ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೮:೩೪, ಸೆಪ್ಟೆಂಬರ್ ೮, ೨೦೦೮
ನಾ ಗಣೇಶ ಚತುರ್ತಿಗೆ ಊರಿಗೆ ಹೋದಾಗ ಅಮ್ಮಾ ಜೂಡಿ ಮಾತಾಡ್ಕೋತ ಕುತ್ತಾಗ ಅಮ್ಮಾ ಈ ಮಾತು ಹೇಳಿದ್ಲು. ನಮ್ಮ ಹಿಂದೂ ಪದ್ದತಿಗಳ ವಳಗ ಮಣ್ಮಿಗೆ ಭಾಳ ಮಹತ್ವ ಕೊಡತಾರ. ಇದಕ್ಕ ಆಧಾರ ಎನಂದ್ರ - ೧. ಮಣ್ಣೆತ್ತಿನ ಅಮವಾಸಿಗೆ ಮಣ್ಣಿನ ಎತ್ತು ಮಾಡ್ತೀವಿ.
೨. ಗಣಪತಿ ಹಬ್ಬಕ್ಕ ಮಣ್ಣಿನ ಗಣಪತಿ ಮೂರ್ತಿ ಇಡತೀವಿ. ಮುಂದೆ ಓದಿ »
ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳುಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೮:೧೭, ಸೆಪ್ಟೆಂಬರ್ ೮, ೨೦೦೮
ಮುಂದೆ ಓದಿ »
ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳುAshokworld - ಸೋಮವಾರ ೦೮:೦೮, ಸೆಪ್ಟೆಂಬರ್ ೮, ೨೦೦೮
ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ ಪ್ರವೃತ್ತಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಭಾರತದ ಐಟಿ ದಿಗ್ಗಜ ಕಂಪೆನಿಗಳೂ ಬಹು ಹುಶಾರಾಗಿ ಹೆಜ್ಜೆಗಳನ್ನಿಡುತ್ತಿವೆ. ಈಗ ಹಿಂದಿನ ವರ್ಷಗಳಂತೆ ಬೇಕಾಬಿಟ್ಟಿಯಾಗಿ ಹೊಸಬರನ್ನು ತೆಗೆದುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಹಾಕಲಾಗಿದೆ. ಹೊಸ ನೇಮಕಾತಿಗಳ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.ವಿಪ್ರೋದಂತಹ ಕಂಪೆನಿಗಳು ಮನೆಯಿಂದಲೇ ಕಚೇರಿ ಕೆಲಸ ಮಾಡಿಸಲು ನಿರ್ಧರಿಸಿವೆ. ಕಚೇರಿ ಜಾಗದಲ್ಲಿ ಉಳಿತಾಯ, ನೌಕರರ ಪ್ರಯಾಣ ವೆಚ್ಚದಲ್ಲಿ ಕಡಿತ, ಅವರ ಸಂಬಳ ಸಾರಿಗೆಯನ್ನು ಮರುನಿಗದಿಗೊಳಿಸುವ ಅವಕಾಶದ ಲಾಭ ಪಡೆಯಲು ಕಂಪೆನಿಯ ಯತ್ನ ಇದಾಗಿದೆ. ಮುಂದಿನ ಕೆಲವರ್ಷಗಳಲ್ಲಿ ಮೂರನೇ ಒಂದಂಶ ನೌಕರರನ್ನು ಇದೇ ರೀತಿ ಕೆಲಸ ಮಾಡಿಸುವುದು ವಿಪ್ರೋದ ಗುರಿಯಂತೆ. ಕಂಪೆನಿಯ ಸೇವೆ ಪಡೆಯುವ ಇತರ ಕಂಪೆನಿಗಳಿಗೆ ಇದರಿಂದ ಭದ್ರತೆ,ಗೌಪ್ಯತೆಗೆ ಭಂಗ ಬರದು ಎಂದು ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಕಂಪೆನಿ ತೊಡಗಿದೆ.
ವಿಮಾನ ಪ್ರಯಾಣದರಗಳು ಗಗನಚುಂಬಿಯಾಗಿರುವುದೂ ಕಂಪೆನಿಗಳ ಖರ್ಚನ್ನು ಹೆಚ್ಚಿಸಿವೆ. ಅನಗತ್ಯವಾದಾಗ ಪ್ರಯಾಣಿಸುವುದನ್ನು ತಪ್ಪಿಸಿ, ಮಾಹಿತಿ ತಂತ್ರಜ್ಞಾನದ ಕೊಡುಗೆಗಳಾದ ವಿಡಿಯೋ ಕಾನ್ಫರೆನ್ಸ್,ಅಂತರ್ಜಾಲ ದೂರವಾಣಿ ಇವುಗಳನ್ನು ಹೆಚ್ಚು ಹೆಚ್ಚು ಬಳಸುವುದು ಸತ್ಯಮ್, ವಿಪ್ರೋ,ಇನ್ಫೋಸಿಸ್ ಮತ್ತು ಟಿಸಿಎಸ್ ಕಂಪೆನಿಗಳಲ್ಲಿ ಕಂಡು ಬಂದಿದೆ.ಈ ಕಂಪೆನಿಗಳು ತಮ್ಮ ಕಚೇರಿಗಳಲ್ಲಿ ಅಲ್ಲಿಂದಲೇ ಸಂವಹನಕ್ಕೆ ಅನುವು ಮಾಡುವ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡು, ಸಾಧ್ಯವಾದಾಗಲೆಲ್ಲ ಪ್ರಯಾಣಿಸುವುದನ್ನು ತಪ್ಪಿಸಲು ಯತ್ನಿಸುತ್ತಿವೆ. ಇದರಿಂದ ಖರ್ಚು ಮಾತ್ರಾ ಕಡಿಮೆಯಾಗುವುದಲ್ಲದೆ,ಪರಿಸರಪ್ರಿಯ ಕಂಪೆನಿಗಳೆಂಬ ಹೆಗ್ಗಳಿಕೆಯೂ ಕಂಪೆನಿಗಳಿಗೆ ಲಭಿಸುತ್ತದೆ.
ಮರೆಯದಿರಲು ಐಫೋನ್ ಮೂಲಕ ನೆರವು
ನಿಮಗೆ ಮುಖ್ಯವಾದ ವಿಷಯಗಳನ್ನು ಮರೆಯದಿರಲು ಐಫೋನ್ ಮೂಲಕ ನೆರವು ನೀಡುವ ಸೇವೆಯೊಂದನ್ನು http://www.reqall.com ಆರಂಭಿಸಿದೆ. ಸೇವೆಯಿದೀಗ ಉಚಿತವಾಗಿ ಲಭಿಸುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ದರ ವಿಧಿಸುವ ಆಲೋಚನೆ ಕಂಪೆನಿಗಿದೆ. ಕಂಪೆನಿಯ ದೂರವಾಣಿಗೆ ಕರೆ ಮಾಡಿ, ನಿಮಗೆ ನೆನಪಿಡಬೇಕಾದ ವಿಷಯವನ್ನು ತಿಳಿಸಿದರೆ ಮುಗಿಯಿತು. ನೀವು ನಿಗದಿಪಡಿಸಿದ ಸಮಯದಲ್ಲಿ ನಿಮಗೆ ಮಿಂಚಂಚೆ, ಮೊಬೈಲ್, ಎಸೆಮ್ಮೆಸ್ ಇಂತಹ ವಿವಿಧ ಮಾಧ್ಯಮಗಳ ಮೂಲಕ ನೀವು ಮರೆಯಲು ಬಯಸದ ವಿಷಯವನ್ನು ಜ್ಞಾಪಕದಲ್ಲಿರಿಸಲು ಕಂಪೆನಿ ಸಹಾಯ ಮಾಡುತ್ತದೆ. ನೀವು ನೆನಪಿನಲ್ಲಿರಿಸಬೇಕಾದ ಮುಖಗಳನ್ನು,ವಿಷಯಗಳನ್ನು ಮತ್ತು ಸಮಯವನ್ನು ಮರೆಯದಿರಲು ಸಹಾಯ ಲಭಿಸಲಿದೆ. ಅಂಕೆ-ಸಂಖ್ಯೆಗಳು,ಪರೀಕ್ಷೆಯಲ್ಲಿ ಬೇಕಾದ ಯಾವುದೋ ಸೂತ್ರ ಇವನ್ನೆಲ್ಲಾ ವ್ಯವಸ್ಥಿತವಾಗಿ ನೆನಪಿನಲ್ಲಿಟ್ಟುಕೊಳ್ಳುವ ವಿಧಾನವನ್ನು ಸಂಶೋಧಿಸಿದ ಎಂಐಟಿಯ ಮೀಡಿಯ ಪ್ರಯೋಗಶಾಲೆಯಲ್ಲಿ ಸುನೀಲ್ ವೆಮೂರಿಯವರು ನಡೆಸಿದ ಸಂಶೋಧನೆಯನ್ನು ಆಧಾರಿಸಿ, ಈ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಸುನೀಲ್ ಕೂಡಾ ಕಂಪೆನಿಯ ಸ್ಥಾಪಕರಲ್ಲಿ ಓಬ್ಬರಾಗಿದ್ದಾರೆ.'ಮೆಮೊರಿ ಜಾಗರ್' ಎನ್ನುವ ಹೆಸರಿನ ವಿಧಾನದ ಹಕ್ಕುಸ್ವಾಮ್ಯಕ್ಕೂ ಪ್ರಯತ್ನಿಸಲಾಗುತ್ತಿದೆಯಂತೆ.
ದಶಮಾನೋತ್ಸವದ ಸಂಭ್ರಮದಲ್ಲಿ ಗೂಗಲ್: ಕ್ರೋಮ್ ಬ್ರೌಸರ್ ಕೊಡುಗೆ
ಗೂಗಲ್ ಕಂಪೆನಿಯೀಗ ಹತ್ತನೇ ವರ್ಷಕ್ಕೆ ಕಾಲಿಟ್ಟಿದೆ. ಆ ಸಂಭ್ರಮಾಚರಣೆಯಲ್ಲಿಯೋ ಎಂಬಂತೆ ಕಂಪೆನಿಯು ಕ್ರೋಮ್ ಎನ್ನುವ ಅಂತರ್ಜಾಲವನ್ನು ಜಾಲಾಡುವ ಬ್ರೌಸರನ್ನು ಬಿಡುಗಡೆ ಮಾಡಿತು. ವಿಂಡೋಸ್ ಕಂಪೆನಿಯ ಇಂಟರ್ನೆಟ್ ಎಕ್ಸ್ಪ್ಲೋರರ್ ಬ್ರೌಸರಿನ ಹೊಸ ಆವೃತ್ತಿಯ ಬೆನ್ನ ಹಿಂದೆಯೇ ಕ್ರೋಮ್ ಬಿಡುಗಡೆಯಾಯಿತು. ಇದು ಪರೀಕ್ಷಾರ್ಥ ನೀಡಿದ ತಂತ್ರಾಂಶವಾದರೂ ಜನರ ಗಮನ ಸೆಳೆದು,ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾಯಿತು. ಇಂಟರ್ನೆಟ್ ಎಕ್ಸ್ಪ್ಲೋರರ್ಗೆ ಹೋಲಿಸಿದರೆ, ಹೆಚ್ಚು ಚುರುಕುತನ,ಅದಕ್ಕಿಂತ ಕಡಿಮೆ ಕಂಪ್ಯೂಟರ್ ಸಂಪನ್ಮೂಲಗಳಾದ ಸ್ಮರಣಶಕ್ತಿ ಮತ್ತು ಸಂಸ್ಕಾರಕಗಳ ಶಕ್ತಿಯನ್ನದು ಅಪೇಕ್ಷಿಸುತ್ತದೆ.ಟ್ಯಾಬ್ ಮೂಲಕ ಅಂತರ್ಜಾಲ ಪುಟಗಳನ್ನು ತೆರೆಯುವ ಸೌಲಭ್ಯ ಇದರಲ್ಲಿಯೂ ಇದೆ. ಟ್ಯಾಬನ್ನು ಪ್ರತ್ಯೇಕ ವಿಂಡೋ ಆಗಿ ಎಳೆದಿಡುವ ಸಾಮರ್ಥ್ಯ ಕ್ರೋಮ್ನಲ್ಲಿದೆ. ಅಂತಹ ಸೌಕರ್ಯ ಮೊಜಿಲಾದಂತಹ ಮುಕ್ತತಂತ್ರಾಂಶದಲ್ಲೂ ಇರಲಿಲ್ಲ. ಹಾಗೆಯೇ ಯಾವ ಕಾರಣಕ್ಕಾಗಿಯಾದರೂ ಒಂದು ಟ್ಯಾಬನ್ನು ಮುಚ್ಚುವ ಪ್ರಮೇಯ ಬಂದರೂ ಇಡೀ ಬ್ರೌಸರ್ ತಂತ್ರಾಂಶ ಮುಚ್ಚದೆ,ಹೆಚ್ಚು ಬಳಕೆದಾರ ಸ್ನೇಹೀ ಗುಣವನ್ನು ಕ್ರೋಮ್ ಹೊಂದಿದೆ. ಮಾಮೂಲಿ ಬ್ರೌಸರಿನ ಪುಟಕ್ಕಿಂತ ಬಹುಸರಳ ಬಾಹ್ಯಲಕ್ಷಣ ಕ್ರೋಮಿನ ವೈಶಿಷ್ಟ್ಯತೆಯಾಗಿದೆ.ಇತರರಿಗೆ ಜಾಡುಬಿಟ್ಟುಕೊಡದೆ ಅಂತರ್ಜಾಲ ತಾಣಗಳನ್ನು ನೋಡುವ ಮೂಲಕ ಖಾಸಗಿತನದ ರಕ್ಷಣೆ ಮಾಡಿಕೊಳುವ ಸೌಕರ್ಯವನ್ನಿದರಲ್ಲಿ ಕೊಡಲಾಗಿದೆ. ಹೊಸ ಟ್ಯಾಬ್ ಅಥವ ವಿಂಡೋ ತೆರೆದಾಗ,ಹಿಂದಿನ ಸಲ ತೆರೆದಿದ್ದ ಪುಟಗಳ ಕಿರುಚಿತ್ರ ಸ್ನಾಪ್ಶಾಟಿನೊಂದಿಗೇ ಪುಟ ತೆರೆದುಕೊಳ್ಳುತ್ತದೆ.ಬೇಕಾದ ಪುಟದ ಮೇಲೆ ಕ್ಲಿಕ್ಕಿಸುವ ಮೂಲಕ ಅಂತರ್ಜಾಲದ ವಿಳಾಸವನ್ನು ಟೈಪಿಸುವ ಕಷ್ಟವನ್ನು ಉಳಿಸುವಲ್ಲಿ ಬ್ರೌಸರ್ ನೆರವಾಗುತ್ತದೆ.ಮೊಜಿಲಾ ಫೈರ್ಫಾಕ್ಸ್,ಸಫಾರಿ ಮತ್ತು ಒಪೆರಾದಂತಹ ಇತರ ಜನಪ್ರಿಯ ಬ್ರೌಸರುಗಳಿಗೂ ಸ್ಪರ್ಧೆ ನೀಡುವ ಲಕ್ಷಣವನ್ನು ಗೂಗಲಿನ ಕ್ರೋಮ್ ಮೊದಲಲ್ಲೇ ತೋರಿಸಿದೆ.ಇದನ್ನು http://www.google.com/chrome ತಾಣದಿಂದ ಇಳಿಸಿಕೊಳ್ಳಬಹುದು.ಗೂಗಲ್ ತನ್ನ ಶೋಧ ಸೇವೆಗಾಗಿ ಪ್ರಸಿದ್ಧವಷ್ಟೇ.ಇಲ್ಲಿಯೂ ನಿಮಗೆ ಬೇಕಾದ ತಾಣದ ವಿಳಾಸದ ಕೆಲ ಅಕ್ಷರಗಳನ್ನು ಟೈಪಿಸಿದೊಡನೆ ವಿಳಾಸವನ್ನು ಶಿಫಾರಸು ಮಾಡುವ ಸವಲತ್ತು ಇದೆ.
ಕ್ಯಾಲಿಫೋರ್ನಿಯಾದ ಗ್ಯಾರೇಜು ಒಂದರಲ್ಲಿ ಸ್ಥಾಪನೆಯಾದ ಗೂಗಲ್,ಇದೀಗ ಹದಿನೇಳು ಬಿಲಿಯನ್ ಡಾಲರುಗಳ ವಾರ್ಷಿಕ ವ್ಯವಹಾರ ಮಾಡಿ ಐದು ಬಿಲಿಯನ್ ಡಾಲರುಗಳ ಲಾಭ ಗಳಿಸುತ್ತಿದೆ.ಶೋಧ ಸೇವೆಯ ಮಾರುಕಟ್ಟೆಯಲ್ಲಿ ಶೇಕಡ ಎಪ್ಪತ್ತು ಗೂಗಲ್ ಪಾಲು,ಅದೇ ವೇಳೆ ಅಂತರ್ಜಾಲ ಪ್ರಪಂಚದ ಜಾಹೀರಾತಿನಲ್ಲೂ ಶೇಕಡಾ ನಲುವತ್ತರ ಸಿಂಹಪಾಲು ಗೂಗಲಿನದ್ದೇ!ಹತ್ತೊಂಭತ್ತು ಸಾವಿರ ಜನ ಉದ್ಯೋಗಿಗಳು ಗೂಗಲಿನಲ್ಲಿದ್ದಾರೆ.ಮುಂದಿನ ಹತ್ತು ವರ್ಷಗಳಲ್ಲಿ ಕಂಪ್ಯೂಟರ್ ಜಗತ್ತಿನಲ್ಲಿ ತನ್ನ ಬಿಗಿಹಿಡಿತವನ್ನು ಮತ್ತೂ ಸಾಧಿಸುವುದು ಗೂಗಲ್ ಕನಸು. ವಿಡಿಯೋ ತುಣುಕುಗಳನ್ನು ಮತ್ತು ಚಿತ್ರಗಳನ್ನು ಆಧರಿಸಿ ಶೋಧ ಕಾರ್ಯ ಕೈಗೊಳ್ಳುವುದು ಸಾಧ್ಯವಾಗಿಸುವುದು ಕಂಪೆನಿಯ ಮಹತ್ತ್ವಾಕಾಂಕ್ಷೆಯಾಗಿದೆ.
ಕೈಸನ್ನೆಗೆ ಪ್ರತಿಕ್ರಿಯಿಸುವ ಟಿವಿ
ಕೈಸನ್ನೆಯಿಂದಲೇ ಧ್ವನಿ ಏರಿಸಬಲ್ಲ,ಚಾನೆಲ್ ಬದಲಿಸಬಲ್ಲ ಟಿವಿ ಸೆಟ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ.ಇದರಲ್ಲಿ ಕ್ಯಾಮರಾ ಇದ್ದು, ಕ್ಯಾಮರಾಕಣ್ಣಿಗೆ ಸಿಕ್ಕುವ ಹಸ್ತ ಚಲನೆಯನ್ನು ಗ್ರಹಿಸುವ ತಂತ್ರಾಂಶವನ್ನು ಟಿವಿಯಲ್ಲಿ ಅಳವಡಿಸಲಾಗಿದೆ.ರಿಮೋಟ್ ಸಾಧನ ಈ ಟಿವಿಗೆ ಅಗತ್ಯವಿರದು.ತನ್ನ ಮುಂದೆ ಸಾಮಾನ್ಯವಾಗಿ ಕುಳಿತುಕೊಳ್ಳುವ ಟಿವಿಮಂಡೂಕ ಮಹಾಶಯನನ್ನು ಗುರುತಿಸಿ, ಆತನಿಗೆ ಇಷ್ಟವಾದ ಕಾರ್ಯಕ್ರಮ ತೋರಿಸುವ 'ಬುದ್ಧಿಮತ್ತೆ'ಯನ್ನೂ ಟಿವಿ ಹೊಂದಿದೆ ಎಂದು ಅದನ್ನು ಅಭಿವೃದ್ಧಿ ಪಡಿಸಿದ ಬ್ರಿಟಿಷ್ ತಂಡದ ಮುಖ್ಯಸ್ಥ ಕಾಟೇನಿಲ್ ಹೇಳಿದ್ದಾರೆ.
*ಅಶೋಕ್ಕುಮಾರ್ ಎ
ಏನಿದೇನಿದು?ಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೭:೫೫, ಸೆಪ್ಟೆಂಬರ್ ೮, ೨೦೦೮
ಏನಿದೇನಿದುಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೭:೫೪, ಸೆಪ್ಟೆಂಬರ್ ೮, ೨೦೦೮
ನಂಬಿಕೆಯುಳ್ಳವರಿಗಾಗಿ ದ್ವಿತಿ ವಿಜ್ಞ ಮಾಡಬಾರದೆಂದು:

ಪೂರ್ಣ ಆವೃತ್ತಿಗಾಗಿ ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ. ಮುಂದೆ ಓದಿ »
ಕೊಲಂಬಿಯ ಪಟ್ಟಣದ ಸಂತೆ !ಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೭:೩೧, ಸೆಪ್ಟೆಂಬರ್ ೮, ೨೦೦೮
ನನಗೆ ಅಮೆರಿಕದ ರೈತರನ್ನು ಕಂಡು ಮಾತಾಡಿಸುವ ಆಸೆ. ಸಿಯಾಟಲ್ ನಗರಕ್ಕೆ ಹೋದಾಗಲೂ ಅಲ್ಲಿನ ರೈತರಮಾರುಕಟ್ಟೆಗೆ ಹೋಗಿದ್ದೆವು. ಆದರೆ ನಾವು ಹೋದಾಗ ಸಂಜೆಯಾಗಿತ್ತು. ಮಳಿಗೆಗಳು ಮುಚ್ಚಿದ್ದವು. ನನ್ನ ತಮ್ಮ, ನಾದಿನಿ ಕೊಲಂಬಿಯದಲ್ಲಿ ಪ್ರತಿ ಶನಿವಾರ ರೈತರ ಮಾರುಕಟ್ಟೆಯಲ್ಲೇ ತಮಗೆ ಬೇಕಾದ ತರಕಾರಿಹಾಗೂ ಉಪಯುಕ್ತವಸ್ತುಗಳನ್ನು ಖರೀದಿಸುತ್ತಾರೆ. ನಮ್ಮನ್ನೂ ಜೊತೆಯಲ್ಲಿ ಕರೆದುಕೊಂಡುಹೋದರು. ಅಲ್ಲಿಯ ಬಿಳಿಯ ಟೆಂಟ್ ಗಳಲ್ಲಿ ತಮ್ಮ ಉತ್ಪಾದನೆಗಳನ್ನು ಮಾರುತ್ತಿದ್ದ ದೃಷ್ಯವನ್ನು ನಾವು ನೋಡಿದಾಗ, ನಮ್ಮ ಸಂತೆಗೂ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹಾಯಾಗಿಜೀವನವನ್ನು ನಡೆಸುತ್ತಿರುವ ಅಮೆರಿಕನ್ ರೈತರಿಗೂಹೋಲಿಕೆಮಾಡಿದೆ. ಅಮೆರಿಕದ ರೈತರಮಕ್ಕಳು, ತಮ್ಮದೇ ಆದ ವ್ಯಾನ್ ಗಳಲ್ಲಿ ಜೀನುಡುಪುಧರಿಸಿ ಮಂದಹಾಸ, ಹಾಗೂ ತೃಪ್ತಿಯ ಮುಖಭಾವದಿಂದ ತಮ್ಮ ಪದಾರ್ಥಗಳನ್ನು ಮಾರುವುದನ್ನು ನೋಡುವುದೇ ಒಂದು ಸೊಗಸು ! ಇಲ್ಲಿನ ರೈತರನ್ನು ನಾನೆ ಮಾತಾಡಿಸಿ ಖಚಿತಪಡಿಸಿಕೊಂಡು ಬರೆಯುತ್ತಿದ್ದೇನೆ. ಮಿಸ್ಸೂರಿಪ್ರಾಂತ್ಯದ ಬೇಸಾಯಗಾರರು, ಜರ್ಮನ್ ಮೂಲದವರು. ಕೆಲವು ಇಟ್ಯಾಲಿಯನ್, ಸ್ಪಾನಿಷ್ ಹಾಗು ಪೋರ್ಚುಗೀಸ್ ಇದ್ದಾರೆ. ಪೋರ್ಚುಗೀಸ್ ಮೂಲದವರು ಬಹಳ ಕಡಿಮೆ. ಜರ್ಮನ್ ರೈತರು ಬಂದು ಸುಮಾರು ೧೦೦ ವರ್ಷಗಳಾದವಂತೆ. ಅವರ ಜಮೀನುಗಳು ಸುಮರು ೧೦೦ ಎಕರೆಯಷ್ಟು. ಮೆಕ್ಕೆಜೋಳ, ಸೊಯಾಬೀನ್, ತರಕಾರಿಗಳು, ಹಾಗೂ ಹೂಗಳನ್ನು ಹೇರಳವಾಗಿ ಬೆಳೆಯುತ್ತಾರೆ. ಕ್ಯಾಲಿಫೋರ್ನಿಯದಲ್ಲಿ ಭಾರತೀಯ-ಸಿಖ್ ಜನಾಂಗದ ಹಲವು ರೈತರ ಸಂಘಟನೆಗಳಿವೆ. ಕಾರ್ಮಿಕರಾಗಿ ವಲಸೆಬಂದು, ತಮ್ಮ ಪರಿವಾರದಸದಸ್ಯರಿಂದ ಹಲವಾರು ವರ್ಷಗಳು ಬಿಟ್ಟಿದ್ದರಿಂದ ಕೆಲವು ಸಿಖ್ ಜನರು ಇಲ್ಲಿನ ಮೆಕ್ಸಿಕನ್ ಮೂಲದ ರೈತರ ಹೆಣ್ಣುಮಕ್ಕಳನ್ನು ಮದುವೆಯಾಗಿರುವ ಅನೇಕ ದಾಖಲೆಗಳಿವೆ. ಇದರಿಂದ ಮೆಕ್ಸಿಕೋ ಪದ್ಧತಿಯ ಹಲವಾರು ಮುಖ್ಯಾಂಶಗಳನ್ನು ಅವರು ಅರಿತು ಸಾಗುವಳಿಯಲ್ಲಿ ಪ್ರಾವೀಣ್ಯತೆಯನ್ನು ಪಡೆಯಲು ಸಕಾರಿಯಾಯಿತು. ಅಮೆರಿಕದ ಬೆಳೆ ಗೆ ಅಡಚಣೆಯೆಂದರೆ ವಿಂಟರ್ ನಲ್ಲಿ ಆಗುವ ಹಿಮಪಾತ. ಯಾವ ಬೆಳೆಯನ್ನೂ ಆಗ ಬೆಳೆಯಲು ಸಾಧ್ಯವಿಲ್ಲ. ಕ್ಯಾಲಿಫೋರ್ನಿಯ ಇದಕ್ಕೆ ಅಪವಾದ. ಅಲ್ಲಿನ ಹವಾಮಾನ ಹೆಚ್ಚುಕಡಿಮೆ ನಮ್ಮ ಭಾರತದಂತೆ ! ಮುಂದೆ ಓದಿ »
ಕಪ್ಪು ಬಿಳುಪು - 48ಕಪ್ಪು ಬಿಳುಪು - ಸೋಮವಾರ ೦೭:೨೭, ಸೆಪ್ಟೆಂಬರ್ ೮, ೨೦೦೮

ರಾಯಲಸೀಮೆ ಎಂಬ ಕತೆಯೂ ಕುಂವೀ ಮಾಂತ್ರಿಕನ ಜತೆಯೂ::apara:: - ಸೋಮವಾರ ೦೭:೦೭, ಸೆಪ್ಟೆಂಬರ್ ೮, ೨೦೦೮
ನಮ್ಮೆಲ್ಲರ ಮೆಚ್ಚಿನ ಕತೆಗಾರ ಕುಂವೀ ಜತೆ ಒಂದು ಸಂಜೆ ಕಳೆಯುವ ಅವಕಾಶ ಮಾಡಿಕೊಡುತ್ತಿರುವುದು ಛಂದ ಪುಸ್ತಕ. ಬರುವ ಭಾನುವಾರ ಜಯನಗರ ಮೂರನೇ ಬ್ಲಾಕಿನಲ್ಲಿರುವ ಎನ್ ಎಮ್ ಕೆ ಆರ್ ವಿ ಕಾಲೇಜಿನ ಶಾಶ್ವತಿ ಸಭಾಂಗಣಕ್ಕೆ ಬನ್ನಿ. ಉಳಿದಿದ್ದು ಆಮೇಲೆ!
ವಾರಾಂತ್ಯ ಹೇಗಿತ್ತು? ಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೬:೪೯, ಸೆಪ್ಟೆಂಬರ್ ೮, ೨೦೦೮
ವಾರಾಂತ್ಯ ಹೇಗಿತ್ತು? ಸೋಮವಾರ ಬೆಳಿಗ್ಗೆ ಆಫೀಸಿಗೆ ಬಂದರೆ ನಿಮಗೆ ಈ ಪ್ರಶ್ನೆ ಎದುರಾಗಬಹುದು, ಅಥವಾ ನೀವೇ ಈ ಪ್ರಶ್ನೆ ಕೇಳುವವರಲ್ಲಿ ಒಬ್ಬರಾಗಿರಬಹುದು. ಮುಂದೆ ಓದಿ »
ಎಲ್ಲೇ ಹೋಗು ಹಿಂಬಾಲಿಸುವೆ...................,ಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೬:೪೬, ಸೆಪ್ಟೆಂಬರ್ ೮, ೨೦೦೮
ಎಲ್ಲೇ ಹೋಗು ಹಿಂಬಾಲಿಸುವೆ..................., ಕತ್ತಲೆ ಇರಲಿ, ಬೆಳಕೆ ಇರಲಿ, ನಿ ನಿಂತರೆ ನಿಲ್ಲುವೆ, ನಡೆದರೆ ನಡೆವೆ, ನೀ ಯಾರಿಗಾದರೂ ಪ್ರೀತಿಸು, ಎಲ್ಲಿಗಾದರೂ ಹೋಗು ಮುಂದೆ ಓದಿ »
ಮಳೆ ಇರಲಿ, ಬಿಸಿಲೆ ಇರಲಿ,
ನಿನ್ನನು ಬಿಡದೆ ನಾ ಇರುವೆ, ನಿನ್ನೆ ನಾ ಹಿಂಬಾಲಿಸುವೆ,
ನೀ ಮಲಗಿದರೂ ಪಕ್ಕದಲ್ಲೇ ಇರುವೆ,
ನಿನಗೆ ನಿದ್ದೆ ಬರಲೂಬಹುದು.
ನಾ ಮಾತ್ರ ಸದಾ ಎಚ್ಚರ ವಾಗಿರುವೆ.
ಮರಳ (ಲಾರದ) ಶಿಲ್ಪ!ಆಲಾಪ - ಸೋಮವಾರ ೦೬:೩೩, ಸೆಪ್ಟೆಂಬರ್ ೮, ೨೦೦೮
ಪುಟ್ಟ ಗೆಳತಿಗೊಂದು ನುಡಿನಮನ
ಅವಳು ನನಗೇ ಅಂತ ತೆಗೆದುಕೊಟ್ಟ ಮೆಹಂದಿ ಇನ್ನೂ ಪ್ಯಾಕೆಟ್ನಲ್ಲಿ ಹಾಗೇ ಇದೆ. ಅವಳ ಕೆಂಚು ಕೂದಲ ನೋಡಿ ಅವತ್ತು ಕೇಳಿದ್ದೆ. ಕಲರ್ ಹಾಕಿಸ್ಕೊಂಡಿದ್ದೀಯೇನೇ ಅಂತ. ಇಲ್ಲಪ್ಪ. ನಮ್ಮ ಕಾಲೇಜ್ ಕ್ಯಾಂಪಸ್ಲ್ಲಿ ಮೆಹಂದಿ ಗಿಡಗಳಿವೆ. ಅದನ್ನ ಅರೆದು ಹಚ್ಚಿಕೊಂಡಿದ್ದೀನಷ್ಟೇ. ನಿಮಗೂ ಬೇಕಾ? ನೆಕ್ಸ್ಟ್ ಟೈಂ ತಂದ್ಕೊಡ್ತೀನಿ. ಅಂದ್ಲು. ಕೆಲವು ತಿಂಗಳು ಬಿಟ್ಟು ಮತ್ತೆ ಬೆಂಗಳೂರಿಗೆ ಬಂದ್ಲು. ಆಗ ಮರೆಯದೇ ಮೆಹಂದಿ ತಂದಿದ್ದಳು. ಆದರೆ ಎಲೆಯಲ್ಲ ಪ್ಯಾಕೆಟ್. ಮೆಹಂದಿ ಗಿಡದ ಎಲೆ ತರಕ್ ಆಗ್ಲಿಲ್ಲ. ಆದ್ರೆ ಈ ಪ್ಯಾಕೆಟ್ನಲ್ಲಿರೋ ಮೆಹಂದಿ ಚೆನ್ನಾಗಿರತ್ತೆ. ಹಚ್ಕೊಳ್ಳಿ ಅಂದ್ಲು. ಆದ್ರೆ ಆ ಪ್ಯಾಕೆಟ್ ಓಪನ್ ಮಾಡೋದಕ್ಯಾಕೋ ಮನಸ್ಸಾಗ್ತಿಲ್ಲ. ಪ್ಯಾಕೆಟ್ ಓಪನ್ ಮಾಡಿಬಿಟ್ಟರೆ ಅವಳಂತೆ ಆ ಮೆಹಂದಿಯ ಘಮವೂ ಹೊರಟುಹೋಗುತ್ತದೆಯೇನೋ ಎಂಬ ಅಳುಕಿನಿಂದಲೇ ಅದನ್ನ ಹಾಗೇ ಇಟ್ಟಿದ್ದೇನೆ. ಅದು ಇನ್ಮುಂದೇನೂ ಹಾಗೇ ಇರಲೇನೋ.
ನನ್ನ ಅಕ್ಕನ ಮಗಳು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಾಸ್ಕಾಮ್ ಓದ್ತಿದಾಳೆ. ನಿಮ್ಮಲ್ಲಿ ಇಂಟರ್ನ್ಶಿಪ್ ಮಾಡ್ಬೇಕು ಅಂತಿದಾಳೆ. ಅವಳಿಗೆ ಒಂಚೂರು ಗೈಡ್ ಮಾಡಿ ಅಂದ್ರು. ನಾನು ಸರಿ ಚಿಂತೆಬಿಡಿ. ನಾನ್ ಕೇರ್ ತಗೊಳ್ತೀನಿ ಅಂತ ಅವಳ ಮಾವನಿಗೆ ಹೇಳಿ ಫೋನ್ ಇಟ್ಟೆ.
ಫೋನ್ ರಿಂಗಾಯ್ತು. ಶ್ರೀದೇವಿಯವ್ರಾ? ಪೂರ್ಣ ಮಾವ (ಬೇಳೂರು ಪೂರ್ಣಪ್ರಜ್ಞ) ನಿನ್ನೆ ನಿಮಗೆ ಫೋನ್ ಮಾಡಿ ನನ್ನ ಬಗ್ಗೆ ಹೇಳಿದ್ರಂತೆ. ಬೆಂಗಳೂರಿಗೆ ಬಂದಿದ್ದೀವಿ. ಇನ್ನೊಂದ್ ಗಂಟೆಲಿ ನಿಮ್ ಆಫಿಸಿಗೆ ಬರ್ತೀವಿ. ಅಡ್ರೆಸ್ ಕೊಡಿ ಅಂದ್ಲು.
ಒಂದೆರಡು ಬಾರಿ ಗೇಟ್ ಹತ್ರ ಹೋಗಿ ಬಂದೆ. ಅಷ್ಟೊತ್ತಿಗೆ ಅಪ್ಪನನ್ನೇ ಅಂಟಿಕೊಂಡ ಆಳೆತ್ತರದ ಮಗಳು ಗೇಟ್ ಒಳಗೆ ಬಂದಳು. ಸುಮಾರು ವರ್ಷದ ಪರಿಚಯವಿದ್ದಂತ ಒಮ್ಮೆ ನಕ್ಕು ನೀವೇನಾ ಶ್ರೀದೇವಿ ಅಂದ್ಲು. ನಾನು ಹೌದು ಬಾ ಅಂತ ಕರೆದುಕೊಂಡು ಹೋದೆ.
ಅವಳದು ಇಂಟರ್ನ್ಶಿಪ್ ಕನ್ಫರ್ಮ್ ಆಗೋವರೆಗೂ ಅವಳ ಅಪ್ಪ ಸುಮಾರು ಮೂರು ಗಂಟೆಗಳ ಕಾಲ ಹೊರಗೇ ಕುಳಿತುಕೊಂಡಿದ್ದರು. ಅಪ್ಪನ ತಾಳ್ಮೆ ವಿನಯತೆಯೆಲ್ಲ ಮಗಳಲ್ಲಿ ಮೈಗೂಡಿದೆ ಎಂದುಕೊಂಡೆ.
ಚಾಕಚಕ್ಯತೆಯಿಂದ ಕೆಲಸ ಮಾಡಿ ಮುಗಿಸುವ, ಅಷ್ಟೇ ಲವಲವಿಕೆಯಿಂದ, ನಗುಮೊಗದಿಂದ ಎಲ್ಲರೊಂದಿಗೆ ಬೆರೆತು ಸರಳ ಮನಸ್ಸಿನಿಂದ ಮಾತನಾಡುವ ಹುಡುಗಿಯಾದ್ದರಿಂದ ಆಫೀಸಿನಲ್ಲಿ ಎಲ್ಲರ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾಳೆ ಇನ್ನು ಮುಂದೆಯೂ.
ಆಗಾಗ ತನ್ನ ಅಮ್ಮನೊಂದಿಗೆ, ತಂಗಿಯೊಂದಿಗೆ ಫೋನಿನಲ್ಲಿ ಮಾತನಾಡಿಸಿ ಖುಷಿ ಪಟ್ಟು ಖುಷಿ ಹಂಚುವ ಹುಡುಗಿಯಾಗಿದ್ದಳು. ನೀವೇನಾದ್ರೂ ನಮ್ ಮನೆಗೆ ಒಮ್ಮೆ ಬಂದ್ರೆ ಮತ್ತೆ ಬೆಂಗಳೂರಿಗೆ ವಾಪಸ್ ಹೋಗೋದೇ ಇಲ್ಲ. ಇಲ್ಲಿ ಕಾಡು, ತೋಟ, ನದಿ ಎಷ್ಟು ಚೆನ್ನಾಗಿದೆ. ಬನ್ನಿ ಪ್ಲೀಸ್ ಒಂದೆರಡು ದಿನವಾದರೂ ಇದ್ದು ಹೋಗಿ ಅಂತ ಮಗುವಿನಂತೆ ಕೇಳಿಕೊಂಡಿದ್ದಳು. ಅವಳ ಊರಿಗೆ ಹೋಗದೇ ಇದ್ದಾಗ ಮತ್ತೆ ಮಾರಿಜಾತ್ರೆಗೂ ಹಾಗೇ ಫೋನಾಯಿಸಿದ್ದಳು. ಆದರೆ ಅದೆಲ್ಲ ಈಗ ಕಾಡುವ ನೆನಪು.
ನಿನ್ನ ಕಾಲೇಜು ಜೀವನ ಮುಗಿದ ನೆನಪಿಗಾಗಿ ಅಂತ ಗುಜರಾತ್ ಎಂಪೋರಿಯಂ ಗೆ ಕರೆದುಕೊಂಡು ಹೋಗಿ ಒಂದು ಟಾಪ್ ಮತ್ತು ಶಾಲ್ ಕೊಡಿಸಿದಾಗ ಹುಡುಗಿ ಸುತಾರಾಂ ಒಪ್ಪಲಿಲ್ಲ. ಬೇಡಪ್ಪಾ ನನಗಿದೆಲ್ಲ-ಅಂತ ಹಲವಾರು ಬಾರಿ ಸಂಕೋಚದ ಮುದ್ದೆಯಾಗಿದ್ದಳು. ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ನಾನು ಇದೇ ಟಾಪ್ನಲ್ಲೇ ನಿಮ್ಮೆದುರಿಗಿರ್ತೇನೆ ಅಂದವಳು ಈಗ. . .
ಮಾಸ್ ಕಾಮ್ ಮುಗಿಸಿ ಸಂಡೇ ಇಂಡಿಯನ್ ಗೆ ಹಾರಿದಾಗ ಅವಳ ಮುಖ ನೋಡಬೇಕಿತ್ತು. ಮಗುವಿನಂತೆ ಸಂಭ್ರಮಪಟ್ಟಿದ್ದಳು.
ಹದಿನೈದು ದಿನಗಳ ಹಿಂದೆಯಷ್ಟೇ ಫೋನ್ ಮಾಡಿ ಆಫೀಸಿನಲ್ಲಿ ಇವರ ಎಕ್ಸ್ಪೆಕ್ಟೇಶನ್ ರೀಚ್ ಆಗಕ್ಕೆ ಆಗ್ತಿಲ್ಲ ಅಂತ ಕಣ್ಣೀರು ಹಾಕಿದ್ದಳು. ಹುಚ್ಚು ಹುಡುಗಿ ನೀನಿನ್ನೂ ಸೇರಿ ತಿಂಗಳಾಗಿದೆಯಷ್ಟೇ. ಈಗಲೇ ಹೀಗೆಂದರೆ ಹೇಗೆ ಅಂತ ಹೇಳಿ, ಮೊದಲ ಕೆಲಸ ಅಂದರೆ ಎಲ್ಲರಿಗೂ ಹೀಗೇನೇ. ಸ್ವಲ್ಪ ಟೈಂ ಕಳೀಲಿ ಎಲ್ಲಾ ಸರಿಹೋಗತ್ತೆ ಅಂತ ಸಮಾಧಾನಿಸಿದ್ದೆ. ಪುಟ್ಟ ಮಗುವಿನಂತೆ ತಲೆ ಅಲ್ಲಾಡಿಸಿರಬೇಕು ಅವಳು ಕಣ್ಣೀರು ವರೆಸಿಕೊಳ್ಳುತ್ತಾ.
ಆದರೆ ಮೊನ್ನೆ ಶನಿವಾರ ಬೆಳಗ್ಗೆ ಬೇಳೂರು ಸುದರ್ಶನ್ ಫೋನ್ ಮಾಡಿ ಶಿಲ್ಪಶ್ರಿ ಅಂದ್ರು. ಕುಕ್ಕೆಗೆ ಅದೇ ತಾನೇ ಬಂದಿಳಿದಿದ್ದೆ ಮನೆಯವರೆಲ್ಲರೊಂದಿಗೆ. ಹಾಂ ಹೇಳಿ. ಏನು ಹೇಳಿ ಅಂದಿದ್ದಕ್ಕೆ ಅವರು ಶಿಲ್ಪಶ್ರೀ ತೀರಿಹೋದ್ಲಂತೆ ಅಂದ್ರು. ಆಕ್ಸಿಡೆಂಟ್ನಲ್ಲಿ.
ಚಿಕ್ಕಮಗಳೂರಿನಲ್ಲಿ ಪ್ರಜಾವಾಣಿ ಕರೆಸ್ಪಾಂಡೆಂಟ್ ಆಗಿರೋ ಘನಶ್ಯಾಮ್ ಫೋನ್ ಮಾಡಿ ಅದೇ ಸುದ್ದಿ ಹೇಳಿದ. ನಾನು ಅವಳನ್ನ ನೋಡೇ ಇಲ್ಲ ಆದರೆ ಅವಳ ಸಾವಿನ ಸುದ್ದಿ ನನಗೇ ಮೊದಲು ಗೊತ್ತಾಯ್ತು ಅಂದ. ಹೌದು ಶ್ಯಾಮಾ. ಬೆಂಗಳೂರಿಗೆ ಬಂದಾಗ ಸದಾ ಅಂಟಿಕೊಂಡೇ ಇರುತ್ತಿತ್ತದು ಮಗುವಿನ ಹಾಗೆ. ಆದರೆ ಕೊನೆ ಬಾರಿ ನಾನವಳನ್ನು ನೋಡೋದಿಕ್ಕೇ ಆಗ್ಲಿಲ್ವಲ್ಲೋ ಅಂದೆ. ಕುಮಾರಧಾರಾ ನದಿ ಹರಿಯುತ್ತಲೇ ಇತ್ತು. ಅವಳ ಬೆಳದಿಂಗಳಂಥ ಪ್ರತಿಬಿಂಬವನ್ನೂ ಆ ಅಲೆಗಳೆಲ್ಲ ಕಸಿದುಕೊಂಡಿದ್ದವು.
ಬಾಳ ದಾರಿಯಲಿ…ಮುದ್ದು ಮನಸುಗಳಿಗಾಗಿ....ಕಂಡ ಕನಸುಗಳಿಗಾಗಿ - ಸೋಮವಾರ ೦೬:೨೯, ಸೆಪ್ಟೆಂಬರ್ ೮, ೨೦೦೮
A
ನರಸಿಂಹ ತೀರ್ಥ, ಮುಳಬಾಗಿಲುಇಂಡಿಯ ವಾಟರ್ ಪೋರ್ಟಲ್ - ನೀರ ನಿಶ್ಚಿಂತೆ! - ಸೋಮವಾರ ೦೬:೦೩, ಸೆಪ್ಟೆಂಬರ್ ೮, ೨೦೦೮
ಫೋಟೋ: ಹರಿ ಪ್ರಸಾದ್ ನಾಡಿಗ್.
'ಗುಲಾಬಿ ಟಾಕೀಸ್' ನೋಡಿದ್ರಾ?ಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೫:೨೯, ಸೆಪ್ಟೆಂಬರ್ ೮, ೨೦೦೮
ಕಳೆದ ವಾರ ಬಿಡುಗಡೆಯಾದ ವೈದೇಹಿಯವರ ಸಣ್ಣ ಕಥೆಯಾಧಾರಿತ ಗುಲಾಬಿ ಟಾಕೀಸ್ ಚಿತ್ರ, ಹತ್ತನೇ Osian cinefan ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತಲ್ಲದೇ, ಹಿರಿಯ ನಟಿ ಉಮಾಶ್ರೀಯವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದು ಕೊಟ್ಟಿದೆ.
ಕನ್ನಡ ಚಿತ್ರರಂಗಕ್ಕೆ ಗಿರೀಶ್ ಕಾಸರವಳ್ಳಿಯವರ ಮತ್ತೊಂದು ಅತ್ಯಮೂಲ್ಯ ಕಾಣಿಕೆ 'ಗುಲಾಬಿ ಟಾಕೀಸ್'. ಮುಂದೆ ಓದಿ »
ನಂದಿಯ ನೆತ್ತಿ ಮೇಲೆ ಕುಳಿತವನ ಸಿಟ್ಟುಗಿಟ್ಟು ಮುಂತಾದುವು...ನದಿ ಪ್ರೀತಿ - ಸೋಮವಾರ ೦೫:೨೮, ಸೆಪ್ಟೆಂಬರ್ ೮, ೨೦೦೮
ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?ಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೪:೨೭, ಸೆಪ್ಟೆಂಬರ್ ೮, ೨೦೦೮
ಮುಂದೆ ಓದಿ »
ನಾನು ನಿಜವಾಗಿಯು ಹುಚ್ಚಾನ? ಸಂಪದ - 'ಹೊಸ ಚಿಗುರು, ಹಳೆ ಬೇರು' - ಸೋಮವಾರ ೦೪:೧೧, ಸೆಪ್ಟೆಂಬರ್ ೮, ೨೦೦೮
ನಾನು ನಿಜವಾಗಿಯು ಹುಚ್ಚಾನ? ಪ್ರತಿಸಲ ನಿನ್ನ ನೋಡಿದಾಗ ಮನಸಲ್ಲಿ ಉದ್ಭವಿಸುವ ಪ್ರಥಮ ಪ್ರಶ್ನೆ ಇದು, ನಿನಗೆ ಮಾರ್ನಿಂಗ್ ವಾಕ್,ಇವಿನಿಂಗ್ ಟಾಕ್ ಇಷ್ಟ. ಆದ್ರೆ ನನಗೆ ಮಧ್ಯಾನದ ಬಿಸಿಲಂದ್ರೆ ಇಷ್ಟ.
ಇನ್ನು ಉತ್ತರ ಸಿಕ್ಕಿಲ್ಲ, ಉತ್ತರ ನಿನಗೂ ಕೂಡ ಗೊತ್ತಿಲ್ಲ, ಗೊತ್ತಾ? ಹೇಳು ನೋಡೋಣ ?
ನಿನಗೆ ಚೆಲುವಿನ ಚಿತ್ತಾರ ಆದ್ರೆ ನನಗೆ ಆ ದಿನಗಳು ಇಷ್ಟ, ಮುಂದೆ ಓದಿ »
ಕೆಮೆರಾ ಕಣ್ಣಲ್ಲಿ ದುರ್ಗದ ಕೋಟೆ..KA16 ಕನ್ನಡ ಸಾಹಿತ್ಯ ಸಮ್ಮೇಳನ 75 - ಸೋಮವಾರ ೦೩:೫೧, ಸೆಪ್ಟೆಂಬರ್ ೮, ೨೦೦೮
ಚಿತ್ರದುರ್ಗದವರೇ ಆದ ಮಂಜುನಾಥ ಸ್ವಾಮಿ ಅವರ ಹಳ್ಳಿ ಕನ್ನಡ ಬ್ಲಾಗಿನಲ್ಲಿ ಚಿತ್ರದುರ್ಗದ ಕೋಟೆ ಚಿತ್ರಗಳು ರಾರಾಜಿಸುತ್ತಿವೆ. ದುರ್ಗದ ಕೋಟೆಗೆ ಇಂಥ ಸೊಬಗಿದೆಯೇ ಎಂದು ನೋಡಿದ ಅನೇಕರು ಪ್ರತಿಕ್ರಿಯಿಸಿದ್ದಾರೆ. ಆ ಚಿತ್ರಗಳು ಹೇಗಿವೆ ನೀವು ಹಳ್ಳಿಕನ್ನಡ ನೋಡಬಹುದು. ಸ್ಯಾಂಪಲ್ಲಿಗೆ ಈ ಚಿತ್ರ... 
ಪೊರಕೆ ಎಲ್ಲಿದೆ!? - ಮತ್ತೊಂದು ಚರ್ಚೆಓ ನನ್ನ ಚೇತನಾ... - ಸೋಮವಾರ ೦೩:೧೫, ಸೆಪ್ಟೆಂಬರ್ ೮, ೨೦೦೮
A
ನೀರೋ ನೀರೋ ನೀರೋ ನೀರೋ…..!!ಮನಸಿನ ಮರ್ಮರ... - ಸೋಮವಾರ ೦೧:೧೪, ಸೆಪ್ಟೆಂಬರ್ ೮, ೨೦೦೮
|
“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ. |