ಕನ್ನಡಲೋಕ

೧೦ ಮುಂದೆ› ಕೊನೆ»


ಛಂದದ ಹೊಸ ಮೂರು…
ಅವಧಿ - ಗುರುವಾರ ೦೧:೨೯, ಜುಲೈ ೨೯, ೨೦೧೦

ಛಂದ ಪುಸ್ತಕದಿಂದ ಗುಣ, ಕಟ್ಟುಕಥೆಗಳು ಹಾಗು ಹರಿಚಿತ್ತ ಸತ್ಯ ಎಂಬ ಮೂರು ಹೊಸ ಪುಸ್ತಕಗಳು ಪ್ರಕಟಗೊಂಡಿವೆ.   ಗುಣ ಹಾಗು ಹರಿಚಿತ್ತ ಸತ್ಯ ಪುಸ್ತಕಗಳು ಅಪಾರ ಅವರ ಮುಖಪುಟ  ವಿನ್ಯಾಸದೊಂದಿಗೆ ಮೂಡಿ ಬಂದಿವೆ. ಕಟ್ಟು ಕಥೆಗಳು ಪುಸ್ತಕ ವಿನಯ ಕುಮಾರ ಸಾಯ ಅವರ  ಮುಖಪುಟ ವಿನ್ಯಾಸದೊಂದಿಗೆ ಪ್ರಕಟಗೊಂಡಿದೆ.  ಗುಣ ಮುಖಪುಟದ ಚಿತ್ರವನ್ನು  ಜೆನ್ನಿ ಸಾಲಿಸ್‌ ಅವರು ಕ್ಲಿಕ್ಕಿಸಿದ್ದಾರೆ. ಈ ಮೂರೂ ಪುಸ್ತಕಗಳು ಸೋಮವಾರದಿಂದ ಅಂಗಡಿಗಳಲ್ಲಿ ಸಿಗುತ್ತವೆ.


ಮನಸ್ಸಿನ ರಾಮ
ಸಿರಿಗನ್ನಡ ಸಂಪದ - ಗುರುವಾರ ೦೧:೨೩, ಜುಲೈ ೨೯, ೨೦೧೦

ಎತ್ತೆತ್ತ ಓಡಲೂ ರಾಮ

ನಿನ್ನ ಎತ್ತಾಡಿಕೊಂಡು ರಾಮ

 

ಆತ್ತ ಓಡಿ ನೋಡು ಅಲ್ಲೂ ಜನ

ಇತ್ತ ಓಡಿ ನೋಡು ಅಲ್ಲೂ ಜನ

ಎಲ್ಲಿ ಮುಚಿಡ್ದಲೋ ನಿನ್ನ ರಾಮ

ಜನದಿಂದ ದೂರ ಎಲ್ಲಿಗೆ ಓಯಲ್ಲೋ ನಿನ್ನ ರಾಮ

 

ಎತ್ತೆತ ಓಡಲೂ ರಾಮ

ನಿನ್ನ ಎತ್ತಾಡಿಕೊಂಡು ರಾಮ

 

ಜನ ಕಂಡರೆ ಪ್ರೀತಿಯೋ ನಿನಗೆ ರಾಮ

ನೀನು ಮತ್ತೋಡಿ ಬಿಡುವೆ ಅವರೊಳಗೆ ರಾಮ

ನನ್ನ ಹುಚ್ಚೆಷ್ಟು ನಿನ್ನೆಡೆಗೆ ನೋಡು ರಾಮ

 

ಮುಂದೆ ಓದಿ...


ನಿರ್ಧಾರ
ಸಿರಿಗನ್ನಡ ಸಂಪದ - ಗುರುವಾರ ೦೧:೨೧, ಜುಲೈ ೨೯, ೨೦೧೦

 


 


 


ರಾತ್ರಿ ೧೦ ಗಂಟೆಯಾಗಿತ್ತು. ಸರಿತಾ ಆಗ ತಾನೆ ಮನೆಗೆ ತಲುಪಿದ್ದಳು. ಕೈಯಲ್ಲಿ ಬಿಸಿ ಕಾಫೀ ಹಿಡಿದು ಅಂದು ನಡೆದ ಮೀಟಿಂಗ್ ಬಗ್ಗೆ ಯೋಚಿಸುತ್ತಿದ್ದಳು. ಈ ಪ್ರಾಜೆಕ್ಟ್ ಪ್ರಾರಂಭವಾದರೆ ಇನ್ನು ಮೇಲೆ ದಿನ ರಾತ್ರಿ ೧೦ ಗಂಟೆ ಆಗೋದು ನಿಶ್ಚಿತ. ಅರೆ ಇವತ್ತು ಮನೋಜ್ ಯಾಕೆ ಇನ್ನು ಫೋನ್ ಮಾಡಿಲ್ಲ. ಇಷ್ಟು ಹೊತ್ತಿಗೆಲ್ಲ ಅವರ ಫೋನ್ ಬರಬೇಕಿತ್ತು.


ಊಟಕ್ಕೆ ಬಡಿಸಲೆ ? ಎಂಬ ರಾಧಮ್ಮನ ಪ್ರಶ್ನೆ ಸರಿತಾಳನ್ನು ವಾಸ್ತವಕ್ಕೆ ತಂದಿತು. ಅರೆ ರಾಧಮ್ಮ ನೀವಿನ್ನು ಮಲಗಿಲ್ಲವೆ ? ನನಗೆ ಈಗ ಊಟ ಬೇಡ. ನಿಶಾ ಮಲಗಿದಳಾ ?

 

ಮುಂದೆ ಓದಿ...


ಅಭಿಮನ್ಯು ಮತ್ತೆ ಹತನಾದ..
ಅವಧಿ - ಗುರುವಾರ ೦೧:೦೯, ಜುಲೈ ೨೯, ೨೦೧೦

ಈತ ಅಭಿಮನ್ಯು ಹೊರಬರುವ ದಾರಿ ತಿಳಿಯದಿದ್ದರೂ ವ್ಯೂಹದೊಳಗೆ ನಿತ್ಯ ನಿತ್ಯವೂ ನುಗ್ಗುವ ವ್ಯೂಹವೂ ತರಹೇವಾರು ಪಾದಯಾತ್ರೆಯಲಿ ಶುರುವಾಗಿ ಜೇಮ್ಸ್ ಕೆಮರಾನ್ ಭಾಷಣದವರೆಗೆ ಕ್ಯಾನ್ಸರ್ ಉಂಟು ಮಾಡಿ ನಿವಾರಿಸುವ ಶುಂಠಿ ಕಡಲ್ಗಾಲುವೆಯ ಈಜಿ ದಡಸೇರುವ ಕುಂಟಿ ಶತ್ರುಗಳು ಒಬ್ಬಿಬ್ಬರಲ್ಲ ಐನು ಟೈಮಿಗೆ ಕೈಕೊಡುವ ಉಪ್ಪಿಟ್ಟು ಇಸ್ತ್ರಿಗೆ ಲೋಹ ಕಾಯುವಾಗ ಕತ್ತರಿಸಿ ಬೀಳುವ ಕರೆಂಟು ತುರ್ತು ಕರೆ ಬಂದಾಗಲೇ ಮಾಯವಾಗುವ ಒಂಟಿ ಸಾಕ್ಸು ಗೇಟಿನೆದುರು ಡಬಲ್ ಪಾರ್ಕಿಂಗು ತಂಪು ಬಸ್ಸಲ್ಲಿ ಬಿಸಿಯೇರಿಸುವ ಮಾನಿನಿಯರು ಜಗವನ್ನೇ ಗೆಲ್ಲ ಹೊರಡುವ ವೀರನಿಗೆ ಕಾಲವೇ [...]


ಅನನ್ಯ ಅಲ್ಲಮ ೬ (೧)
ಸಿರಿಗನ್ನಡ ಸಂಪದ - ಗುರುವಾರ ೧೨:೪೨, ಜುಲೈ ೨೯, ೨೦೧೦

 

 

ಮುಂದೆ ಓದಿ...


ಯಾಕೆ ತೊಂದರೆ ಕೊಡುವುದು..
ಬಣ್ಣದಚಿಗುರು - ಗುರುವಾರ ೧೨:೨೩, ಜುಲೈ ೨೯, ೨೦೧೦

ಟ್ಯಾಕ್ಸಿ ಬಂದು ನಿಂತಿದೆ..ಸಂಜೆ ಕಳೆದು ಬಹಳ ಹೊತ್ತಾಗಿ..ಪೂರ್ತಿ ಶಹರ..ನಿದ್ದೆಗೆ ಜಾರೋ ಹೊತ್ತಿನಲ್ಲಿ. ಮದ್ಯರಾತ್ರ್ತಿಯ ಪ್ಲೈಟ್, ಏರ್ಪೋಟಿನ ದೂರದ ದಾರಿ ಬಾಕಿ.


ಮನೆಯವರೆಡೆಗೆ ತಿರುಗಿ 'ಬಾಯ್' ಹೇಳಿ, ಮೀಟರು..ಸೀಡಿ ಪ್ಲೇಯರೂ...ಸ್ಪೀಡೋ ಮೀಟರ್ ಡಯಲ್..ಮುಂತಾದವುಗಳಿಂದ,ಒಂದು ಸಣ್ಣ ದೀಪಾವಳಿಯ ಸಂಜೆಯಂತೆ, ಚಿಣಿಮಿಣಿ ಲೈಟು ಹೊತ್ತಿ ಉರಿಯುತ್ತಿರುವ ಟ್ಯಾಕ್ಸಿಯ ಒಳಾಂಗಣ, ಬೆಚ್ಚಗಿನ ಅನುಭೂತಿ ನೀಡುತ್ತದೆ.

ಹೊರಟ ಟ್ಯಾಕ್ಸಿ ನಿಧಾನ ವಾಗಿ ವೇಗ ಪಡೆದು...ಬಿಟ್ಟ ಬಾಣವಾಗುತ್ತಿದೆ. ಎದುರಿನಿಂದ ಬರುವ ಕಾರುಗಳ ಬೆಳಕು ಸಣ್ಣದಾಗಿ ಮೂಡಿ ಬೆಳಕಿನ ಗೆರೆಗಳಂತೆ ನಮ್ಮ ಬದಿಯಲ್ಲಿ ಹಾಯ್ದು..ಬೆನ್ನಹಿಂದೆಲ್ಲೋ ಕರಗುತ್ತಿದೆ.

ದೊಡ್ಡ ರಸ್ತೆಗಳ ರಥಬೀದಿ ಏರ್ಪೋಟ್ ರೋಡ್...ಹೆಚ್ಚು ಜನವಿಲ್ಲ ಬರೀ ಕಾರು...ಇನ್ನೂ ಮುಕ್ಕಾಲು ಘಂಟೆಯ ಹಾದಿ, ಏನು ಮಾಡುವುದು....?

ಫೋನ್ ತೆಗೆದು...ನಂಬರುಗಳ ಊದ್ದ ಪಟ್ಟಿಯಲ್ಲಿ....ಈ ಸರಿ ಹೊತ್ತಿನಲ್ಲಿ ಹೇಳದೇ ಕೇಳದೇ ಪೋನ್ ಮಾಡಿ ಮಾತಾಡಿಸಬಹುದಾದ ನನ್ನ ಗೆಳೆಯ/ಗೆಳತಿ ಯಾರಿದ್ದಾರೆ....???? ಎಂದು ಹುಡುಕುವಾಗ ಅನ್ನಿಸಿದ್ದು..

ಯಾರೂ ಇಲ್ಲ.

ಆಗತಾನೆ ಕೆಲಸ ಮುಗಿಸಿ ಬಂದು ಮನೆಯಲ್ಲಿ ಮಲಗಿರುವವರೇ ಹೆಚ್ಚು..ಇನ್ನು..ಅವರ ಅವರ ಒಡನಾಡಿಯೋಡನೆ ಮಿಕ್ಕವರಿರಬೇಕು...ಯಾಕೆ ತೊಂದರೆ ಕೊಡುವುದು..

ಮೊದಲನಿನ ಹಾಗೆ...ಎಷ್ಟು ಹೊತ್ತಾದರೂ ಸರಿ..ಆತ ಏನು ಅಂದು ಕೊಳ್ಳುತಾನೋ ಎಂದು ಯೋಚಿಸುವ ಅಗತ್ಯ ಇಲ್ಲದೆ ಕರೆ ಮಾಡಿ ಹರಟೆ ಹೋಡೆಯುವ ಅಂಥಹ ಗೆಳೆಯ..ಈಗ ನನ್ನ ಲಿಷ್ಟ್ ನಲ್ಲಿ ಇಲ್ಲ...

ನಿಮ್ಮಲ್ಲಿ ಇದ್ದಾನ?
 


ಮಗೂ, ಅಂದು ನಾ ದಾರಿ ಬಿಡುವೆ!
ಆಸುಮನ (ASUMANA) - ಬುಧವಾರ ೧೧:೫೮, ಜುಲೈ ೨೮, ೨೦೧೦

   “ನಿನ್ನ ಮೋಹದಿ ನನ್ನ ಬಂಧಿಸಿ ಈ ಕತ್ತಲಲಿ ಕೂರಿಸದಿರು ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು”   “ಸುಳ್ಳಲ್ಲ ಮಗು ನಿನ್ನ ಮಾತು ಅಪ್ಪಂದಿರ ಆಂತರಿಕ ಆತಂಕ ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು   ಮಗೂ ಸ್ವಾತಂತ್ರ್ಯ ಬೇಕು ಸ್ವತಂತ್ರರಿಗೂ ಬೇಲಿ ಬೇಕು ಸ್ವಾತಂತ್ರ್ಯದ ಪರಿಧಿಯಲಿ ನಿನ್ನಪ್ಪನಿರಬೇಕು   ಎಲ್ಲವನೂ ಹರಿದೊಗೆದು ಒದ್ದು ನಡೆದರೆ ಮುಂದೆ ಸಮಾಜದ ಮುಂದೆ ಬತ್ತಲಾಗಿ ನಿಲಬೇಕು   ನಿನ್ನ ಅರಿವಿನ ಮಟ್ಟ ನೀನರಿತದ್ದೇ ಅಲ್ಲ ಈ ಅಪ್ಪನೂ ಅರಿಯಬೇಕು ಅರಿತಂದು ನಿನಗೀತ [...]


ಮಗೂ, ಅಂದು ನಾ ದಾರಿ ಬಿಡುವೆ!
ಸಿರಿಗನ್ನಡ ಸಂಪದ - ಬುಧವಾರ ೧೧:೫೦, ಜುಲೈ ೨೮, ೨೦೧೦

'ನಿನ್ನ ಮೋಹದಿ ನನ್ನ ಬಂಧಿಸಿ
ಈ ಕತ್ತಲಲಿ ಕೂರಿಸದಿರು
ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು'


'ಸುಳ್ಳಲ್ಲ ಮಗು ನಿನ್ನ ಮಾತು
ಅಪ್ಪಂದಿರ ಆಂತರಿಕ ಆತಂಕ
ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು


ಮಗೂ ಸ್ವಾತಂತ್ರ್ಯ ಬೇಕು
ಸ್ವತಂತ್ರರಿಗೂ ಬೇಲಿ ಬೇಕು
ಸ್ವಾತಂತ್ರ್ಯದ ಪರಿಧಿಯಲಿ ನಿನ್ನಪ್ಪನಿರಬೇಕು


ಎಲ್ಲವನೂ ಹರಿದೊಗೆದು
ಒದ್ದು ನಡೆದರೆ ಮುಂದೆ
ಸಮಾಜದ ಮುಂದೆ ಬತ್ತಲಾಗಿ ನಿಲಬೇಕು


ನಿನ್ನ ಅರಿವಿನ ಮಟ್ಟ
ನೀನರಿತದ್ದೇ ಅಲ್ಲ ಈ ಅಪ್ಪನೂ
ಅರಿಯಬೇಕು ಅರಿತಂದು ನಿನಗೀತ ದಾರಿ ಬಿಡಬೇಕು'
****************
ಆತ್ರಾಡಿ ಸುರೇಶ ಹೆಗ್ಡೆ



 

 


ನಾನೇನು ಕಮ್ಮಿ ?
peoplenews - ಬುಧವಾರ ೧೦:೩೫, ಜುಲೈ ೨೮, ೨೦೧೦


ಇದೇನಪ್ಪ ಒಂದೇ ಗಳಿಗೆಯಲ್ಲಿ ಮೂರು, ಮೂರು ಫೋಟೋಗಳನ್ನು ಪಬ್ಲಿಷ್‌ ಮಾಡುವಂತಾಯಿತು. ಅದೇನದು ಅವರ ನಾಯಿ ಅಷ್ಟೊಂದು ಗ್ರೇಟಾ... ನೋಡ್ರಿ ಇಲ್ಲಿ ನಮ್ಮ ರಾಂಬೋ ಹೇಗಿದ್ದಾನೆ ಅಂತಾ ಫೋಟೋ ಕಳಿಸಿದ್ದಾರೆ ನೆಲಮಂಗಳದಿಂದ ಸತೀಸ್‌.... ಸರಿಯಪ್ಪ ನೋಡೋಣ .....


ಜೀವನ
ಸಿರಿಗನ್ನಡ ಸಂಪದ - ಬುಧವಾರ ೧೦:೩೩, ಜುಲೈ ೨೮, ೨೦೧೦

 

 

ಸುಡು ಬಿಸಿಲಿನಲ್ಲಿ ಕಂಡ ಮುಖ
 ತಂಪಲ್ಲಿ ಮತ್ತೆ ಕಾಣುವ ತವಕ
ಕಂಡಿತೋ ಎಂಬಷ್ಟರಲ್ಲಿ ಮತ್ತೆ ವಿಮುಖ

ಹೀಗೆಯೇ ನಡೆವುದೇ ನೆಳಲು ಬಿಸಿಲಿನಾಟ
ಜೀವನದ ಸಿಹಿ ಕಹಿ ಪಾಠ
ಪ್ರತಿ ಬಾರಿಯೂ ಹೀಗೆಯೇ ಆಗುವುದೇಕೆ
ತವಕಿಸುವ ಮನವು ನನ್ನದೇ ಏಕೆ?

ಅನಿಸುವುದು, ಒಮ್ಮೊಮ್ಮೆ ಜೀವನ ಇಷ್ಟೇಯೇ
ತವಕಿಸುವ ಹಲುಬುವ ಬಗೆಯೇ
ಮತ್ತೊಮ್ಮೆ ನೆನೆಯುವೆ, ಜೀವನ ಹೀಗೆಯೇ
ನಡೆಯದು ನಾವೆಲ್ಲಾ ಬಯಸುವ ಹಾಗೆಯೇ

ಬಾಳ ಬಂಡಿ ನಡೆಯಲೇ ಬೇಕು
ಇಂದಾಗಿ ನಾಳೆಯು ಬರಲೇ ಬೇಕು
ಕಷ್ಟ ಬಂದರೆ ಇಂದು, ಕಾಯುತಿದೆ ಸುಖವು
ಸುಖದ ನಿರೀಕ್ಷೆಯಲಿ ಕಾಯಲೇಬೇಕು.

 


ಹೇಗಿದೆ ನಮ್ಮ ನಾಯಿ...
peoplenews - ಬುಧವಾರ ೧೦:೨೮, ಜುಲೈ ೨೮, ೨೦೧೦


ಏನ್‌ ಮಾರಾಯಾ? ಇದೆಂಥಾ ನಾಯಿಯಪ್ಪ? ನೋಡಿದರೆ ಭಯ ಆಗುತ್ತೆ, ಅದೇನು ನಿನ್ನ ಮೇಲೆ ಎಗರುತ್ತಿದೆಯಾ, ಭಯ ಆಗ್ತಿಲ್ವಾ!??
ಏನಿಲ್ಲ ಬಿಡಿ... ಅದು ನನ್ನ ಪೆಟ್‌... ನನ್ನ ನೋಡಿದರೆ ಅದಕ್ಕೆ ಖುಷಿಯೋ ಖುಷಿ... ನನ್ನೊಂದಿಗೆ ಅದು ಜಸ್ಟ್‌ ಡ್ಯಾನ್ಸ್‌ ಆಡ್ತಾ ಇದೆ ಅಷ್ಟೆ ಅಂತಾ ಹೇಳ್ತಿದ್ದಾರೆ ಯಲಚಗೆರೆಯ ಲೋಚನ್‌,...
ಈಗಷ್ಟೇ ಬಿ.ಇ. ಕಂಪ್ಯೂಟರ್‌ ಸೈನ್ಸ್‌ ಮುಗಿಸಿರುವ ಇವರಿಗೆ ಅವರ ರಾಕ್‌ ಜೊತೆ ಆಡುವುದೇ ಕೆಲಸವಂತೆ. ನೌಕರಿ ಸಿಕ್ಕ ಮೇಲೆ ತನ್ನ ರಾಕ್‌ ಜೊತೆ ಆಡಲು ಸಮಯ ಸಿಗೋಲ್ಲ ಅನ್ನೋ ಬೇಜಾರಲ್ಲಿ ಈ ಹುಡುಗ ಇದ್ದಾನಂತೆ. ಏನ್‌ ಆಗ್ಲಿ ನಮ್ಮ ಬ್ಲಾಗ್‌ಗೆ ಫೋಟ್‌ ಕಳುಹಿಸಿದ ಅವರಿಗೆ ಥ್ಯಾಂಕ್ಸ್‌....


what a nice ಅಲ್ವಾ!??
peoplenews - ಬುಧವಾರ ೧೦:೨೪, ಜುಲೈ ೨೮, ೨೦೧೦


ಅಬ್ಬಾ ಏನಿದು? ಎಂಥ ಆಕರ್ಷಣೆ ಅಲ್ಲವೇ? ನಿಮ್ಮ ಮನೆಯ ಮುದ್ದು ಸಾಕುನಾಯಿಗಳ ಫೋಟೋ ಕ್ಲಿಕ್‌ ಮಾಡಿ ನಮಗೆ ಕಳುಹಿಸಿ ಕೊಡುತ್ತೀರಾ? ನಮ್ಮ http://peoplesnews-neladajana.blogspot.com/ನಲ್ಲಿ ನಾವು ಪಬ್ಲಿಷ್‌ ಮಾಡುತ್ತೇವೆ> . ಅದು ಮುದ್ದುಸಾಕು ನಾಯಿ ಇತರರನ್ನು ಖುಷಿಪಡಿಸಲಿ. ಅಂದಹಾಗೆ ಕೆಲವು ಸರ್‌ಪ್ರೈಸ್‌ ಗಿಪ್ಟ್‌ ಕೂಡ ಉಂಟು.
aಇಲ್ಲಿಗೆ ಮೇಲ್‌ ಮಾಡಿ. negilu.noga75@gmail.com


ಅಪ್ಪಾ....ದಾರಿ ಬಿಡು
ಸಿರಿಗನ್ನಡ ಸಂಪದ - ಬುಧವಾರ ೧೦:೨೦, ಜುಲೈ ೨೮, ೨೦೧೦

 

    ಅಪ್ಪಾ..ಈ ಕತ್ತಲಿನೊಳಗೆ

    ನನ್ನನ್ನೇಕೆ  ಬಂಧಿಸಿಟ್ಟೆ ?

 

     ಭವಿಷ್ಯದ ಬೆಳಕೆಡೆಗೆ

     ಹೆಜ್ಜೆಯಿಡುವ ಕನಸು

     ಹೊಸಕಿ ಹಾಕಿ ನನ್ನ

     ಮುಗ್ಧತೆಗೆ ಕಾವಲಿನ ಬೇಲಿ

 

     ಹಿಂದಿನ  ಎಂಜಲು ಉಳಿಸಿ

     ಅಮೃತವೆಂದು ಕೈಯಲ್ಲಿ ಹಿಡಿಸಿ

     ನಿನಗಿಷ್ಟವೋ ಕಷ್ಟವೋ  ಎಂದು

     ಎಂದೂ  ಕೇಳದ  ಕಿವುಡನಾದೆಯೇಕೆ?

 

     ಈ ಕತ್ತಲಿನಲ್ಲೆ ಬೆಳಕಿದೆಯೆಂದು

     ನಂಬಿಸಿ..

     ಧರ್ಮದ ಗೋಡೆ ಕಾವಲಿಟ್ಟು

 

ಮುಂದೆ ಓದಿ...


ಎಚ್ಹೆಸ್ವಿ ಬರೆವ ಅನಾತ್ಮ ಕಥನ: ನೀನಿಲ್ಲದೆ …
ಅವಧಿ - ಬುಧವಾರ ೧೦:೦೬, ಜುಲೈ ೨೮, ೨೦೧೦

ಅಳಿಯಲಾರದ ನೆನಹು-೨೧ ಎಚ್ ಎಸ್ ವೆಂಕಟೇಶಮೂರ್ತಿ ೧೯೬೮. ಹೊಳಲಕೆರೆಯ ಒಂದು ಪುಟಾಣಿ ಛತ್ರದಲ್ಲಿ ಈ ಹುಡುಗ ಮತ್ತು ಆ ಹುಡುಗಿಯ ಮದುವೆಯ ಸಂಭ್ರಮ. ಛತ್ರ ವಾಸ್ತವವಾಗಿ ಒಂದು ಗೋಡೌನು. ಕಿಟಕಿಗಳು ಎಲ್ಲೋ ಆಕಾಶದಲ್ಲಿ ಇದ್ದವು. ಸಂಜೆ ಬೀಗರು ಬಂದಾಗ ಹುಡುಗಿಗೆ ಹುಡುಗನನ್ನು ನೋಡಬೇಕೆಂಬ ಆಸೆ. ಅದಕ್ಕಾಗಿ ಅವಳು ಮಂಚದ ಮೇಲೆ ಇಟ್ಟಿದ್ದ ಕುರ್ಚಿಯನ್ನು ಹತ್ತಿ ಗವಾಕ್ಷಿಯಲ್ಲಿ ಅರ್ಧ ಮುಖ ಮಾತ್ರ ಕಾಣಿಸುತ್ತಾ ಹುಡುಗನನ್ನು ನೋಡಲಿಕ್ಕಾಗಿ ನಿಂತಿದ್ದಳು. ಬೀಗರು ಬಂದರು ಬಂದರು ಅಂತ ಯಾರೋ ಕೂಗಿದರು. ಎಲ್ಲಿ ಹೋದರು [...]


ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!
ಸಿರಿಗನ್ನಡ ಸಂಪದ - ಬುಧವಾರ ೦೯:೪೧, ಜುಲೈ ೨೮, ೨೦೧೦

ಸಖಿ, ನಂಬುಗೆಯೇ ದೀವಿಗೆಯು ನಿನ್ನ ಆತ್ಮಬಲವು
ಇರಲಿ ನಿನ್ನ ಬೆಂಬಲಕೆ ಸದಾ ನಿನ್ನೊಳಗಿನ ಛಲವು


ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು
ಎಷ್ಟೇ ಬಿಗಿಯಾಗಿ ಇದ್ದರೂ ನಿನ್ನ ಕೈಯ ಹಿಡಿತವು


ಎದ್ದು ನಡೆ ನೀ ಒದ್ದು ನಡೆ ಬಂಧನದ ಗೋಡೆಗಳ
ಸದಾ ತೆರೆದಿಟ್ಟುಕೊಂಡಿರು ನಿನ್ನ ಈ ಕಣ್ಣು ಕಿವಿಗಳ


ಆತ್ಮಕ್ಕೆ ಪರಮಾತ್ಮನ ಆಸರೆಯೊಂದೇ ಶಾಶ್ವತವು
ಪರಮಾತ್ಮ ಹೊರಗಿಲ್ಲ ಬೇಕಿದನು ಅರಿವ ಮನವು


ಇಲ್ಲಿ ಸಿಕ್ಕ ಸಿಕ್ಕವರೆಲ್ಲಾ ತೋರಬಹುದು ಅನುಕಂಪ
ಮಧುರ ಮಾತುಗಳಿಂದ ನಿನ್ನ ಮನಕೆ ನೀಡಿ ತಂಪ


ನಿನ್ನ ಬುದ್ದಿಯು ಚಂಚಲ ಮನಸಿನ ಬಂಧಿ ಆಗದಿರಲಿ
ಆ ಮನಸ್ಸು ಸದಾ ಇರಲಿ ನಿನ್ನ ಬುದ್ಧಿಯ ಹಿಡಿತದಲಿ

 

ಮುಂದೆ ಓದಿ...


ನಾನೊ೦ದು ತುಳಸೀದಳವಾಗಲೇ..
ಸಿರಿಗನ್ನಡ ಸಂಪದ - ಬುಧವಾರ ೦೯:೧೧, ಜುಲೈ ೨೮, ೨೦೧೦

 ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ,


ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ,


ಎ೦ತು ಪ್ರೇಮಿಸಲಿ ನಿನ್ನ   ನಾ


ನಿನ್ನ ಪೂಜಿಸುವ ತುಳಸೀದಳವಾಗಲೇ?


 


ತಾವರೆ ಹೂವಿನ ಸಾವಿರ ದಳಗಳ೦ತೆ


ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ


ಕಾಣದ ವೇದನೆಯೇ ವೇದಾ೦ತವಾದಾಗ


ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು


ಮನಸಿಗೊ೦ದು ಸಮಾಧಾನವಾದಾಗ


ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ


ಬಳಿಗೆ ಹೋದ೦ತೆ, ಕೆಚ್ಚಲಿಗೇ

 

ಮುಂದೆ ಓದಿ...


ಮನದೊಳ ಮಾತು...
ಸಿರಿಗನ್ನಡ ಸಂಪದ - ಬುಧವಾರ ೦೯:೦೦, ಜುಲೈ ೨೮, ೨೦೧೦

ಮನಸ್ಸೊಂದು ಹೇಳಿದೆ ಮನದೋಳ ಮಾತನ್ನ
ಮುಗಿಲೆತ್ತರಕೇ ಕೂಗುತಿದೆ ಸಾಕೆಂದು ಜೀವನ
ಸೋರಿ ಹೊಗುತಲಿದೆ ಮನಸಿನ ತಾಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಕಣ್ಣಿದ್ದು ಕುರುಡುತನ ಮಾಡಬೇಕೆ ಗುಣಗಾನ
ಮನಸ್ಸಿದ್ದು ಮೂಕತನ ಕಾಡತಲಿದೆ ಮೌನ
ಅರ್ಥವಿಲ್ಲದ ಬದುಕಿನಲ್ಲಿ ನಡೆದಿದೆ ನನ್ನ ಪಯಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಕಲವಿದನು ಎಂಬವ ನಾ, ಕವಿಯಾಗಬಲ್ಲೇನಾ??
ಕವಿತೆಗಳನು ಬಲ್ಲೇನಾ, ಕನಸುಗಳನು ಕಾಣೇನಾ??
ಗಡಿಯಾರದ ಜೀವನಾ ಮುಳ್ಳೇ ಮುಳ್ಳು ಈ ದಿನ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಹಾಡನ್ನು ಹಾಡುತ್ತ ನಾ, ಲೋಕ ನಗಿಸಬಲ್ಲೇ ನಾ,
ಕಡೆ ಹಾಕಲಾಗದಿರುವ ಮನದೋಳದ ಬಡತನ
ಕೊನೆ ಆಗಲಿ ಈ ದಿನ, ಮಿತಿಯಿಲ್ಲದೆ ಬದುಕೆನಾ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಸೇರಬೆಕು ಸ್ಮಶಾನ..... ಸೇರಬೆಕು ಸ್ಮಶಾನ...

 


ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)
ಸಿರಿಗನ್ನಡ ಸಂಪದ - ಬುಧವಾರ ೦೮:೪೦, ಜುಲೈ ೨೮, ೨೦೧೦

 


ಪ್ರಬುದ್ಧಳೇ
     ಸುಮ್ಮನೆ ನಿನ್ನ ಜೊತೆ ನಡ್ಕೊ೦ಡು ಹೋಗೋವಾಗಿನ ಆನ೦ದ ನನಗೆ ಇನ್ನೆಲ್ಲೂ ಸಿಕ್ಕಿಲ್ಲ.  ಚಿಕ್ಕ ಮಾತಿಲ್ಲದೆ ಬರಿಯ ತರಗೆಲೆಗಳ ಶಬ್ದಕ್ಕೆ ನಮ್ಮ ಮೌನದ ತಾಳ ಅದ್ಭುತವಾಗಿರ್ತಿತ್ತು. ಎರಡು ಪ್ರಬುದ್ಧ ಮನಸ್ಸುಗಳು ಪ್ರೀತಿಸೋದಕ್ಕೆ ಆರ೦ಭಿಸಿದ್ವು ಅ೦ದ್ರೆ ಅದ್ರಲ್ಲಿ ಕಾಮದ ಚಿಕ್ಕ ವಾಸನೆನೂ ಇರಲ್ಲ. ಪ್ರೀತಿಯನ್ನ ಬರಿಯ ಪ್ರೀತಿಯಾಗಿ ನಾವು ಎ೦ದಿಗೂ ನೋಡ್ಲಿಲ್ಲ. ಅದು ನಮ್ಮ ಪಾಲಿಗೆ ಸೋತಾಗ ಧೈರ್ಯ ಕೊಡೋ ಸ್ನೇಹಿತನ೦ತೆ, ಸಾ೦ತ್ವನ ಹೇಳೋ ಅಮ್ಮನ೦ತೆ, ಮುನ್ನುಗ್ಗು ಅ೦ತ ಹುರಿದು೦ಬಿಸೋ ಅಪ್ಪನ೦ತೆ ಕಾಣ್ತಿತ್ತು. ಇದೆಲ್ಲದರ ನಡುವೆ ಅತ್ತು ಸಮಾಧಾನ ಮಾಡ್ಕೋಬೇಕು ಅನ್ನಿಸಿದಾಗ ಸಿಗುವ ಪ್ರೇಮಿಯ ಭುಜದ ಹಾಗೆ ಈ ಪ್ರೀತಿಯಿತ್ತು, ನನ್ನ ನಿನ್ನ ನಡುವೆ.

 

ಮುಂದೆ ಓದಿ...


ಜಪಾನಿನ ಹಕ್ಕಿ ಮಾತನಾಡಿತು…
ಅವಧಿ - ಬುಧವಾರ ೦೬:೦೪, ಜುಲೈ ೨೮, ೨೦೧೦

-ಉದಯಶಂಕರ್ ಪುರಾಣಿಕ್ ಒಮ್ಮೆ ಕೆಲಸ ನಿಮಿತ್ತ ಜಪಾನ್ ದೇಶಕ್ಕೆ ಹೋಗಿದ್ದಾಗ, ಟೋಕಿಯೋ ಮಹಾನಗರದ ಪ್ರತಿಷ್ಠಿತ ಹೋಟಲ್ ವೊಂದರಲ್ಲಿ ನನ್ನ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು. 3679 ಕೋಣೆಗಳು,ಅನೇಕ ರೀತಿಯ ಉಪಹಾರ ಗೃಹಗಳು,ಹಲವಾರು ಕ್ರೀಡೆ ಮತ್ತು ಮನೋರಂಜನೆ ಸೌಲಭ್ಯಗಳನ್ನು ಹೊಂದಿರುವ ಷಿನಗಾವಾ ಪ್ರಿನ್ಸ್ ಹೋಟಲ್ ಒಂದು ಪುಟ್ಟ ಮಾಯಾ ನಗರಿಯಂತಿತ್ತು. ಈ ಹೋಟಲ್ ಆವರಣದಲ್ಲಿದ್ದ ಬೃಹತ್ ಮರವೊಂದರಲ್ಲಿ ವಾಸವಾಗಿತ್ತು ಈ ಗುಬ್ಬಿಯ ಗಾತ್ರದ ಪುಟ್ಟ ಹಕ್ಕಿ. ನನಗೆ ನೀಡಿದ್ದ ಕೋಣೆಗೆ ಬಂದಾಗ,ಅಭ್ಯಾಸದಂತೆ ಮೊದಲು ಕಿಟಕಿಗಳನ್ನು ತೆರದೆ.ಆಗಲೇ ನನ್ನ-ಬಿಷೌಜೋ ಮುಖಾಮುಖಿಯಾಗಿದ್ದು. “ಬಿಷೌಜೋ ” ಎಂದು ಕರೆದಾಗ,ಅದಕ್ಕೆ ಈ [...]


ಶೌಚಾಲಯ ಎಂಬ ನರಕ
ಓದಿದ್ದು ಕೇಳಿದ್ದು ನೋಡಿದ್ದು - ಬುಧವಾರ ೦೫:೩೨, ಜುಲೈ ೨೮, ೨೦೧೦











































































prajavani
-----------------------------------------------
ಮೆಜೆಸ್ಟಿಕ್ ಈಗ ಹಾಗಿಲ್ಲ
-------------------------------------------------------------
ಊಟ ಉದಕಗಳಿಲ್ಲದೆ ಎಷ್ಟು ಕಾಲ ಬದುಕಬಹುದು?
---------------------------------------------------------













 dna
----------------------------------------------------------------
ಸಸ್ಯಾಹಾರವೆ ಸಹಜ
--------------------------------------
ಶಿಕ್ಷಣದ ಮೂಲಕ ಮಾಹಿತಿ ಹಕ್ಕು
---------------------------------------

ಸೋರಿಕೆ  ತೆರೆದಿಟ್ಟಿರುವ ಕಹಿ ಸತ್ಯ
------------------------------------------------
hindu

========================================
IE






 ಗುಂಡ್ಯಾ :ಗಂಡಾಂತರ
----------------------------------------------
ಶೌಚಾಲಯ ಎಂಬ ನರಕ
ನಡು ಸಾಗರದ ನಡುವೆ ಪ್ಲಾಸ್ಟಿಕಿ ಸಾಹಸ
----------------------------------------------------------


೧೦ ಮುಂದೆ› ಕೊನೆ»

“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ.