ಕನ್ನಡಲೋಕ

೧೦ ಮುಂದೆ› ಕೊನೆ»


ಕೇವಲ ನೆನಪಿಗಾಗಿ..
...ಅನುರಾಗ ನನ್ನನು ಕವಿ(?)ಯಾಗಿ ಮಾಡಿದೆ...! - ಸೋಮವಾರ ೧೧:೦೪, ಫೆಬ್ರುವರಿ ೮, ೨೦೧೦

ಮನವೇ ಪ್ರಕೃತಿ..
ಆಗಸವೇ ನಿರೀಕ್ಷೆ...
ಭಾವವೇ ಸಾಗರ
ಕನಸಿನ ತೀರದಲ್ಲೇ
ಆಸೆಗಳ
ಮರಳ ಗೂಡು...
ಕಲ್ಪನೆಗಳೇ
ಆಗಾಗ ಮೂಡುವ
ಅಲೆಗಳಂತೆ....


ಎಲ್ಲವೂ ಸರಿ ಇದ್ದರೆ...
ಮನದ ಪ್ರಕೃತಿ
ನಗುತಲೇ ಇದ್ದರೆ...
ಆಸೆಗಳ ಮರಳ ಗೂಡು
ಹಾಗೇ ಉಳಿಯಬಹುದು
ಎಂದಿಗೂ ಅಳಿಯದ
ನೆನಪಿನ ಕೃತಿಯಾಗಿ...


ಅಕಸ್ಮಾತ್...
ಮನದ ಪ್ರಕೃತಿ ಮುನಿದು....
ಭಾವಗಳ ಸಾಗರ
ಹುಚ್ಚಾಗಿ ಕುಣಿದು...
ಕಲ್ಪನೆಗಳ ಸುನಾಮಿ ಅಲೆಗಳು..
ಭೋರ್ಗರೆದು ಅಪ್ಪಳಿಸಿದರೆ...
ಆಸೆಗಳ ಮರಳ ಗೂಡು
ಕೊಚ್ಚಿ ಹೋಗಬಹುದು...
ಅಳಿದು ಹೋಗಿ
ಕಾಡಬಹುದು..
ಕೇವಲ ನೆನಪಾಗಿ... !


ಕೊನೆಗೆ ....
ಉಳಿಯುವುದು...
ಆಗಸವೆಂಬ ನಿರೀಕ್ಷೆ ಮಾತ್ರ...
ಆಗಸ ಎಂದಿಗೂ ಅಳಿಯದ ಅಚ್ಚರಿ...
ಮತ್ತೆ ಮರಳ ಗೂಡು ಕಟ್ಟಬೇಕೆ... ?
ಪ್ರಕೃತಿ ಸಿದ್ಧಳಾಗುವ ವರೆಗೂ ಕಾಯಬೇಕು ...
ಅಲ್ಲಿಯವರೆಗೂ...
ನಿರೀಕ್ಷೆಯ ಆಗಸವನ್ನೇ ನೋಡಬೇಕು..
ಕೇವಲ ನೆನಪಿಗಾಗಿ..


ಬಲ್ಲಿರೇನಯ್ಯ: ಕ್ರಿಕೆಟ್ ತಂಡಕ್ಕೆ ಯಕ್ಷಗಾನದ ಸಹಾಯ
Blogspot on ಪ.ಗೋ - ಸೋಮವಾರ ೧೦:೪೪, ಫೆಬ್ರುವರಿ ೮, ೨೦೧೦

ಚಿತ್ರ ಕೃಪೆ : ಶ್ರೀ.ಹಾಲ್ದೊಡ್ಡೇರಿ ಸುಧೀಂದ್ರ, ಬೆಂಗಳೂರು.

ಬಲ್ಲಿರೇನಯ್ಯ:
೨೦೧೦ ರ ದಶಕದಲ್ಲಿ ಕ್ರಿಕೆಟ್ ತಂಡಗಳಿಗೆ ರಾಷ್ಟ್ರೀಯ, ಬಹುರಾಷ್ಟ್ರೀಯ ಸಂಸ್ಥೆಗಳು ಪ್ರಾಯೋಜಕರಾಗಿ ಸಹಾಯ ಮಾಡುತ್ತಿದ್ದಾರೆ.

೧೯೬೦ ರ ದಶಕದಲ್ಲಿ ಶ್ರೀ.ಕೃಷ್ಣ ಜನ್ಮ,ಚಂದ್ರಾವಳೀ ವಿಲಾಸ ,ಅಗ್ರಪೂಜೆ ಎಂಬ ಕಥಾಭಾಗವನ್ನು ಆಯೋಜಿಸಿ ಕ್ರಿಕೆಟ್ ತಂಡಕ್ಕೆ ಕರಾವಳಿಯ ಗಂಡುಗಲೆ ಯಕ್ಷಗಾನ ಸಹಾಯ ಮಾಡಿತ್ತು ಎಂದು ಕನ್ನಡ ನಾಡಿನ ಹಿರಿಯ ಪತ್ರಕರ್ತ 'ಸುದ್ದಿಜೀವಿ' ಬೆಂಗಳೂರಿನ ಶ್ರೀ. ಹೆಚ್.ಆರ್.ನಾಗೀಶ ರಾವ್ ಸಂಗ್ರಹದಲ್ಲಿದ ಮಂಗಳೂರಿನ ಅಂದಿನ ಕನ್ನಡ ಸಂಜೆ ದಿನಪತ್ರಿಕೆ 'ವಾರ್ತಾಲೋಕ' ದಿನಾಂಕ ೧೪ ಡಿಸೆಂಬರ್ ೧೯೬೩ ರ ಆವೃತ್ತಿಯಿಂದ ತಿಳಿದು ಬಂದಿದೆ.


ಸೀತಾ ನದೀ ತೀರದಲ್ಲಿ ಮನ ಕದ್ದು, ಕೊನೆಗೆ ಸದ್ದಿಲ್ಲದೇ ಎದ್ದು ಹೋದ 'ಚೆಂದುಳ್ಳಿ'ಗೆ...!!!
ಸಿರಿಗನ್ನಡ ಸಂಪದ - ಸೋಮವಾರ ೧೦:೪೨, ಫೆಬ್ರುವರಿ ೮, ೨೦೧೦

ಕಳೆದೊಂದು ವಾರದಿಂದ ಮನಸು ಎಂದಿನಂತಿಲ್ಲ. ಯಾಕೋ ಓಲಾಡುತಿದೆ, ಹಾರಾಡುತಿದೆ. ಜೀವನದ ಪಯಣದಲ್ಲಿ ಅದೆಲ್ಲೋ ಸಣ್ಣ ಗುರುತು ಹಾಕಿ ಹೋದವಳು ಯಾಕೋ ಕಾಡುತ್ತಿದ್ದಾಳೆ. ನಾನು ಅವಳನ್ನು ಕೊನೆಯದಾಗಿ ನೋಡಿದ್ದು ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಕಡೆಯ ಪರೀಕ್ಷೆಯಾದ ಕನ್ನಡ ಪರೀಕ್ಷೆಯಂದು. ಅನಂತರ ಎಲ್ಲಿ ಹೋದಳೋ, ಹೇಗಿದ್ದಾಳೋ, ಈಗ ಎಲ್ಲಿದ್ದಾಳೋ ಒಂದೂ ಗೊತ್ತಿಲ್ಲ. ಆಕೆಯ ಸುಳಿವಂತೂ ಇಲ್ಲವೇ ಇಲ್ಲ. ಅಂದು ಕನ್ನಡ ಪರೀಕ್ಷೆ ಮುಗಿಸಿ ಬಂದ ದಿನ ಒಂದು ಮುಗುಳ್ನಗೆ ಬೀರಿ 'ನಾಳೆ ಬಳಗ್ಗೆ ಹತ್ತೊವರೆಗೆ ಮಾಮೂಲಿ ಜಾಗದಲ್ಲಿ ಸಿಗೋಣ ಕಣೋ, ನಿನ್ನ ಹತ್ರ ತುಂಬಾ ಮತಾಡ್ಬೇಕಿದೆ' ಅಂತ ಹೇಳಿ ಮತ್ತೆ ನಂಗೆ ಸಿಗದೇ ನನ್ನ ಜೀವನದಿಂದ  ಮರೆಯಾಗಿ ಎದ್ದುಹೋದ, ಹುಡುಗೀ ನೀನ್ಯಾಕೆ ಮತ್ತೆ ನನಗೆ ನೆನಪಾದೆ? ನೀನ್ಯಾಕೆ ಮತ್ತೆ ನಂಗೆ ಸಿಗದೇ ಹೋದೆ? ಎಲ್ಲಿ ನನ್ನೆದುರಿಂದ ಕಣ್ಮರೆಯಾಗಿ ಹೋದೆ?

 

ಮುಂದೆ ಓದಿ...


ಗಣಪತಿಯ ಬಗ್ಗೆ.
ಸಿರಿಗನ್ನಡ ಸಂಪದ - ಸೋಮವಾರ ೧೦:೧೫, ಫೆಬ್ರುವರಿ ೮, ೨೦೧೦

ಗಣಪತಿ.

 

ಮುಂದೆ ಓದಿ...


ದಾರಿ...
ಅನುಭೂತಿ...... - ಸೋಮವಾರ ೦೮:೩೯, ಫೆಬ್ರುವರಿ ೮, ೨೦೧೦

ಹಲವಾರು  ದಾರಿಗಳಿದ್ದವು ಅಲ್ಲಿ...
ಕೆಲವು ತಿರುವುಗಳೂ ಸಹ
ನಾ ನಡೆವ ದಾರಿಯಲೇ ಏಕೆ ಎದುರಾದೆ?
ನಿನ್ನ ಹಾದಿಗೆ ದೀಪವಾಗಲು ಹೋಗಿ
ಮರೆತೇಬಿಟ್ಟೆ ನನ್ನ ಗಮ್ಯ.....

ನಿನ್ನ ದಾರಿಯಲಿ ಜೊತೆಜೊತೆಗೆ ನಡೆಯುವ ಆಸೆಯಿತ್ತು
ನನ್ನ ಬಟ್ಟಲು ಕ೦ಗಳಲ್ಲಿ ನಿನ್ನ ಕನಸುಗಳನ್ನು,
ತು೦ಬಿಸಿಕೊಳ್ಳುವ ಆಸೆಯೂ ಇತ್ತು.
ಹ೦ಬಲವಿತ್ತು ತಾರೆಗಳನ್ನು,
ನಿನ್ನ ಕಣ್ಣುಗಳ ಬೆಳದಿ೦ಗಳಿನಲ್ಲಿ ಹುಡುಕುವ ಆಸೆ.
ಅನ೦ತದ ಮಾತಿರಲಿ...
ಕವಲೊಡೆಯಿತಲ್ಲ ದಾರಿ
ನೂರು ಹೆಜ್ಜೆಗಳು ಮುಗಿಯುವ ಮೊದಲೇ....

ಹಾಗೊ೦ದು ವೇಳೆ ನೀ ನನಗೆ
ಸಿಗದಿರುತ್ತಿದ್ದರೆ....
ರೆ.....................
ಹುಡುಕುತ್ತಿದ್ದೇನೆ ಉತ್ತರ ಇನ್ನೂ...!


ಫಲಕೋತ್ಸವ ಸೀಸನ್ ೩-೪
ಚಿತ್ರ-ವಿಚಿತ್ರ - ಸೋಮವಾರ ೦೮:೩೦, ಫೆಬ್ರುವರಿ ೮, ೨೦೧೦

ತಮ್ಮನ್ನು ತಾವು ಸೋಂಬೇರಿ ಎಂದು ನಮ್ಮಂತೆಯೇ ರಾಜಾರೋಷವಾಗಿ ಹೇಳಿಕೊಳ್ಳುವ ಸಹಬ್ಲಾಗಿಗ ಶ್ರೀನಿಧಿ ಡಿ.ಎಸ್ ಅವರು ನಮಗಾಗಿ ಈ ಫೋಟೋ ಕಳಿಸಿಕೊಟ್ಟಿದ್ದಾರೆ. ಫೋಟೋವನ್ನು ಸಾಂಗವಾಗಿ ನೋಡಿ, ಅದರಲ್ಲಿರುವುದನ್ನ ಜಾಗರೂಕರಾಗಿ ಓದಿ. ಆಗ ನಿಮಗೆ ಅರ್ಥ ಆಗತ್ತೆ ಈ ಫಲಕ ಏನು ಹೇಳಕ್ಕೆ ಹೊರಟಿದೆ ಅಂತ.



ಮತ್ತೊಂದಿಷ್ಟು ಪಂಚಕಗಳು...
ದೇಸಾಯರ ಅಂಬೋಣ - ಸೋಮವಾರ ೦೮:೨೦, ಫೆಬ್ರುವರಿ ೮, ೨೦೧೦

೭) ಪೇಟೆ ಹೊತ್ತಿ ಉರೀತಾದೆ ಕೇಳಿದ್ರಾ
ಗೋಣಿ ತುಂಬ ದುಡ್ಡೊಯ್ದು ಕ್ಯಾರಿಯಲ್ಲಿ
ದಿನಸಿ ತಂದವ್ರ ಪಾಡು...
ಚಿಂತೆ ಬ್ಯಾಡ ನಮ್ಮ ನಾಳೆಗಳ ಬೆಳಗಾಕೆ
ತಯಾರಿಸ್ತಾರಂತೆ ಹೊಸ ಕರಡು.

೮) ಅರವತ್ತು ಮುಗೀತು ಇನ್ನೆನು
ಅರಳು ಮರಳು ಸುರು
ಅಂದ್ರು ಒಬ್ರು...
ಹುಟ್ಟೋವಾಗ್ಲೆ ತಲೆರಿಪೇರಿಯಾಗಾಕಿತ್ತು
ಇನ್ನಾದ್ರು ಹಚ್ಕೋಳಿ ಸುರು ಮತ್ತೊಬ್ರಂದ್ರು....!
(ಮೊನ್ನೆ ೨೬/೦೧ ಕ್ಕೆ ಈ ದೇಶಕ್ಕೆ ೬೦ ತುಂಬ್ತು..)

೯) ಇಟಾಲಿಯನ್ ನಲ್ಲಿ ಪತ್ರ
ಬರೀತಾರಂತೆ ಮೋದಿ
ಸೋನಿಯಾಗೆ,, ಬೆಲೆ ಬಿಸಿ ಬಗ್ಗೆ
ತಿನ್ನೋ ಪಾಸ್ತಾದ ರುಚಿ ಕಮ್ಮಿ ದಿನಾ ಕಳ್ದಂಗೆ
ಚಿಂತೆಯಾಗೈತೆ ಮೇಡಮ್ಗೆ...

೧೦) ಹಲ್ಲು ಮುರ್ಕೊಂಡ ಮುದಿಹುಲಿ ಮುಂಬೈಲಿ
ಗರ್ಜನೆ ಅಂತತಿಳ್ಕೊಂಡ್ ಕೂಗ್ದಾಗ
ಗೊಣಗಾಟ ಮಾತ್ರ ಕೇಳಿದೆ...
ಸೋತ ಸಿಟ್ಟು ತಡೀಕಾಗ್ದೆ ಅಮಾಯಕ್ರ
ಮ್ಯಾಲೆ ಎಗರಾಡಿದೆ....

೧೧) ಬಸವನ ಹುಳಕ್ಕೂ ಮೆಟ್ರೋ ನಿಗಮಕ್ಕೂ
ಓಡುವ ಪಂದ್ಯ
ಇತ್ತಂತೆ....
ಹುಳುವನ್ನು ಸೋಲಿಸಿದ 'ನಮ್ಮ ಮೆಟ್ರೋ'
ಬೀಗಿತಂತೆ.....!

೧೨) ರಾಹುಲ್ ಅಂತಾನೆ ಬಿಹಾರಿಗಳು.
ಭಾಯಿಗಳು.. ಅಮರ್ ಗೀಗ ಮಾಜಿ ಶತ್ರು
ಮಾಯಾವತಿ ಬೆಹನು..
ರಾಜಕೀಯ ದೊಂಬರಾಟದಲ್ಲಿ ಶ್ರೀಸಾಮಾನ್ಯನೇ
ನಿಜವಾದ ಬಫೂನು...!

೧೩) ಮಾಜಿ ಉಗ್ರನಿಗೂ ದಕ್ಕಿತು ಪದ್ಮಶ್ರೀ..
ಜಿಂಕೆ ಕೊಂದ ಸೈಫು ಪ್ರಶಸ್ತಿ ಪಡೆದು
ಆದ ಸೇಫು
ಗೌರವಗಳೇ ಮಾರಾಟವಾಗೋವಾಗ
ಹಳೆದೆಲ್ಲ ಆಗೋಗಿದೆ ಮಾಫು....

೧೪) ರಾಹುಲ್ ಅಪ್ರಬುದ್ಧ ಕಾರಣ ಅವ ಇನ್ನೂ
ಬ್ರಹ್ಮಚಾರಿ.. ಇದು ಠಾಕ್ರೆ ಮಾಡಿದ
ಹೊಸ ಸಂಶೋಧನೆ...
ಆ ಮುದಿ ತಲೆಯಲ್ಲಿ ಇನ್ನೆಷ್ಟಿವೆಯೋ
ಇಂಥ ಬಾಲಿಶ ಯೋಚನೆ....!

೧೫) ಸಿಡಕ್ಯಾಕೆ ಠಾಕರೆ ಸಾಹೇಬಗೆ
ಅಂಬಾನಿ, ಸಚಿನ್ ಹಾಗೂ ಶಾರುಖ್
ಮೇಲೆ
ಅವರಿಂದಲೆ ಮುಂಬೈಗೊಂದು ಕಳೆ
ಇಲ್ವಾದ್ರೆ ನಿನ್ನ ಮುಖಕ್ಕೆ ಅದೇನು ಬೆಲೆ...?


‘ನುಡಿನಮನ’- ಈ ದಿನದ ಬಿಸಿ ಬಿಸಿ
ಅವಧಿ - ಸೋಮವಾರ ೦೮:೧೦, ಫೆಬ್ರುವರಿ ೮, ೨೦೧೦

ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ‘ಅವಧಿ’ ಮತ್ತು ‘ಆಲೆಮನೆ’ ಜಂಟಿಯಾಗಿ ರೂಪಿಸಿರುವ ‘ನುಡಿನಮನ’ದ ಈ ದಿನದ ಸ್ಪೆಷಲ್- ಶಶಿಧರ್ ಭಟ್ – ಕನ್ನಡ ಪತ್ರಿಕೋದ್ಯಮದ ಹಿರಿ ತಲೆ. ಸುವರ್ಣ ನ್ಯೂಸ್ ನಲ್ಲಿದ್ದು ಈಗ ಜುಪಿಟರ್ ನೆಟ್ ವರ್ಕ್ ನಲ್ಲಿದ್ದಾರೆ. ಅವರ ಅನುಭವ ಅಪಾರ. 80 ರ ದಶಕದಿಂದೀಚೆಗಿನ ಸಾಹಿತ್ಯ ಸಮ್ಮೇಳನಗಳ ಹಿನ್ನಲೆಯಲ್ಲಿ ಅವರು ಸಾಹಿತ್ಯ ಮತ್ತು ರಾಜಕೀಯದ ಸೂಕ್ಷ್ಮ ಸಂಬಂಧದ ಕುರಿತು ಮನೋಜ್ಞವಾಗಿ ಚರ್ಚಿಸಿದ್ದಾರೆ. ಕೊನೆಯದಾಗಿ ಇನ್ನೊಂದು ಮಾತು; ಅದು ಹಾಸನ ಸಾಹಿತ್ಯ ಸಮ್ಮೇಳನದ ಸಂದರ್ಭ. ಅಲ್ಲಿ ಬಹುತೇಕ ಮಠಾಧಿಪತಿಗಳೇ ವೇದಿಕಯ ಮೇಲೆ ವಿರಾಜಮಾನರಾಗಿದ್ದರು. [...]


ತೇಜಸ್ವಿ ಅವರ ‘ಜುಗಾರಿ ಕ್ರಾಸ್’
ಅವಧಿ - ಸೋಮವಾರ ೦೮:೦೪, ಫೆಬ್ರುವರಿ ೮, ೨೦೧೦


ಭ್ರಮೆ (ಸಣ್ಣ ಕಥೆ) - ೫ (ಪ್ರೀತಿ ಮೋಡಿತು)
ಸಿರಿಗನ್ನಡ ಸಂಪದ - ಸೋಮವಾರ ೦೭:೨೭, ಫೆಬ್ರುವರಿ ೮, ೨೦೧೦

               ಪತ್ರವನ್ನು ಬರೆದವರ ಹೆಸರನ್ನು ಹುಡುಕಿದ್ದು . ಪತ್ರದಲ್ಲೆಲ್ಲೂ ಹೆಸರು ಕ೦ಡು ಬರಲಿಲ್ಲ.ಆಕೆಗೆ ಚಿಕ್ಕದಾದ ಪತ್ರವೊ೦ದನ್ನು ಬರೆದು ಕಳುಹಿಸಿದೆ.

 

ಮುಂದೆ ಓದಿ...


ನಿಧಿ
ಬಣ್ಣದಚಿಗುರು - ಸೋಮವಾರ ೦೭:೧೯, ಫೆಬ್ರುವರಿ ೮, ೨೦೧೦

ನಿಧಿ


ಕನ್ನಡದ ಹೊಸ ನಟಿ. ಈಗಾಗಲೇ ಒಂದೆರಡು ದೊಡ್ಡ ಟೆಲಿವಿಷನ್ ಆಡ್ ಗಳನ್ನು ಮಾಡಿರುವ ರಾಷ್ಟ್ರೀಯ ಮಟ್ಟದ ಮಾಡಲ್. ಮೊನ್ನೆ ನಿಧಿಯೊಟ್ಟಿಗೆ ಶೊಟ್. ಈಗಾಗಲೇ ಕೆಲವು ಕನ್ನಡ ಚಿತ್ರಗಳನ್ನು ಮಾಡಿರುವ ನಿಧಿ, ಯೋಗರಾಜ್ ಭಟ್ಟರ ಹೊಸಚಿತ್ರದ ನಾಯಕಿ. ಹೀಗೆ ಬಂದು ಹಾಗೆ ಹೋಗೋ ನಾಯಕಿಯರ ನಡುವೆ, ಈ ಕೊಡಗಿನ ಹುಡುಗಿ, ಬಹಳ ಕಾಲ ಇರಲಿ ಅಂತ ನನ್ನ ಹಾರೈಕೆ. ಆಕೆಯೊಂದಿಗೆ ತೆಗೆದ ಚಿತ್ರಗಳಲ್ಲಿ ಒಂದು ಕ್ಲೋಸ್ ಅಪ್ ಚಿತ್ರ ಇಲ್ಲಿದೆ.


ಅಪ್ಪಿಯೂ ಕೆರೆ ಕುಂಟೆಯೂ
SHREESHUM - ಸೋಮವಾರ ೦೬:೪೯, ಫೆಬ್ರುವರಿ ೮, ೨೦೧೦


ನೀರೆಂದರೆ ಭಯವೇನೆ... ಆದರೂ ಸ್ವಲ್ಪವೇ ಸ್ವಲ್ಪ ನೀರಿನ ಚಟ ಹತ್ತಿತೆಂದರೆ ಅದರ ಮಜ ಅನುಭವಿಸದವರಿಗೆ ಗೊತ್ತು. ಇಳಿಯುವ ಮುಂಚೆ ಛಳಿ ಛಳಿ ಛಳಿ ಅಯ್ ಅಮ್ಮಾ ಇಲ್ಲಪ್ಪ ನನ್ನ ಬಳಿ ಸಾದ್ಯವಾಗದು ಅಂತೆಲ್ಲ ಅನ್ನಿಸುವುದು ಇದೆ. ಆದರೆ ಒಮ್ಮೆ ಧುಮಿಕಿದರೆ ಆಮೇಲೆ ನೀರಿಗಿಳಿದಮೇಲೆ ಛಳಿಯ...... .
ನಾವೂ ಸಣ್ಣಕ್ಕಿದ್ದಾಗ ನೀರಿನಲ್ಲಿ ಆಟವಾಡಿದ್ದುಂಟು. ತೋಟದ ಮೈನ್ ಕಾದಿಗೆಯ ಹೆಗ್ಗಟ್ಟಿನಲ್ಲಿ ನಮ್ಮದು ಹಾರಾಟಾ ನೀರಾಟ ಎಲ್ಲ. ಹೆಚ್ಚೆಂದರೆ ನಾಲ್ಕು ಅಡಿ ಆಳದ ನೀರಿರುವ ಹೆಗ್ಗಟ್ಟು ಅಂದು ನಮಗೆ ದೊಡ್ಡ ಸಮುದ್ರವಿದ್ದಂತೆ. ದಡಾಲ್ ಎಂದು ಧುಮುಕಿದ ಮರುಕ್ಷಣ ಕೆಂಪುಬಣ್ಣಕ್ಕೆ ತಿರುಗುವ ನಾಲ್ಕಡಿ ನೀರಿನಲ್ಲಿ ಪಚ ಪಚ ಅಂತ ಕೈಕಾಲು ಬಡಿದು ಮನೆ ಸೇರಿದರೆ ಅಂದೆಲ್ಲಾ ಮೈ ತುರಿಕೆ. ಆನಂತರ ಸ್ವಲ್ಪ ಪ್ರಮೋಷನ್. ಬಾಳೆ ದಿಂಡನ್ನು ಕಡಿದು ಅದಕೆ ಹಗರು ಹೊಡೆದು ಅದನ್ನು ಹಿಡಿದುಕೊಂಡು ಹತ್ತಡಿ ಆಳದ ಯಕ್ಷಮ್ಮನ ಕೆರೆ ನಮ್ಮ ಸ್ವಿಮಿಂಗ್ ಪೂಲ್. ಅಲ್ಲಿ ನೀರು ಸ್ವಚ್ಛ. ಹೀಗೆಲ್ಲಾ ಮಾಡಿ ಈಜು ಕಲಿತಿದ್ದಾಗಿದೆ.
ಈಗ ಮಗ ಈಸಬೇಕು ಅಂದಾಗ ಅಪ್ಪಯ್ಯನೆಂಬ ಅಪ್ಪಯ್ಯನಾದ ನಾನು ಸಕಲ ವ್ಯವಸ್ಥೆ ಮಾಡಿಕೊಡಬೇಕು. ಜಾಕೆಟ್ ಸ್ವಚ್ಛನೀರಿನ ಕೆರೆ ಆನಂತರ ಅಪ್ಪಿಯ ಅಮ್ಮನ ಅಣತಿಯಂತೆ ಅಪ್ಪಿ ಅತ್ತಿತ್ತ ಆಗದಂತೆ ಅಪ್ಪಿಯ ಅಪ್ಪನಾದ ನನ್ನಿಂದ ಸರ್ಪಗಾವಲು( ಅದು ಕೆರೆಯಾದ್ದರಿಂದ ನೀರುಳ್ಳೆಗಾವಲು ಅಂತ ಬದಲಾಯಿಸಿಕೊಳ್ಳಿ)
ಇರಲಿ ಕಾಲಕ್ಕೆ ತಕ್ಕಂತೆ ಅವೆಲ್ಲಾ . ವಿಷಯ ಅದೆಲ್ಲ ಈ ನೀರಿನಲ್ಲಿ ಈಸು ಇದೆಯಲ್ಲಾ ಪ್ರಕೃತಿ ಸಕಲ ಪ್ರಾಣಿಗಳಿಗೆ ಸಹಜವಾಗಿಟ್ಟಿದೆ. ಹುಟ್ಟಾ ಸಣ್ಣ ನೀರನ್ನೇ ನೋಡಿರದ ನಾಯಿಯನ್ನು ನೀರಿಗೆಸೆದರೆ ಪಟಪಟ ಈಸುತ್ತಾ ಕ್ಷಣಮಾತ್ರದಲ್ಲಿ ದಡ ಸೇರಿಬಿಡುತ್ತದೆ. ದನ ಎಮ್ಮೆ ಕುದುರೆ ಯಾವುದೇ ಇರಲಿ ಅದು ಹೀಗೆಯೇ. ಆದರೆ ಅದೇ ವರ್ಗಕ್ಕೆ ಸೇರಿದ ಪ್ರಾಣಿಯಾದ ಮನುಷ್ಯನಾದ ನಮಗೆ ಮಾತ್ರಾ ಹಾಗಲ್ಲ. ಅದೊಂದು ವಿದ್ಯೆ ಅದನ್ನು ಕಲಿಯಬೇಕು ಅಂಬ ಭಯಬಿತ್ತಲಾಗಿದೆ ಬಿಂಬಿಸಲಾಗಿದೆ.
ವಾಸ್ತವ ಹಾಗಲ್ಲ. ನೀರೆಂಬ ನೀರಿನಲ್ಲಿ ನಮ್ಮ ಭಯ ನಮ್ಮನ್ನು ಮುಳುಗಿಸುತ್ತದೆ ಧೈರ್ಯ ನಮ್ಮನ್ನು ತೇಲಿಸುತ್ತದೆ. ಧೈರ್ಯ ಎಂಬುದು ಮಟಾಮಾಯವಾದ್ದರಿಂದ ಈಸನ್ನು ನಾವು ಕಲಿಯಬೇಕಿದೆ. ಕಲಿತು ತೇಲಬೇಕಿದೆ. ತೇಲಿ ಸ್ವರ್ಗ ಸುಖವನ್ನು ಅನುಭವಿಸಬೇಕಿದೆ.
ತಲೆತಲಾಂತರದಿಂದ ಭಯದ ಬೀಜ ಮನುಷ್ಯನ ಜೀನ್ ಗಳಲ್ಲಿ ಹೊಕ್ಕು ಪ್ರಕೃತಿ ಪುಕ್ಕಟ್ಟೆ ನೀಡಿದ್ದ ಶಕ್ತಿಯನ್ನು ನಾವು ಹುಲುಮಾನವರಿಗೆ ಹಣ ಕೊಟ್ಟು ಕಲಿಯಬೇಕಾದ್ ಪರಿಸ್ಥಿತಿ ಬಂದಿದೆ. ಹಾಗಂತ ಇದನ್ನು ಓದಿದ ನೀವು ನನಗೆ ಭಯ ಇಲ್ಲಪ್ಪ ಎಂದು ದುಡುಂ ಎಂದು ನೀರಿನಲ್ಲಿ ಹಾರಿಬಿಟ್ಟೀರಿ. ಹಾರಿದಮೇಲೆ ಅವರು ಇವರು ಹೇಳಿದ ಕತೆ ನೇನಪಾಗಿ ಗಟಗಟ ನೀರು ಕುಡಿದು ಹೊಗೆಹಾಕಿಸಿಕೊಳ್ಳಬೇಕಾಗುತ್ತದೆ. ಹೀಗೆ ನಾವು ನೀವು ಮತು ನಮ್ಮ ಮರಿ ಮಕ್ಕಳವರೆಗೂ ನೀರೆಂದರೆ ಭಯ ಅಲ್ಲ ಸಹಜ ಎಂದು ಹೇಳುತ್ತಾ ಸಾಗಿದರೆ ಮುಂದೆ ಯಾವುದೋ ಪೀಳಿಗೆಯಲ್ಲಿ ಧೈರ್ಯ ಬರಬಹುದು. ಅಲ್ಲಿಯವರೆಗೆ ಕಾಯುವುದು ನಮ್ಮ ನಿಮ್ಮ ಕೈಯಲಿ ಆಗದ ಕೆಲಸ. ಹಾಗಾಗಿ ಈಗ ಕಲಿಯುವುದೇ ಲೇಸು. ಕಲಿತು ಮಜ ಅನುಭವಿಸುವುದೇ ಮಜ. ಆಗ ಧೈರ್ಯ ಹುಟ್ಟುತ್ತದೆ ಮನಸ್ಸಿನಾಳದಲ್ಲಿ ಅದು ಮೆದುಳಮೂಲಕ ರಕ್ತಕ್ಕೆ ಇಳಿದು ನಿಮ್ಮ ಪೀಳಿಗೆಯಲ್ಲಿ ಮುಂದುವರೆದರೆ ಆಗ ' ನೀರೆಂದರೆ ಖುಷಿಯೇನೆ ತಕದಿಮಿ ತಕದಿಮಿ ಮಜವೇನೆ...' ಅಂತ ಹಾಡಬಹುದು.


ಎಚ್ ಎಸ್ ವಿ ಮಾತು ಸಮಗ್ರ ಕವಿತೆಗಳಿಗೆ
ಓದು ಬಜಾರ್ - ಸೋಮವಾರ ೦೬:೦೨, ಫೆಬ್ರುವರಿ ೮, ೨೦೧೦

ಅಂತರಂಗ: ಎಚ್.ಎಸ್.ವಿ. -ಎಚ್.ಎಸ್.ವೆಂಕಟೇಶ ಮೂರ್ತಿ ಹಿಂಸೆಯಿಂದ ಜಗತ್ತು ತಲ್ಲಣಿಸುತ್ತಿರುವ ಕಾಲವಿದು. ಧಾರ್ಮಿಕ ಅಸಹಿಷ್ಣುತೆ; ಕೋಮು ದ್ವೇಶದ ದಳ್ಳುರಿ; ಜನಾಂಗೀಯಸಂಘರ್ಷ; ಭಯೋತ್ಪಾದಕ ಉಗ್ರಗಾಮಿಗಳ ಹತ್ಯಾಕಾಂಡಗಳು; ನಕ್ಸಲರ ರಕ್ತಮಾರ್ಗ, ತಣಿವಿಲ್ಲದ ಯುದ್ಧಮಾರಿಯ ರಕ್ತತೃಷ್ಣೆ-ಇವು ಸಾಮೂಹಿಕ ಪ್ರವೃತ್ತಿ. ಇದೆಲ್ಲದರ ತಳಪರಿಗೆ ಮನುಷ್ಯನ ವಿಕ್ಷಿಪ್ತ ಮನಸ್ಸು. ಸದಾ ನುಗ್ಗಿನುಗ್ಗಿ ಅಂತರಂಗದ ತಿಳಿಯನ್ನು ಬಗ್ಗಡ ಮಾಡುವ ನೇತ್ಯಾತ್ಮಕ ವಿಚಾರಗಳು. ಅಧಿಕಾರದ ಹಪಾಹಪಿ; ನೈತಿಕ ಅದಃಪತನ; ಎಣೆಯಿಲ್ಲದ ಭೋಗಲಾಲಸೆ; ಎಷ್ಟು ತಿಂದರೂ ಸಾಲದು ಎಂಬ ಹೊಟ್ಟೆಬಾಕತನ; ನಾನಾಯಿತು ಮೂರುಲೋಕವಾಯಿತು ಎಂಬ ಸ್ವಾರ್ಥಪಾರಾಯಣತತ್ಪರತೆ. ನಾನು ಬದುಕುವುದು ನನಗಾಗಿ ಮಾತ್ರ ಎಂಬ [...]


ಕೇಡಿಗನ ನಂಜು
ಸಿರಿಗನ್ನಡ ಸಂಪದ - ಸೋಮವಾರ ೦೫:೪೩, ಫೆಬ್ರುವರಿ ೮, ೨೦೧೦

ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!

ಸಂಸ್ಕೃತ ಮೂಲ:

ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ ||

-ಹಂಸಾನಂದಿ

ಕೊ.ಕೊ: ಚಾಮರಾಜ ಸವಡಿಯವರ ’ವಿಷದ ಗಿಡ’ ಮತ್ತೆ, ಅದಕ್ಕೆ ಬಂದ ಅಡಿಟಿಪ್ಪಣಿಗಳನ್ನು ಓದಿದಾಗ, (http://sampada.net/b...) ಎಂದೋ ಮಾಡಿದ್ದ ಈ ಅನುವಾದ ನೆನಪಾಯ್ತು. ಒಂದೆರಡು ಚಿಕ್ಕ ಬದಲಾವಣೆಗಳೊಡನೆ ಹಾಕಿರುವೆ.

 


ನಾವು ಬಂದೆವಾ ಶ್ರೀಶೈಲ ನೋಡಲಿಕ್ಕ ...
ಓದಿದ್ದು ಕೇಳಿದ್ದು ನೋಡಿದ್ದು - ಸೋಮವಾರ ೦೫:೩೩, ಫೆಬ್ರುವರಿ ೮, ೨೦೧೦


























prajavani
----------------------------------------------------
ದಕ್ಷಿಣ ಕರ್ನಾಟಕದಲ್ಲೇ ಅತಿ ಹೆಚ್ಚು ಬಡತನ
--------------------------------------------------


ದುಬಾರಿ ಖರ್ಚಿನ ಮದುವೆಗೊಂದು ಕಡಿವಾಣ
--------------------------------------------------------
dna





















-----------------------------------------------------
ನಾವು ಬಂದೆವಾ ಶ್ರೀಶೈಲ ನೋಡಲಿಕ್ಕ ...

---------------------------------------------------------
ಹಿಂದೂ


------------------------------------------------------
ಕಾಶ್ಮೀರಿ  ಪಂಡಿತರ ಗುಳೆ ನೋವಿಗೆ ಎರಡು ದಶಕ
--------------------------------------------------------
ಅಂತರ್ಜಾಲ ಆಧಾರಿತ ಹೊಸ ಮಾಧ್ಯಮವನ್ನ ಏನೆಂದು ಕರೆಯುವುದು?
--------------------------------------------------------------------------

ವಿಕ

--------------------------------------------
indian express

========================================
ಪ್ರಜಾವಾಣಿ


ಎಚ್ ಎಸ್ ವಿ ಹಬ್ಬ
ಅವಧಿ - ಸೋಮವಾರ ೦೫:೩೨, ಫೆಬ್ರುವರಿ ೮, ೨೦೧೦


ಕೇಡಿಗನ ನಂಜು
ಹಂಸ ನಾದ - ಸೋಮವಾರ ೦೫:೩೦, ಫೆಬ್ರುವರಿ ೮, ೨೦೧೦

ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!

ಸಂಸ್ಕೃತ ಮೂಲ:

ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ ||

-ಹಂಸಾನಂದಿ


ಕಡಮೆಯವರ ಕಥೆ ಮತ್ತು ಪತ್ರೊಡೆ …
ಅವಧಿ - ಸೋಮವಾರ ೦೫:೨೬, ಫೆಬ್ರುವರಿ ೮, ೨೦೧೦

-ವಸಂತ ಗಿಳಿಯಾರ್ ಇದ್ದಕ್ಕಿದ್ದಂತೆ ಪತ್ರೊಡೆ ತಿನ್ನಬೇಕು ಅನ್ನಿಸಿತು … ಘಟ್ಟದ ಕಡೆಯೋರು ಪತ್ರೊಡೆ ಸಕತ್ತಾಗಿ ಮಾಡ್ತಾರೆ ಅಂತ ಕೇಳಿದ್ದೆ ..ನನ್ನ ಗೆಳತಿಯೊಬ್ಬಳಿಗೆ ಫೋನ್ ಮಾಡಿ ಪತ್ರೊಡೆ ಬೇಕು ಕಣೆ ಅಂದೇ …ಆದ್ರೆ ನನಗೆ ಗೊತ್ತಿರಲಿಲ್ಲ ಅದಕ್ಕೆ ಕೆಸುವಿನ ಎಲೆ ಬೇಕು ಅಂತ .. ಅದು ಮಳೆಗಾಲದಲ್ಲಿ ಮಾತ್ರ ಸಿಗುವಂತದ್ದು..!!ಇದ್ದಕ್ಕಿದ್ದ ಹಾಗೆ ನನಗೆ ಪತ್ರೊಡೆಯ ನೆನಪಾಗಲಿಕ್ಕೆ ಕಾರಣವು ಇದೆ . ನಿಜ ಅದಕ್ಕೆ ಕಾರಣ ಸುನಂದಾ ಕಡಮೆ …ಅವರ ಗಾಂದಿ ಚಿತ್ರದ ನೋಟುಗಳು ಎಬ ಕಥಾ ಸಂಕಲನದಲ್ಲಿರುವ 13 ಕಥೆಗಳಲ್ಲಿ ಪತ್ರೊಡೆ [...]


’ಟರ್ಟಲ್ ಬೇ ಸೀ ರೆಸಾರ್ಟ್” !
ಸಿರಿಗನ್ನಡ ಸಂಪದ - ಸೋಮವಾರ ೦೪:೪೪, ಫೆಬ್ರುವರಿ ೮, ೨೦೧೦

ದಕ್ಷಿಣ ಕನ್ನಡದಲ್ಲಿನ ಅನೇಕ ಸುಂದರ ಕಡಲ್ಬೀಚ್ ಗಳಲ್ಲಿ, ’ ಟರ್ಟಲ್ ಬೇ ಸೀ ರೆಸಾರ್ಟ್ ’  ವಿಶೇಷ ಸೌಲಭ್ಯಗಳನ್ನು ಹೊಂದಿದೆ. ನಾವು ಅಲ್ಲಿಗೆ ಫೆಬ್ರವರಿ, ೧೯,’ ಕಿಂಗ್ ಫಿಶರ್ ಏರ್ ಲೈನ್ಸ್ ” ಲ್ಲಿ ಹೊರಟು, ಅದೇ ದಿನ ಅಪರಾನ್ಹಕ್ಕೆ ಮಂಗಳೂರು ತಲುಪಿದೆವು. ಮಂಗಳೂರಿನಿಂದ ೧೧೦ ಕಿ. ಮೀ.ಗಳ ಕಾರ್ ಡ್ರೈವ್ ಮಾಡಿದರೆ, ’ಟರ್ಟಲ್ ಬೇ ಸೀ ರೆಸಾರ್ಟ್.” ತಲುಪಬಹುದು.

 

ಮುಂದೆ ಓದಿ...


ಕರ್ನಾಟಕದ ಕೆಲವು ಪ್ರಥಮಗಳು!
ಸಿರಿಗನ್ನಡ ಸಂಪದ - ಸೋಮವಾರ ೧೨:೧೨, ಫೆಬ್ರುವರಿ ೮, ೨೦೧೦

ಕನ್ನಡದ ಮೊದಲ ದೊರೆ - ಕದಂಬ ವಂಶದ ಮಯೂರವರ್ಮ.
ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪ
ಮೊದಲ ಕೆರೆ - ಚಂದ್ರವಳ್ಳಿ ( ಚಿತ್ರದುರ್ಗ )
ಮೊದಲ ಶಾಸನ - ಹಲ್ಮಿದಿ ಶಾಸನ ( ಕ್ರಿ.ಶ. ೪೫೦ )
ಮೊದಲ ಕೋಟೆ - ಬಾದಾಮಿ ( ಕ್ರಿ. ಶ. ೫೪೩)
ಮೊದಲ ಕನ್ನಡ ಕೃತಿ - ಕವಿರಾಜ ಮಾರ್ಗ (ಕ್ರಿ.ಶ.೯ನೇ ಶತಮಾನ- ಶ್ರೀವಿಜಯ)
ಕನ್ನಡದ ಮೊದಲ ನಾಟಕ - ಸಿಂಗರಾಯನ ಮಿತ್ರ- ವಿಂದಾಗೋವಿಂದ
ಕನ್ನಡದ ಮೊದಲ ದಿನ ಪತ್ರಿಕೆ - ಸೂರ್ಯೋದಯ ಪ್ರಕಾಶಿಕ
ಕನ್ನಡದ ಮೊದಲ ವಚನಕಾರ್ತಿ - ಅಕ್ಕಮಹಾದೇವಿ
ಕನ್ನಡದ ಮೊದಲ ರಾಷ್ಟ್ರಕವಿ - ಗೋವಿಂದ ಪೈ
ಕನ್ನಡದ ಮೊದಲ ಪತ್ರಿಕೆ - ಮಂಗಳೂರು ಸಮಾಚಾರ ಸ್ಥಾಪಕ -ಫಾದರ್ ಹರ್ಮನ್ ನೊಗ್ಲಿಂಗ್ -೧೮೪೨
ಮೊದಲ ಗದ್ಯ ಕೃತಿ - ವಡ್ಡಾರಾಧನೆ.
ಮೊದಲ ಕಾವ್ಯ - ಆದಿಪುರಾಣ.
ಮೊದಲ ಪಂಪ ಪ್ರಶಸ್ಥಿ ವಿಜೇತ ಕವಿ - ಕುವೆಂಪು
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಸರ್. ಎಂ.

 

ಮುಂದೆ ಓದಿ...


೧೦ ಮುಂದೆ› ಕೊನೆ»

“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ.