀರ ಶಾಮಲ
ವರ್ಣ ಮಲಿನ ಬಟ್ಟೆ ಎಣ್ಣೆ
ಕಾಣದ ದಪ್ಪ ಕರಿಗೂದಲು
ನೀಳವೇಣಿ ಮುಡಿಕಟ್ಟಿ
ನಿಂತಿದ್ದಾಳೆ ಬಟಾ ಬಯಲಿನಲಿ


ಸುಮಗಳ ಧ್ಯಾನದಲಿ ವಿಹರಿಸಲು
ಆಕೆ ರಾಜಕುವರಿಯೆ..?
ಶೋಷಿತನ ಬಡ ಮಗಳವಳು
ಬೆರಗುಗಂಗಳಾಗಿದ್ದಾಳೆ
ವಿಕಸಿತ ಸುಮಗಳ ಅಂದ ಕಂಡು


ಅದನು ಕಿತ್ತು ಮುಡಿವ
ಆಶೆಯೆ ಕುಮುದೆ..?
ಅದೊಂದು ಹೂವೆ ?
ಬಿಳಿಯೂ ಒಂದು ಬಣ್ಣವೆ..?
ಬಿಳಿ ಸೂತಕದ ಸಂಕೇತ
ಹೋಗಲಿ
ಸುವಾಸನೆಯಾದರೂ
ಇದೆಯೆ ? ಅದೂ ಇಲ್ಲ
ಅದು ಸೂತಕದ
ಸಂಕೇತ ಮಾತ್ರವೆ ಅಲ್ಲ
ಶುಭ್ರತೆಯ ಸಂಕೇತ ಕೂಡ


ಮುಗುದೆ ನಿರಾಶೆ ಬೇಡ..!
ಕಳೆದ
ನಿನ್ನ ಜೀವನ ವ್ಯರ್ಥವಲ್ಲ
ಅದರಂತೆ
ಕಾಡು ಎಕ್ಕೆಯ ಹೂವಿನ
ಬದುಕು ಕೂಡ
ಜೊತೆಗೆ ಅದೊಂದು ಔಷಧಿಯ
ಗುಣಭರಿತ ಸಸ್ಯ ಕೂಡ


ಬರಿ ಬಣ್ಣ ಬೀರಿದರೇನು ?
ಕಂಪು ಸೂಸಿದರೇನು
ಕಗ್ಗಲ್ಲ ಸಂದಿಯಲಿ ಕೂಡ
ಸುಮಗಳು ಬಿರಿದು ಅರಳಿ
ಮುಗುಳ್ನಗುತ್ತವೆ
ನಿರಪೇಕ್ಷ ಭಾವ ಹೊತ್ತು

 

            *
 

ಬ್ಲಾಗ್ ವರ್ಗಗಳು: 
ಲೇಖನ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Select ratingGive it 1/5Give it 2/5Give it 3/5Give it 4/5Give it 5/5
No votes yet
To prevent automated spam submissions leave this field empty.


ನೆಗಿ ತಕಂಡ್ ಹೊತ್ತಾ ಅಂಬಷ್ಟ್…ನೆಗಾಡಿ… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 8
ಕುಂದಾಪ್ರ ಕನ್ನಡ - ಮಂಗಳವಾರ ೦೮:೨೪, ಮೇ ೨೧, ೨೦೧೩

ಕುಟ್ಟಿ ದೋಸ್ತಿ ಒಬ್ರು ಆಸ್ಪತ್ರಿಯಗೆ….ಐ.ಸಿ.ಯು ನಗೆ ಇದ್ದಿರಂಬ್ರ್ ಅವ್ರ್ ಮನಿಯರ್ ಕುಟ್ಟಿ ಮೇಲ್ ಪೋಲಿಸ್ ಕಂಪ್ಲೇಂಟ್ ಕೊಟ್ಟಿರಂಬ್ರ್… ಇವ್ನಿಗೆ ಹೀಂಗ್ ಆಪುಕ್ ಕುಟ್ಟಿಯೇ ಕಾರಣ ಅಂದೇಳಿ. ಪೋಲಿಸ್ರು ಕುಟ್ಟಿನ್ ಹುಡ್ಕಂಡ್ ಬಂದ್ ತನ್ಕಿ ಮಾಡ್ರ್ ಪೋಲಿಸ್ರ್ ಕೇಂಡ್ರ್… “ಏಯ್… ಆ ಗಂಡಿನ ಮನಿಯರ್ ನಿನ್ ಮೇಲ್ ಕಂಪ್ಲೆಂಟ್ ಕೊಟ್ಟಿರ್. ನೆಡದ್ದ್ ಎಂತಾ ವಿಷ್ಯ ಅಂದೇಳಿ ಹೇಳ್” ಕುಟ್ಟಿ ಏಂಕತಾ ಏಂಕತಾ ಹೇಳ್ದಾ… “ಆ ಗಂಡ್ ಹೊಟ್ಟಿಯೊಳ್ಗ್ ಒಂದ್ ನಮೂನಿ ಆತಾ ಇತ್ತ್… ಹೆಗ್ಗುಳ ಓಡ್ದ್ ಹಾಂಗ್ ಆತ್ತ್ […]


ನೆಗಾಡುಕೊಂದ್ ಹೆಳಿ ಬೇಕಾ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 7
ಕುಂದಾಪ್ರ ಕನ್ನಡ - ಮಂಗಳವಾರ ೦೭:೫೪, ಮೇ ೨೧, ೨೦೧೩

ನೆಗಾಡುಕೊಂದ್ ಹೆಳಿ ಬೇಕಾ… ನೆಗಾಡಿ ಎಷ್ಟ್ ಎಡಿತ್ತೋ ಅಷ್ಟ್… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 7 ಚೀಂಕ್ರ ಮತ್ತ್ ಸ್ವಾಂಪ್ರ ಒಂದಿನ ಕುಂದಾಪ್ರ ಸಂತಿಯಗ್ ನಿಂತ್ಕಂಡ್ ಜಗ್ಳ ಮಾಡ್ತಾ ಇದ್ರ್ ಅಷ್ಟೊತ್ತಿಗೆ ಅಲ್ಲಿಗ್ ಕುಟ್ಟಿ ಬಂದ್ ಕೇಂಡ… “ಹ್ವಾಯ್ ನೀವಿಬ್ರು ಎಂತಕೆ ಜಗ್ಳ ಮಾಡ್ಕಂತಾ ಇದ್ರಿ? ವಿಷ್ಯ ಎಂತ?” ಚೀಂಕ್ರ ಹೇಳ್ದಾ… “ನಮ್ಗ್ ಬಪ್ಪತಿಗ್ ದಾರಿ ಮೇಲೆ ಒಂದ್ ನೂರ್ ರುಪಾಯಿದ್ ನೋಟ್ ಸಿಕ್ಕಿತ್. ಅದನ್ನ ಯಾರ್ ಒಂದ್ ಬಿಗಿಯಾದ್ದ್ ಲಾಟ್ ಬಿಡ್ತ್ರೋ ಅವ್ರಿಗೆ ಅಂತ್ […]


ನೆಗಾಡಿ ಹೊಟ್ಟಿ ನೋವಾಪಲ್ಲೊರಿಗೆ… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 6
ಕುಂದಾಪ್ರ ಕನ್ನಡ - ಮಂಗಳವಾರ ೦೭:೦೧, ಮೇ ೨೧, ೨೦೧೩

ನೆಗಾಡಿ ಹೊಟ್ಟಿ ನೋವಾಪಲ್ಲೊರಿಗೆ… ಇದ್ ಕುಂದಾಪ್ರ ಕನ್ನಡ ಜೋಕ್ಸ್ ಕುಟ್ಟಿ ಒಂದ್ಸರ್ತಿ ಒಂದ್ಸಲ ಬಸ್ರೂರ್ ಮೂರ್ಕೈಯಿಂದ ಬಸ್ಟ್ಯಾಂಡಿಗ್ ರಿಕ್ಷ ಮಾಡ್ಕಂಡ್ ಬಂದ. ಇಳ್ದ್ರ್ ಮೇಲೆ ರಿಕ್ಷದನ್ ಹತ್ರ “ಬಾಡ್ಗಿ ಎಷ್ಟ್ ಆಯ್ತ್” ಅಂದೇಳಿ ಕೇಂಡ ರಿಕ್ಷದನ್ ಹೇಳ್ದ… “ಇಪ್ಪತ್ ರೂಪೈ ಆಯ್ತ್” ಸರಿ… ಅಂದ್… ಕುಟ್ಟಿ ಹತ್ ರೂಪೈ ನೋಟ್ ಕೊಟ್ಟ್ ರಿಕ್ಷ ಇಳ್ದ ರಿಕ್ಷದನ್… “ಹೋಯ್ ನಾ ಹೇಳದ್ದ್ ಇಪ್ಪತ್… ಆರೇ ನೀವ್ ಬರಿ ಹತ್ತೇ ರೂಪೈ ಕೊಟ್ಟಿರಿ” ಕುಟ್ಟಿ ಹೇಳ್ದಾ…”.ಹ್ವಾ… ಎಂತ ನೀ ನನ್ನ್ […]


ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧
ಸಂಪದ - Sampada - ಮಂಗಳವಾರ ೦೬:೪೭, ಮೇ ೨೧, ೨೦೧೩

 

     ಅವನೊಬ್ಬ ಗ್ರಾಮಲೆಕ್ಕಿಗ, ಹೆಸರು ಖಲಂದರ್ ಎಂದಿಟ್ಟುಕೊಳ್ಳೋಣ. ಪ್ರತಿ ತಿಂಗಳೂ ತಾನು ವಸೂಲು ಮಾಡಿದ ಕಂದಾಯ, ಸರ್ಕಾರೀ ಬಾಕಿ, ಇತ್ಯಾದಿಗಳ ಖಾತೆ, ಖಿರ್ದಿ ಬರೆದು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡಲು ಬ್ಯಾಂಕ್ ಚಲನ್ನುಗಳನ್ನು ಬರೆದು ಶಿರಸ್ತೇದಾರರಿಂದ ಮೇಲುಸಹಿ ಮಾಡಿಸಿಕೊಳ್ಳುತ್ತಿದ್ದ. ಎಲ್ಲರನ್ನೂ ಚೆನ್ನಾಗಿ ಮಾತನಾಡಿಸುತ್ತಿದ್ದ ಅವನು ಧಾರಾಳಿಯೂ ಆಗಿದ್ದರಿಂದ ಎಲ್ಲರಿಗೂ ಅವನು ಆಪ್ತನೆನಿಸಿದ್ದ. ಹಣ ಬ್ಯಾಂಕಿಗೆ ಜಮಾ ಆದಮೇಲೆ ತಾಲ್ಲೂಕು ಕಛೇರಿಯ ಡಿಸಿಬಿ (ಡಿಮ್ಯಾಂಡ್-ಕಲೆಕ್ಷನ್-ಬ್ಯಾಲೆನ್ಸ್ = ಬೇಡಿಕೆ-ವಸೂಲಿ-ಶಿಲ್ಕು) ವಹಿಯಲ್ಲಿ ವಿವರ ಬರೆಯುತ್ತಿದ್ದ. ಕಛೇರಿಯ ಗುಮಾಸ್ತರು ಅದನ್ನು ಖಜಾನೆಯಿಂದ ಬರುವ ಶೆಡ್ಯೂಲುಗಳೊಂದಿಗೆ ತಾಳೆ ನೋಡಬೇಕಾದುದು ಕ್ರಮವಾದರೂ, ಖಜಾನೆಯಿಂದ ಶೆಡ್ಯೂಲುಗಳು ತಿಂಗಳುಗಳು ತಡವಾಗಿ ಬರುತ್ತಿದ್ದುದರಿಂದ ತಾಳೆ ನೋಡುವ ಕೆಲಸ ಸಾಮಾನ್ಯವಾಗಿ ಆಗುತ್ತಿರಲಿಲ್ಲ. ದಫ್ತರ್ ತನಿಖೆ ಮಾಡುವಾಗಲೋ, ಲೆಕ್ಕ ಪರಿಶೋಧನೆ ಮಾಡುವಾಗಲೋ ವ್ಯತ್ಯಾಸವಿದ್ದರೆ ಪರಿಶೀಲಿಸಿ ನೋಡುತ್ತಾರೆ. ಸಾಮಾನ್ಯವಾಗಿ ಯಾವುದೋ ಲೆಕ್ಕ ಶೀರ್ಷಿಕೆಗೆ ಹೋಗಬೇಕಾದ ಹಣ ಇನ್ನು ಯಾವುದೋ ಶೀರ್ಷಿಕೆಗೆ ಜಮಾ ಆಗಿ ವ್ಯತ್ಯಾಸವಾಗುತ್ತಿರುತ್ತದೆ. ಕಂದಾಯ ಲೆಕ್ಕ ಪರಿಶೀಲಕರು ಎಲ್ಲಾ ಗ್ರಾಮಲೆಕ್ಕಿಗರುಗಳ ಲೆಕ್ಕವನ್ನು ಪರಿಶೀಲಿಸುವುದಿಲ್ಲ. ಪರಿಶೀಲನಾ ಅವಧಿಯಲ್ಲಿ ಲಭ್ಯವಿರುವವರ ಲೆಕ್ಕಗಳನ್ನು ಮಾತ್ರ ಪರಿಶೀಲಿಸುತ್ತಾರೆ. ಜಾಣ ಖಲಂದರ್ ಆ ಕಛೇರಿಯಲ್ಲಿ ೪-೫ ವರ್ಷಗಳಿಂದ ಕೆಲಸ ಮಾಡಿದ್ದರೂ ಆ ಅವಧಿಯಲ್ಲಿ ಒಮ್ಮೆಯೂ ಅವನ ಲೆಕ್ಕ ಯಾವುದಾದರೂ ಕಾರಣದಿಂದ ತನಿಖೆಯಾಗಿರಲೇ ಇಲ್ಲ. ಹೀಗೆ ಒಮ್ಮೆ ಪರಿಶೀಲಿಸಿದಾಗ ಖಲಂದರನ ಮಿತ್ರ ಗ್ರಾಮಲೆಕ್ಕಿಗ ರಮೇಶನ ಒಂದು ತಿಂಗಳ ಕಂದಾಯದ ಹಣ ಖಜಾನೆಯ ಲೆಕ್ಕದಲ್ಲಿ ಜಮಾ ಆಗದೆ ಇರುವುದು ಕಂಡುಬಂದಿತು. ಖಿರ್ದಿಯಲ್ಲಿ ಮಾತ್ರ ಹಣ ಬ್ಯಾಂಕಿಗೆ ಸಂದಾಯವಾದ ಕುರಿತು ಬ್ಯಾಂಕಿನ 'ಕ್ಯಾಶ್ ರಿಸೀವ್ಡ್' ಸೀಲು ಇತ್ತು. ಅನುಮಾನದಿಂದ ಬ್ಯಾಂಕಿನಲ್ಲಿ ವಿಚಾರಿಸಿದಾಗ ಆ ಮೊಬಲಗು ಬ್ಯಾಂಕಿಗೆ ಜಮಾ ಆಗಿಲ್ಲದುದು ಖಚಿತವಾಗಿತ್ತು. ರಮೇಶನಿಗೆ ನೋಟೀಸು ಕೊಟ್ಟು ವಿಚಾರಿಸಿದಾಗ ತಾನು ಒಂದು ವಾರ ರಜೆಯಲ್ಲಿದ್ದುದರಿಂದ ಹಣವನ್ನು ಮಿತ್ರ ಖಲಂದರ್ ಮೂಲಕ ಬ್ಯಾಂಕಿಗೆ ಕಟ್ಟಿಸಿದ್ದಾಗಿ ತಿಳಿಸಿದ್ದ. ಶಿರಸ್ತೇದಾರರಿಗೆ ಅನುಮಾನ ಬಂದು ಖಲಂದರನ ಖಾತೆ-ಖಿರ್ದಿಗಳನ್ನು ಪಡೆದು ಪರಿಶೀಲಿಸಿದಾಗ ಖಲಂದರ್ ಕಛೇರಿಗೆ ಬಂದ ಮೊದಲ ಎರಡು ತಿಂಗಳ ಹಣ ಹೊರತುಪಡಿಸಿ ನಂತರದ ಯಾವುದೇ ತಿಂಗಳ ಹಣ ಸರ್ಕಾರಕ್ಕೆ ಜಮಾ ಅಗಿರದೇ ಇದ್ದುದು ಗೊತ್ತಾಯಿತು. ಅವನೇ ಬ್ಯಾಂಕಿನ ಖೋಟಾ ಸೀಲು ಮಾಡಿಸಿಕೊಂಡು ಹಣ ಜಮಾ ಆದ ಬಗ್ಗೆ ಖಿರ್ದಿಯಲ್ಲಿ ಒತ್ತುತ್ತಿದ್ದ. ದೊಡ್ಡ ಮೊತ್ತದ ಹಣ ಲಪಟಾವಣೆಯಾಗಿತ್ತು. ಮಿತ್ರ ರಮೇಶನ ಹಣವನ್ನೂ ಬ್ಯಾಂಕಿಗೆ ಜಮಾ ಮಾಡದೇ ತನ್ನ ಖೋಟಾ ಸೀಲು ಒತ್ತಿದ್ದರಿಂದ ಈ ಹಗರಣ ಬೆಳಕಿಗೆ ಬರುವಂತಾಯಿತು. ಜಿಲ್ಲಾಧಿಕಾರಿಯವರಿಗೆ ವರದಿ ಹೋಯಿತು. ಗ್ರಾಮಲೆಕ್ಕಿಗ, ಆ ಐದು ವರ್ಷಗಳಲ್ಲಿ ಕೆಲಸ ಮಾಡಿದ್ದ ಡಿಸಿಬಿ ಗುಮಾಸ್ತರುಗಳು, ರೆವಿನ್ಯೂ ಇನ್ಸ್ ಪೆಕ್ಟರುಗಳು, ಶಿರಸ್ತೇದಾರರುಗಳ ಮೇಲೆ ಇಲಾಖಾ ವಿಚಾರಣೆ ನಡೆಸಲಾಯಿತು. ಸುಮಾರು ೨-೩ ವರ್ಷಗಳ ಕಾಲ ವಿಚಾರಣೆ ನಡೆದು ಆರೋಪಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿದರು. ಗ್ರಾಮಲೆಕ್ಕಿಗನನ್ನು ಸೇವೆಯಿಂದ ವಜಾ ಮಾಡಲಾಯಿತು. ಗುಮಾಸ್ತರುಗಳ, ರೆವಿನ್ಯೂ ಇನ್ಸ್ ಪೆಕ್ಟರುಗಳ ಎರಡೆರಡು ವಾರ್ಷಿಕ ಇಂಕ್ರಿಮೆಂಟುಗಳನ್ನು, ಶಿರಸ್ತೇದಾರರ ೪ ವಾರ್ಷಿಕ ಇಂಕ್ರಿಮೆಂಟುಗಳನ್ನು ತಡೆಹಿಡಿದು ಆದೇಶವಾಯಿತು. ಅವರುಗಳ ಬಡ್ತಿಗೂ ಇದರಿಂದ ತೊಂದರೆಯಾಯಿತು.

     ವಜಾಗೊಂಡ ಗ್ರಾಮಲೆಕ್ಕಿಗ ಸುಮ್ಮನೇ ಕೂರಲಿಲ್ಲ. ತನ್ನದೇ ಆದ ಒಂದು ಪೆಪ್ಪರಮೆಂಟ್ ತಯಾರಿಕಾ ಘಟಕ ಸ್ಥಾಪಿಸಿದ. ಅದೇ ಸಮಯಕ್ಕೆ ತನ್ನನ್ನು ವಜಾ ಮಾಡಿದ ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಉಚ್ಛನ್ಯಾಯಾಲಯದಲ್ಲಿ ಮೇಲುಮನವಿಯನ್ನೂ ಸಲ್ಲಿಸಿದ. ಪೆಪ್ಪರಮೆಂಟ್ ತಯಾರಿಕೆ ಮತ್ತು ಮಾರಾಟದಿಂದ ಒಳ್ಳೆಯ ಲಾಭ ಮಾಡಿದ ಅವನು ದೊಡ್ಡ ಬಂಗಲೆಯಂತಹ ಮನೆ ಕಟ್ಟಿಕೊಂಡು ಕಾರಿನಲ್ಲಿ ಸೂಟು ಬೂಟು ಧರಿಸಿ ಓಡಾಡತೊಡಗಿದ. ಉಚ್ಛನ್ಯಾಯಾಲಯದಲ್ಲಿ ೬-೭ ವರ್ಷಗಳು ವಿಚಾರಣೆ ನಡೆದು ಆ ಗ್ರಾಮಲೆಕ್ಕಿಗ ನಿರ್ದೋಷಿಯೆಂದು ತೀರ್ಮಾನವಾಗಿತ್ತು. ಇಲಾಖಾ ವಿಚಾರಣೆ ಸರಿಯಾಗಿ ನಡೆಸಿರಲಿಲ್ಲವೆಂದೂ, ಬ್ಯಾಂಕಿನವರನ್ನು ವಿಚಾರಣೆ ನಡೆಸಿಯೇ ಇಲ್ಲವೆಂದೂ, ತನ್ನ ಮುಗ್ಧತೆಯನ್ನು ಬ್ಯಾಂಕಿನವರು ದುರುಪಯೋಗಪಡಿಸಿಕೊಂಡಿದ್ದರೆಂದೂ ಅವನು ಮುಂದಿಟ್ಟ ವಾದವನ್ನು ಒಪ್ಪಿದ ನ್ಯಾಯಾಲಯ, ಸರ್ಕಾರ ಆರೋಪಗಳನ್ನು ಸಾಬೀತುಗೊಳಿಸುವಲ್ಲಿ ವಿಫಲವಾಗಿದೆಯೆಂದು, ಸರಿಯಾಗಿ ವಿಚಾರಣೆ ನಡೆಸಿಲ್ಲವೆಂದು ಹಾಗೂ ಅವನನ್ನು ಮರಳಿ ಸೇವೆಗೆ ತೆಗೆದುಕೊಂಡು ಹಿಂದಿನ ಪೂರ್ಣ ಅವಧಿಯ ವೇತನವನ್ನು ಪಾವತಿಸಲು ಮತ್ತು ಅಗತ್ಯವೆನಿಸಿದರೆ ಹೊಸದಾಗಿ ಇಲಾಖಾ ವಿಚಾರಣೆ ನಡೆಸಬಹುದೆಂದೂ ತಿಳಿಸಿತ್ತು. ಕಾರಿನಲ್ಲಿ ಟ್ರಿಮ್ಮಾಗಿ ಬಂದ ಖಲಂದರನನ್ನು ಜಿಲ್ಲಾಧಿಕಾರಿಯವರು ಸೇವೆಗೆ ತೆಗೆದುಕೊಳ್ಳಲೇಬೇಕಾಯಿತು ಮತ್ತು ಹಳೆಯ ಎಂಟು ವರ್ಷಗಳ ಸಂಬಳವನ್ನು ಅವನು ಕೆಲಸ ಮಾಡಿರದಿದ್ದರೂ ಅವನಿಗೆ ಕೊಡಲೇಬೇಕಾಯಿತು. ಅವನೋ ನಂತರದಲ್ಲಿ, ತನ್ನ ಪರವಾಗಿ ಇನ್ನೊಬ್ಬನನ್ನು ನೇಮಿಸಿಕೊಂಡು ಅವನಿಗೆ ತನ್ನ ಅರ್ಧ ಸಂಬಳ ಕೊಟ್ಟು ಬರವಣಿಗೆ ಕೆಲಸ ಮಾಡಿಸುತ್ತಿದ್ದ. ಸಂಬಳ ತೆಗೆದುಕೊಳ್ಳಲು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅವನು ಕಛೇರಿಗೆ ಹೋಗುತ್ತಿದ್ದ. ಜಿಲ್ಲಾಧಿಕಾರಿಯವರು ಹೊಸದಾಗಿ ಇಲಾಖಾ ವಿಚಾರಣೆ ನಡೆಸುವ ಸಲುವಾಗಿ ಹೊಸದಾಗಿ ಆರೋಪ ಪಟ್ಟಿ ತಯಾರಿಸಲು ತಹಸೀಲ್ದಾರರಿಗೆ ಸೂಚಿಸಿದರು. ಹಳೆಯ ಕಡತಗಳನ್ನು ಪರಿಶೀಲಿಸಿ ಆರೋಪ ಪಟ್ಟಿ ತಯಾರಿಸಲು ನೋಡಿದರೆ ಸಂಬಂಧಿಸಿದ ಕಡತಗಳು, ದಾಖಲೆಗಳು ದೊರೆಯುವುದೇ ಕಷ್ಟವಾಗಿತ್ತು. ಹಿಂದಿನ ಇಲಾಖಾ ವಿಚಾರಣಾ ಕಡತದಿಂದಲೂ ಮುಖ್ಯವಾದ ಮೂಲ ದಾಖಲಾತಿಗಳೇ ಕಣ್ಮರೆಯಾಗಿದ್ದವು. ಅವರ ಮೇಲೆ ಇವರು, ಇವರ ಮೇಲೆ ಅವರು ತಪ್ಪು ಹೊರಿಸುತ್ತಲೇ, ಪತ್ರ ವ್ಯವಹಾರಗಳನ್ನು ಮಾಡುತ್ತಲೇ ವರ್ಷಗಳು ಉರುಳಿದವು. ಖಲಂದರನ ಆದರಾತಿಥ್ಯಗಳಿಗೆ ಮರುಳಾದವರು ಅವನ ಸಹಕಾರಕ್ಕೆ ನಿಂತಿದ್ದರು.  ಕ್ರಮೇಣ ಎಲ್ಲರಿಗೂ ವಿಷಯ ಮರೆತೇ ಹೋಯಿತು. ಅವನೂ ಪೂರ್ಣ ಸೇವೆ ಸಲ್ಲಿಸಿ ಸೇವಾನಿವೃತ್ತನೂ ಆದ, ಪಿಂಚಣಿಯನ್ನೂ ಪಡೆದ ಎಂಬಲ್ಲಿಗೆ ವ್ಯರ್ಥ ಇಲಾಖಾ ವಿಚಾರಣಾ ಪ್ರಸಂಗಗಳ ಈ ಅಧ್ಯಾಯ ಮುಗಿದುದು.

-ಕ.ವೆಂ.ನಾಗರಾಜ್.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Select ratingGive it 1/5Give it 2/5Give it 3/5Give it 4/5Give it 5/5
Average: 5 (2 votes)
To prevent automated spam submissions leave this field empty.


ಟ್ರಿಣ್ ಟ್ರಿಣ್… ಸೈಕಲ್ ಮರ್ಲ್…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 5
ಕುಂದಾಪ್ರ ಕನ್ನಡ - ಮಂಗಳವಾರ ೦೬:೩೭, ಮೇ ೨೧, ೨೦೧೩

ಇದು ಮಸ್ತ್ ಹಳೀ ಜೋಕ್… ನೀವ್ ಮೊದ್ಲೇ ಕೇಂಡಿಪ್ಕೂ ಸಾಕ್… ಕೇಣದಿದ್ರೆ ಇಲ್ಕೇಣಿ          ಚಿತ್ರ ಕೃಪೆ: http://www.frozenmercury.com ಒಂದ್ ಹುಚ್ ಆಸ್ಪತ್ರಿಯಗೆ ಒಬ್ಬ ಹುಚ್ಚ ಇದ್ದಿದ ಅಂಬ್ರ್. ಅವನ ಹುಚ್ ಎಂತ ಅಂದ್ರೆ ಸೈಕಲ್ ಬಿಡು ಹುಚ್. ಇಪತ್ನಾಕ್ ಗಂಟಿಯೂ ಅದೇ ಆಲೋಚ್ನಿ… ಸೈಕಲ್ ಮೇಲ್ ಇಲ್ದೇ ಇಪ್ಪತಿಗೂ… ಕೂಕಂಡಲ್…ಮಲ್ಕಂಡಲ್ಲ್… ಸೈಕಲ್ ಪೆಡ್ಲು ಮೆಟ್ಟುದ್… ಬೆಲ್ ಹೊಡುದ್… ಯಾಕ್ಷನ್ ಮಾಡ್ತಾ ಇರ್ತಾ. ಮನಿಯರಿಗ್ ಕಂಡ್ ಕಂಡ್ ಸಾಕಾಯಿ ಆಸ್ಪತ್ರಿಗೆ ಸೇರ್ಸ್ರ್. ಸೇರ್ಸ್ರ್ ಮೇಲೂ […]


ರಂಗಶಂಕರದಲ್ಲಿ ಮಕ್ಕಳ ರಂಗಶಿಬಿರ
ಸಂಪದ - Sampada - ಮಂಗಳವಾರ ೦೬:೧೨, ಮೇ ೨೧, ೨೦೧೩

ರಂಗಭೂಮಿಯಲ್ಲಿ ಆಸಕ್ತಿ ಇರುವವರಿಗೆ ಇದೊಂದು ಒಳ್ಳೆಯ ಅವಕಾಶ. ರಂಗಶಂಕರದ ಆಹಾ! ಮಕ್ಕಳ ರಂಗಭೂಮಿಯು ಹೊಸ ನಾಟಕ 'ಮುಲ್ಲಾನಸ್ರುದ್ದೀನ' ಆರಂಭಿಸಲಿದೆ. ಇದಕ್ಕಾಗಿ ಆಸಕ್ತ ನಟರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಜೂನ್‍ 10 ರಿಂದ ತರಬೇತಿ ಆರಂಭವಾಗಲಿದೆ. ಮುಂಬೈನ ನಿರ್ದೇಶಕ ಪುಷಾನ್‍ ಕೃಪಲಾನಿ ಇದನ್ನು ನಿರ್ದೇಶಿಸಲಿದ್ದಾರೆ. ದಿನವಿಡೀ ಇರುವ ತರಬೇತಿಗಳಿಗೆ ಅಭರ್ಥಿಗಳು ಹಾಜರಾಗಬೇಕು. ಸಂಗೀತ ವಾದ್ಯ ತಿಳಿದಿರುವ ಅಭರ್ಥಿಗಳಾದಲ್ಲಿ ಒಳ್ಳೆಯದು. ನಾಟಕದ ಮೊದಲ ಪ್ರದರ್ಶನ ಆಹಾ ಮಕ್ಕಳ ಅಂತರಾಷ್ಟ್ರೀಯ ನಾಟಕೋತ್ಸವದಲ್ಲಿ ಜುಲೈ 6ರಂದು ಇರುತ್ತದೆ. ಆಸಕ್ತರು ತಮ್ಮ ಹೆಸರನ್ನು ಜೂನ್‍ 1ರ ಒಳಗೆ ನೋಂದಾಯಿಸಿಕೊಳ್ಳಬೇಕು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Select ratingGive it 1/5Give it 2/5Give it 3/5Give it 4/5Give it 5/5
To prevent automated spam submissions leave this field empty.


ಕುಟ್ಟಿ ಬೆಂಗ್ಳೂರಿಗ್ ಹೋದ್ ಕತಿ…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 4
ಕುಂದಾಪ್ರ ಕನ್ನಡ - ಮಂಗಳವಾರ ೦೫:೫೩, ಮೇ ೨೧, ೨೦೧೩

ನಮ್ಮ ಕುಟ್ಟಿ ಬರೀ ಕುಂದಾಪ್ರಕ್ಕ್ ಮಾತ್ರ ಅಲ್ದೇ… ಬೆಂಗ್ಳೂರಿಗ್ ಸತೇ ಹೋದ್ದ್ ಕತಿ ಗೊತ್ತಿತಾ? ಗೊತ್ತಿಲ್ದಿರ್ ನಾ ಹೇಳ್ತೆ ಆ ಕತಿ. ನೀವ್ ಬಾಯ್ ಕಳ್ಕಂಡ್ ಕೇಣಿ ಅಕಾ ಕುಟ್ಟಿನ್ ಒಂದ್ಸಲ ಅವ್ನ್ ಅಂಗ್ಡಿ ಸವ್ಕಾರ್ರ್ ಬೆಂಗ್ಳೂರಿಗ್ ಕಳ್ಸಿರ್. ಸವ್ಕಾರ್ರ್ ಹೇಳದ್ ಕೆಲ್ಸ ಎಲ್ಲಾ ಮುಗ್ಸಿ, ಕುಟ್ಟಿ ಬೆಂಗ್ಳೂರ್ ತಿರ್ಗಕ್ ಅಂದೇಳಿ ಬೈಕಗ್ ಅವ್ನ ದೋಸ್ತಿ ಬೆಂಗ್ಳೂರಗ್ ಇದ್ದ ಚೀಂಕ್ರನ ಒಟ್ಟಿಗ್ ತಿರ್ಗತಾ ಇದ್ದಿದ. ಹೀಂಗೇ ಬಳೀತಾ-ತಿರ್ಗತಾ ಅರ್.ಟಿ ನಗರ-ಗಂಗಾನಗರ ಬದಿಗ್ ಹೋರ್ ಇಬ್ರೂ. ಅರ್.ಟಿ. ನಗರ […]


ಟಾಸ್… ಪುಲ್ಟಾಸ್… ಗಪ್ಳಾಸ್…ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 3
ಕುಂದಾಪ್ರ ಕನ್ನಡ - ಮಂಗಳವಾರ ೦೫:೦೯, ಮೇ ೨೧, ೨೦೧೩

ಟಾಸ್… ಪುಲ್ಟಾಸ್… ಗಪ್ಳಾಸ್… ಎಷ್ಟ್ ಆತ್ತೋ ಅಷ್ಟ್ ಹಾರ್ಸ್ ಇದು ಕುಂದಾಪ್ರದಗ್ ನೆಡದ್ ಸತ್ಯ ಘಟನೆ… ಸುಮಾರ್ ವರ್ಷದ ಹಿಂದೆ ನೆಡದ್ದ್                                           (ಚಿತ್ರ ಕೃಪೆ : http://vecto.rs/design/vector-of-a-cartoon-coach-tossing-a-coin-coloring-page-outline-by-ron-leishman-22462)   ಶಾಲಿಯಗೆ 7ನೇ ಕ್ಲಾಸಿನ ವಾರ್ಷಿಕ ಪರೀಕ್ಷೆ ನಡಿತಿದ್ದಿತ್. ನಮ್ ಕುಟ್ಟಿ ಇದ್ದ್ ವರ್ಷ ಆ ಶಾಲಿಯಗೆ ಮಕ್ಳ್ ಬರೀ […]


ಎಷ್ಟ್ ಬೇಕಾರೂ ನೆಗಾಡಿ… ಇದ್ ಕುಂದಾಪ್ರ ಕನ್ನಡ ಜೋಕ್(ಕೇ) ಭಾಗ 2 :-)
ಕುಂದಾಪ್ರ ಕನ್ನಡ - ಮಂಗಳವಾರ ೦೪:೩೦, ಮೇ ೨೧, ೨೦೧೩

ಎಷ್ಟ್ ಬೇಕಾರೂ ನೆಗಾಡಿ… ಇದ್ ಕುಂದಾಪ್ರ ಕನ್ನಡ ಜೋಕ್ಸ್ ಭಾಗ 2 ಇದು ಕುಟ್ಟಿ ಸಣ್ಣಕಿಪ್ಪತಿಗ್ ನೆಡದ್ದ್… ಕುಟ್ಟಿ ಒಂದ್ ಇನ್-ಲ್ಯಾಂಡ್ ಲೆಟರಗೆ ಕಾಗ್ದ ಬರ್ದ್ ಎಡ್ರಸ್ ಬರಿತಾ ಇದ್ದ ಅವ್ನ್ ಅಮ್ಮ ಬಂದ್ ಕೇಂಡ್ರ್… ’ಮಗಾ ಯಾರಿಗ್ ಕಾಗ್ದ ಬರೀತಿದ್ದೆ?’ ಕುಟ್ಟಿ ಹೇಳ್ದಾ… ‘ನಂಗೇ ಬರದ್ದ್ ಅಮ್ಮ… ಈಗ ಪೋಸ್ಟ್ ಮಾಡಿ ಬರ್ಕ್’ ಅವ್ನ್ ಅಮ್ಮನಿಗೆ ಇದ್ಯಾವ್ ನಮನಿ ವಿಚಿತ್ರ ಅನ್ಸಿ ಕೇಂಡ್ರ್ … ‘ನಿಂಗೆ ನೀ ಕಾಗ್ದ ಬರುದಾ… ಇದೊಳ್ಳೇ ಪಂಚಾಯ್ತಿ ಮರಾಯ… ಹೋಯ್ಲಿ […]


ಸಮಾ ನೆಗಾಡಿ… ಆಪಲ್ಲಿವರಿಗ್ ಲಗಾಡಿ… ಇದ್ ಕುಂದಾಪ್ರ ಕನ್ನಡ ಜೋಕ್(ಕೇ)… ಹ್ವಾಯ್ :-)
ಕುಂದಾಪ್ರ ಕನ್ನಡ - ಮಂಗಳವಾರ ೦೩:೨೭, ಮೇ ೨೧, ೨೦೧೩

ಕುಂದಾಪ್ರ ಕನ್ನಡ ಜೋಕ್ಸ್… ಸಮಾ ನೆಗಾಡಿ… ಆಪಲ್ಲಿವರಿಗ್ ಲಗಾಡಿ…         ಒಂದಿನ ಕುಟ್ಟಿ ಕುಂದಾಪ್ರಕ್ಕೆ ಬಂದಿದ್ದ. ಮನಿ ಬದಿಗೆ ಹೋಪುಕೆ ಬಸ್ಸಿಗೆ ಕಾಯ್ತ ಶಾಸ್ತ್ರಿ ಸರ್ಕಲ್ಲಗೆ ನಿಂತಿದ್ದ ಅಷ್ಟೊತ್ತಿಗೆ ಅಲ್ಲಿಗೆ ಒಬ್ಬ ಬೇಡುವವ ಅವ್ನತ್ರ ಬಂದ ‘ಹ್ವಾಯ್… ಒಂದ್ ರುಪಾಯ್ ಇದ್ರೆ ಕೊಡಿ ಮರ್ರೆ…’ ಅಂತ ಕುಟ್ಟಿ ಹತ್ರ ಕೇಂಡ ಕುಟ್ಟಿ ಯಾವ್ ಸಿಟ್ಟಗೆ ಇದ್ದಿನೋ ಏನೋ….. ‘ನಿಂಗ್ ನಾಚ್ಕಿ ಆತಿಲ್ಯನಾ, ರಸ್ತಿ ಮೇಲ್ ನಿಂತ್ಕ ಬೇಡುಕೆ…’ ಅಂದೇಳಿ ಬೈದ ಬೇಡುವವ ಹೇಳ್ದಾ, […]


ನಿಷಾದ ♪ ವಿಷಾದ ♫
ಮನಸಿನ ಮರ್ಮರ... - ಮಂಗಳವಾರ ೦೨:೧೨, ಮೇ ೨೧, ೨೦೧೩

ನೆನಪಿನಾಳದ ಕಣಿವೆಯೊಳಗೆ ಸುಪ್ತ ಝರಿಯ ಜುಳುಜುಳು ನಿನಾದ ಅಂತರಂಗದ ಹೂಬನದೊಳಗೆ ಅರಳಿ ನಗುವ ಸ್ಮೃತಿ ಸಂವಾದ ಆಪ್ತಸ್ವರಗಳ ಆಲಾಪನೆಯೊಳಗೇ ಲುಪ್ತವಾದ ನಿಷಾದ ಸ್ವರದ ವಿಷಾದ !! Filed under: ಆಪ್ತಸ್ವರ, ಇತ್ಯಾದಿ..., ಕನ್ನಡ, ಕವನ, ಕವಿತೆ, ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ, kannada hani, kannada kavana, kannada kavithe, kavana, kavite Tagged: ಅಂತರಂಗದ ಆಪ್ತಸ್ವರ, ಕವನ, ಕವಿತೆ, ನೆನಪುಗಳ ಮಾತು ಮಧುರ.., ಭಾವಭಿತ್ತಿ, ಮನಸಿನ […]


ನವಿರು-ನೋವು ನವಿಲಿಲ್ಲ… ನೀನಿಲ್ಲದೆ !!
ಮನಸಿನ ಮರ್ಮರ... - ಮಂಗಳವಾರ ೦೨:೦೪, ಮೇ ೨೧, ೨೦೧೩

ನನನ ನನ ನಾನಾ… ನನನಾನಾ ನನ ನಾನನ ನನ ನನನಾ… ನಕಾರದಲ್ಲಿ ನೆನಪನ್ನು ನೆನೆಯುತ್ತಾ ನೆನಪು ನೋವೆಂಬರು ನೋವು ನವಿರೆಂಬರು ನವಿಲಗರಿಯೆಂಬರು ನೆಪಮಾತ್ರಕೆ ನೆನಪಿನೋಣಿಯಲೊಮ್ಮೆ ನಡೆದಾಡಿ ನೋಡಿದೆ ನವಿರು-ನೋವು ನವಿಲಿಲ್ಲ… ನೀನಿಲ್ಲದೆ !! Filed under: ಆಪ್ತಸ್ವರ, ಇತ್ಯಾದಿ..., ಕವನ, ಕವಿತೆ, ನೆನಪುಗಳ ಮಾತು ಮಧುರ.., ಭಾವ ಭಿತ್ತಿ, ಮನಸಿನ ಹಾಡು, ಹನಿ ಹನಿ, ಹಾಗೆ ಸುಮ್ಮನೆ, kannada hani, kannada kavana, kannada kavithe, kavana, kavite Tagged: ಅಂತರಂಗದ ಆಪ್ತಸ್ವರ, ಕನ್ನಡ ಕವನ, ಕನ್ನಡ […]


೧೦ ೧೧ ೧೨ ೧೩ ೧೪ ೧೫ ೧೬ ೧೭ ೧೮ ೧೯ ೨೦ ಮುಂದೆ› ಕೊನೆ»

“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ.