ಹಳೆಕಂತೆ: ಏಪ್ರಿಲ್ ಒಂದು ಎಲ್ಲರ ದಿನನಗೆ ನಗಾರಿ ಡಾಟ್ ಕಾಮ್ - ಗುರುವಾರ ೦೬:೦೪, ಮಾರ್ಚ್ ೧೧, ೨೦೧೦ ಮತ್ತೊಂದು ಏಪ್ರಿಲ್ ಒಂದು ಹತ್ತಿರಾಗುತ್ತಿದೆ. ಫೆಬ್ರವರಿ ಹದಿನಾಲ್ಕರಂದು ಪಿಂಕ್ ಚೆಡ್ಡಿ ಲಲನೆಯರು, ಸ್ಯಾಫ್ರನ್ ಚಡ್ಡಿ ಪಡ್ಡೆಗಳು ರೋಮಾಂಚನಗೊಳ್ಳುವಂತೆಯೇ ಏಪ್ರಿಲ್ ಒಂದು ಹತ್ತಿರಾಗುತ್ತ ನಗೆ ನಗಾರಿಯ ಸಮಸ್ತ ಸಿಬ್ಬಂದಿಗೂ ಮೈಮೇಲೆ ಕೂದಲು ನಿಮಿರುವ ಬೆರಗು, ಸಂಭ್ರಮ.
೨೦೦೮ರ ಏಪ್ರಿಲ್ ಒಂದನ್ನು ಎಲ್ಲರ ದಿನವನ್ನಾಗಿ ಆಚರಿಸಿದ ನೆನಪನ್ನು ಮಾಡಿಕೊಳ್ಳಲು ಹಳೆ ಕಂತೆಯಿಂದ ಹೆಕ್ಕಿ ತೆಗೆದ ಬರಹದ ತುಣುಕು ಇಲ್ಲಿದೆ:
ಮತ್ತೊಂದು ಏಪ್ರಿಲ್ ಒಂದು ಬರುತ್ತಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು [...]
ಹೆಣ್ಣುಗಳ ಸಿಂಗಾರಸಿರಿಗನ್ನಡ ಸಂಪದ - ಗುರುವಾರ ೦೪:೦೧, ಮಾರ್ಚ್ ೧೧, ೨೦೧೦ ಕೊಂಕಾದ ಕುಡಿಹುಬ್ಬು ಕಡೆಗಣ್ಣುಗಳ ನೋಟ ನಯವಾದ ಮೆಲುನುಡಿ ನಾಚಿಕೆಯ ನಸುನಗೆ ಲೇಸಾದ ನಿಲುಮೆ ಜೊತೆಗೆ ಹಿತವಾದ ನಡಿಗೆ ಪೆಣ್ಗಳಿಗಿವು ಸಿಂಗರವು ಮತ್ತವೇ ಆಯುಧವು!
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)
ಭ್ರೂ ಚಾತುರ್ಯಾಕುಂಚಿತಾಕ್ಷಾಃ ಕಟಾಕ್ಷಾಃ ಸ್ನಿಗ್ಧಾ ವಾಚೋ ಲಜ್ಜಿತಾಶ್ಚೈವ ಹಾಸಾಃ | ಲೀಲಾಮಂದ್ರಂ ಪ್ರಸ್ಥಿತಂ ಚ ಸ್ಥಿತಂ ಚ ಸ್ತ್ರೀಣಾಮೇತದ್ ಭೂಷಣಂ ಚಾಯುಧಂ ಚ ||
-ಹಂಸಾನಂದಿ

ಹೆಂಗಸರ ಸಿಂಗಾರಹಂಸ ನಾದ - ಗುರುವಾರ ೦೩:೨೦, ಮಾರ್ಚ್ ೧೧, ೨೦೧೦ ಕೊಂಕಾದ ಕುಡಿಹುಬ್ಬು ಕಡೆಗಣ್ಣುಗಳ ನೋಟ ನಯವಾದ ಮೆಲುನುಡಿ ನಾಚಿಕೆಯ ನಸುನಗೆ ಲೇಸಾದ ನಿಲುಮೆ ಜೊತೆಗೆ ಹಿತವಾದ ನಡಿಗೆ ಪೆಣ್ಗಳಿಗಿವು ಸಿಂಗರವು ಮತ್ತವೇ ಆಯುಧವು!
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)
ಭ್ರೂ ಚಾತುರ್ಯಾಕುಂಚಿತಾಕ್ಷಾಃ ಕಟಾಕ್ಷಾಃ ಸ್ನಿಗ್ಧಾ ವಾಚೋ ಲಜ್ಜಿತಾಶ್ಚೈವ ಹಾಸಾಃ | ಲೀಲಾಮಂದ್ರಂ ಪ್ರಸ್ಥಿತಂ ಚ ಸ್ಥಿತಂ ಚ ಸ್ತ್ರೀಣಾಮೇತದ್ ಭೂಷಣಂ ಚಾಯುಧಂ ಚ ||
-ಹಂಸಾನಂದಿ
ಅವರು ಮೊದಲಿಗೆ ಬಂದರು..ಸಿರಿಗನ್ನಡ ಸಂಪದ - ಗುರುವಾರ ೦೯:೪೦, ಮಾರ್ಚ್ ೧೧, ೨೦೧೦ ಮೊದಲು ಅವರು ಉತ್ತರ ಭಾರತೀಯರಿಗಾಗಿ ಬಂದರು. ನಾನು ಉತ್ತರ ಭಾರತೀಯನಾಗಿರಲಿಲ್ಲ, ನನ್ನ ದನಿಎತ್ತಲಿಲ್ಲ. ನಂತರ ಕಾಶ್ಮೀರಿಗಳಿಗಾಗಿ ಬಂದರು. ನಾನು ಕಾಶ್ಮೀರಿಯಾಗಿರಲಿಲ್ಲ ನನ್ನ ದನಿಎತ್ತಲಿಲ್ಲ. ಮುಂದೆ ಈಶಾನ್ಯ ಭಾರತೀಯರಿಗಾಗಿ ಬಂದರು. ನಾನು ಈಶಾನ್ಯ ಭಾರತೀಯನಾಗಿರಲಿಲ್ಲ, ನನ್ನ ದನಿಎತ್ತಲಿಲ್ಲ. ಕೊನೆಗೊಮ್ಮೆ ನನ್ನ ಆತ್ಮಾಭಿಮಾನ ಕೆಣಕಲು ಬಂದರು, ನನ್ನಲ್ಲಾಗಲೇ ಆತ್ಮಾಭಿಮಾನದ ಕೊಲೆಯಾಗಿತ್ತು.
http://en.wikipedia.org/wiki/First_they_came

ನಾನಿದ್ದೆ ಶ೦ಕರರ ಕಾಲಡಿಯಲ್ಲಿ ಸಿರಿಗನ್ನಡ ಸಂಪದ - ಗುರುವಾರ ೦೮:೫೫, ಮಾರ್ಚ್ ೧೧, ೨೦೧೦  (ಇತ್ತೀಚೆಗೆ ಕೇರಳದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಶ೦ಕರಾಚಾರ್ಯರ ಜನ್ಮಸ್ಥಳ ಕಾಲಡಿಗೆ ಹೋಗಿದ್ದೆ. ಆ ನದೀ ತಟ, ದೇವಾಲಯ,ಶ೦ಕರಸ್ಥೂಪ ಇವುಗಳನ್ನೆಲ್ಲಾ ನೋಡಿ ಅನುಭವಿಸಿ ಬ೦ದೆ.ಅಲ್ಲಿದ್ದಾಗ ರಚಿಸಿದ ಈ ಕವನ ಇಲ್ಲಿ ಪ್ರಕಟಿಸುತ್ತಿದ್ದೇನೆ)
 ಮುಂದೆ ಓದಿ...
ಸಿಲಿಕಾನ್ ಬಳಸಿ- ಭತ್ತದ ಕಣಜ ತುಂಬಿಸಿಈ ಕನಸು - ಗುರುವಾರ ೦೮:೨೭, ಮಾರ್ಚ್ ೧೧, ೨೦೧೦ ವಿಶೇಷ ವರದಿ
 ಭತ್ತ ಭಾರತದ ಪ್ರಮುಖ ಬೆಳೆ. ದಕ್ಷಿಣ ಭಾರತದಲ್ಲಿ ಅದಕ್ಕೆ ವಿಶೇಷ ಸ್ಥಾನವಿದೆ. ವಿಶ್ವದ ಹಲವು ರಾಷ್ಟ್ರಗಳೂ ಭತ್ತವನ್ನು ಬೆಳೆಯುತ್ತವೆ. ಜಗತ್ತಿನ 44ಮಿಲಿಯನ್ ಹೆಕ್ಟೆರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದ್ದು, 90 ಮಿಲಿಯನ್ ಟನ್ ಭತ್ತ ಉತ್ಪಾದನೆಯಾಗುತ್ತಿದೆ.ಭಾರತದಲ್ಲಿ ಸರಾಸರಿ 2.9 ಟನ್ ಪ್ರತಿ ಹೆಕ್ಟೇರಿಗೆ ಇಳುವರಿಯಾಗುತ್ತಿದೆ. ಆದರೆ ಇತ್ತೀಚೆಗೆ ರಸಾಯನಿಕ ಗೊಬ್ಬರಗಳ ವ್ಯಾಪಕವಾಗಿ ಬಳಕೆಯಿಂದಾಗಿ ಭತ್ತದ ಇಳುವರಿ ಕ್ಷೀಣಿಸುತ್ತಿದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ.
ನಿರಂತರ ಬೇಸಾಯದಿಂದ ಉಂಟಾಗುವ ಮಣ್ಣಿನ ಸವಕಳಿ, ಅವೈಜ್ಞಾನಿಕ ಬೇಸಾಯ ಪದ್ದತಿಗಳು, ಅವಶ್ಯ ಪೋಷಕಾಂಶಗಳಿಲ್ಲದಿರುವುದು ಹಾಗೂ ಸಾವಯವವಲ್ಲದ ಕೃಷಿ ಪದ್ಧತಿ ಮುಖ್ಯ ಕಾರಣ.
ಈ ನಿಟ್ಟಿನಲ್ಲಿ ಭತ್ತ ಬೇಸಾಯದಲ್ಲಿ ಸಿಲಿಕಾನ್ ಎಂಬ ಪೋಷಕಾಂಶದ ಪಾತ್ರ ಬಹುಮುಖ್ಯ. ಇದನ್ನು ಭತ್ತದ ಬೆಳೆಯಲ್ಲಿ ಉಪಯೋಗಿಸಿದರೆ ಇಳುವರಿ ಹೆಚ್ಚಾಗುತ್ತದೆ. ಈಗಾಗಲೇ ಅದನ್ನು ಹಲವಾರು ದೇಶಗಳಲ್ಲಿ ಜಪಾನ್, ತೈವಾನ್, ಚೀನಾ, ಬ್ರೆಜಿಲ್, ಕೋರಿಯಾ, ಕೊಲಂಬಿಯಾ ಹಾಗೂ ಅಮೆರಿಕ ದೇಶಗಳಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿ ಮಾಹಿತಿ ಕೊರತೆಯಿಂದಾಗಿ ರೈತರು ಸಿಲಿಕಾನಿನ ಉಪಯೋಗವನ್ನು ಪಡೆಯುತ್ತಿಲ್ಲ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ಕೇಂದ್ರದ ಮಣ್ಣು ಮತ್ತು ರಾಸಯನಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎನ್.ಬಿ. ಪ್ರಕಾಶ್ ತಿಳಿಸುತ್ತಾರೆ.
ಭಾರತದಲ್ಲೂ ಈ ಬಗ್ಗೆ ಪ್ರಯೋಗವಾಗುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲವು 2007 ರಿಂದ ಇದುವರೆಗೂ ಶಿವಮೊಗ್ಗ, ಭದ್ರಾವತಿ, ಮಂಗಳೂರು, ಉಡುಪಿ, ಬ್ರಹ್ಮಾವರ, ದಾವಣಗೆರೆ, ಪೊನ್ನಂಪೇಟೆ, ಕತ್ತಲಗೆರೆ ಹಾಗೂ ಮುಂತಾದ ಕಡೆ ಪ್ರಯೋಗಗಳನ್ನು ನಡೆಸಿದ್ದು ಭತ್ತದ ಹುಲ್ಲು ಮತ್ತು ಭತ್ತದ ಕಾಳಿನ ಇಳುವರಿಯಲ್ಲಿ ಹೆಚ್ಚಾಳವಾಗಿರುವುದನ್ನು ದೃಢಪಡಿಸಿದೆ.
ಭತ್ತದ ಬೆಳೆಯಲ್ಲಿ ಸಿಲಿಕಾನ್ ಉಪಯುಕ್ತತತೆಯನ್ನು ರೈತರಿಗೆ ಮನವರಿಕೆ ಮಾಡಿಕೊಡಲು ಇತ್ತೀಚೆಗೆ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯವು ಮೂರು ದಿನಗಳ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ಬಗ್ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಗ್ಗೆ ಮಾಹಿತಿಗೆ ದೂರವಾಣಿ ಮುಖಾಂತರ ಸಂಪರ್ಕಿಸುತ್ತಿದ್ದಾರೆ ಎಂದು ಡಾ ಎನ್. ಬಿ. ಪ್ರಕಾಶ್ ಅವರು ಹೇಳುತ್ತಾರೆ.

ಸಿಲಿಕಾನ್ ಎಂದರೇನು? ಮೂಲತ: ಮಣ್ಣಿನಲ್ಲಿರುವ ಒಂದು ಧಾತು. ಸಿಲಿಕಾನ್ ಕಣಜ: ಬೇರೆ ಯಾವುದೇ ಪೋಷಕಾಂಶಗಳಿಗಿಂತ ಭತ್ತದ ಬೆಳೆಗೆ ಸಿಲಿಕಾನ್ ಅಗತ್ಯವಿದೆ.ಪ್ರತಿ ಹೆಕ್ಟೆರ್ ಜಮೀನಿನಲ್ಲಿ 50ಕ್ವಿಂಟಲ್ ಭತ್ತ ಬೆಳೆದಲ್ಲಿ ಸುಮಾರು 230ರಿಂದ 470 ಕೆಜಿ ಸಿಲಿಕಾನ್ನ್ನು ಮಣ್ಣಿನಿಂದ ಉಪಯೋಗಿಸಿಕೊಳ್ಳಲಾಗುತ್ತಿದೆ. ಹೀಗೆ ಹೀರಲ್ಪಟ್ಟ ಸಿಲಿಕಾನ್ ಪ್ರಮಾಣವು ಸಾರಜನಕಕ್ಕಿಂತ ಸುಮಾರು ಶೇ.108ಕ್ಕಿಂತಲೂ ಹೆಚ್ಚಾಗಿರುತ್ತದೆ.ಸಿಲಿಕಾನ್ ಗೊಬ್ಬರವನ್ನು ಭತ್ತದ ಬೆಳೆಯಲ್ಲಿ ಉಪಯೋಗಿಸುವುದರಿಂದ ಅಧಿಕ ಇಳುವರಿ ಪಡೆಯಬಹುದು.
ಸಿಲಿಕಾನ್ ಪಾತ್ರ: ಇದು ದ್ಯುತಿ ಸಂಶ್ಲೇಶಣ ಕ್ರಿಯೆ ಹೆಚ್ಚಿಸುತ್ತದೆ.ಎಲೆಗಳ ಮೇಲ್ಪದರಗಳಿಂದ ನೀರು ಆವಿಯಾಗುವುದನ್ನು ತಡೆದು ನೀರಿನ ಉಪಯುಕ್ತತೆಯನ್ನು ಹೆಚ್ಚಿಸುತ್ತದೆ.ಬಿರುಸಾದ ಮಳೆ ಗಾಳಿಗೆ ಗಿಡಗಳು ಬಾಗುವುದನ್ನು ತಡೆಯುವಲ್ಲಿ ಸಿಲಿಕಾನ್ ಯಶ್ವಸಿಯಾಗುತ್ತದೆ. ತೆನೆಗಳ ಮತ್ತು ಕಾಳುಗಳ ಸಂಖ್ಯೆಯನ್ನು ಹೆಚ್ಚಾಗಿಸಿ, ಕಾಳುಗಳು ಜೊಳ್ಳಾಗುವ ಪ್ರಮಾಣ ವನ್ನು ತಗ್ಗಿಸುತ್ತದೆ.ಭತ್ತದ ಬೆಳೆಯಲ್ಲಿ ಸಿಲಿಕಾನ್ನಿಂದ ರಂಜಕ ಮತ್ತು ಪೊಟೇಶಿಯಂ ಅಂಶಗಳು ಸಮರ್ಪಕವಾಗಿ ದೊರೆಯಲು ಅನುವು ಮಾಡಿಕೊಡುತ್ತದೆ.ಕಾಂಡ ಕೊರಕ ಮತ್ತು ಜಿಗಿ ಹುಳುವನ್ನು ನಿಯಂತ್ರಿಸಲು ಕೀಟ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.ಹುಳಿ ಮಣ್ಣಿನಲ್ಲಿ ಅಲ್ಯೂಮಿನಿಯಂ, ಕಬ್ಬಿಣ ಮತ್ತು ಮ್ಯಾಂಗನಿಸ್ ಅಂಶಗಳ ವಿಷಮತೆಯನ್ನು ಸರಿಪಡಿಸುವಲ್ಲಿ ಸಹಕಾರಿ. ಸಿಲಿಕಾನ್ ಕಡೆಗಣನೆಗೆ ಕಾರಣಗಳು: ಇದುವರೆಗೆ ಸಿಲಿಕಾನ್ನ್ನು ಸಸ್ಯಗಳ ಬೆಳವಣಿಗೆಯಲ್ಲಿ ಒಂದು ಪ್ರಮುಖ ಮೂಲವಸ್ತುವೆಂಬುದನ್ನು ನಿರ್ಧರಿಸದೇ ಇರುವುದು ಒಂದು ಪ್ರಮುಖ ಕಾರಣ. ಸಿಲಿಕಾನ್ ಹೇರಳವಾಗಿ ಅಂದರೆ, ಶೇ.28ರಷ್ಟು ಭೂ ಪದರಗಳಲ್ಲಿ ದೊರೆಯುವುದು ಮತ್ತು ಇದರಿಂದ ಮಣ್ಣಿನಲ್ಲಿ ಸಿಲಿಕಾನ್ ಕೊರತೆ ಸಮಸ್ಯೆಯೇನಲ್ಲ ಎಂದು ತಿಳಿದಿರುವುದು.
ಕೊರತೆಗೆ ಮುಖ್ಯ ಕಾರಣಗಳು: ಸಿಲಿಕಾನ್ ಒದಗಿಸದೆ ಭತ್ತವನ್ನು ನಿರಂತರವಾಗಿ ಬೆಳೆಯುವುದರಿಂದ ಸಿಲಿಕಾನ್ ಕೊರತೆ ಕಾಡುವುದು. ಅಲ್ಪ ಪ್ರಮಾಣದ ಸಿಲಿಕಾನಂಶವಿರುವ ಕಲ್ಲು ಬಂಡೆಗಳಿಂದ ಮಾರ್ಪಾಡಾದ ಮಣ್ಣು. ನಿರಂತರವಾಗಿ ಭತ್ತವನ್ನು ಬೆಳೆಯುವುದು ಮತ್ತು ಭತ್ತದ ಹುಲ್ಲನ್ನು ಮಣ್ಣಿಗೆ ಸೇರಿಸದೆ ಇರುವುದರಿಂದ ದೊರೆಯುವ ಸಿಲಿಕಾನ್ ಪ್ರಮಾಣ ಕಡಿಮೆ.
ಸಿಲಿಕಾನ್ ಕೊರತೆಯ ಲಕ್ಷಣಗಳು: ಎಲೆಗಳು ಸೊರಗಿ ಬಾಗುತ್ತವೆ. ಇದರಿಂದ ನೆರಳುಂಟಾಗಿ ದ್ಯುತಿ ಸಂಶ್ಲೇಷಣಾ ಕ್ರಿಯೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುವುದು.ಕೆಳಭಾಗದ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಒಣಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬೆಂಕಿ ರೋಗ ಮತ್ತು ಕಂದು ಚುಕ್ಕೆಯಂತ ರೋಗಗಳು ಕಾಣಿಸಿಕೊಳ್ಳುತ್ತವೆ.ತೆನೆಗಳ ಗಾತ್ರ ಚಿಕ್ಕದಾಗಿ ಬಂಜೆತನದ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ.ಅತಿಯಾದ ಸಿಲಿಕಾನ್ ಕೊರತೆಯು ತೆಂಡೆ ಮತ್ತು ತೆನೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
ಭತ್ತದ ಹೊಟ್ಟಿನ ಬೂದಿಯ ಬಳಕೆ ಪರಿಣಾಮಕಾರಿ: ಸಿಲಿಕಾನ್ ಕೊರತೆಯನ್ನು ನೀಗಿಸಿ ಉತ್ತಮ ಭತ್ತದ ಇಳುವರಿ ಪಡೆಯುವುದು ತುಂಬಾ ಸರಳ ಹಾಗೂ ಸುಲಭ. ಅಲ್ಲದೆ ನೈಸರ್ಗಿಕ. ಸರಳವಾಗಿ ಹೇಳಬೇಕೆಂದರೆ ಭತ್ತದ ಹೊಟ್ಟಿನ ಬೂದಿಯನ್ನು ಭತ್ತದ ಬೆಳೆಯಲ್ಲಿ ಉಪಯೋಗಿಸುವುದು. ಇದರಿಂದ ಮಣ್ಣಿನಲ್ಲಿರುವ ರಂಜಕವು ಸಮರ್ಪಕವಾಗಿ ದೊರಕುವಂತೆ ಮಾಡಬಹುದು.
ಭತ್ತದ ಹೊಟ್ಟಿನಲ್ಲಿ ಬೂದಿಯ ಉಪಯೋಗ: ಅರ್ಧದಿಂದ 1 ಕಿಲೋನಷ್ಟು ಬೂದಿಯನ್ನು ಪ್ರತಿ ಮೀಟರ್ ಸಸಿಮಡಿಯಲ್ಲಿ ಬಳಸುವುದರಿಂದ ಉತ್ತಮ ಹಾಗೂ ಸಧೃಡ ಸಸಿಗಳನ್ನು ಪಡೆಯಬಹುದು. ಎಲೆ ಚುಕ್ಕಿ ರೋಗ ಮತ್ತು ಸಸಿ ಮಡಿಯ ನಂತರ ಭಾದಿಸುವ ಕಾಂಡಕೊರಕ ಕೀಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಭತ್ತದ ಹುಲ್ಲು ಮತ್ತು ಕಾಳಿನ ಇಳುವರಿಯನ್ನು ಹೆಚ್ಚಿಸಬಹುದು.ಮಣ್ಣಿನ ಸುಧಾರಕ ಮತ್ತು ವಿವಿಧ ಪೋಷಕಾಂಶದ ಮೂಲ ವಸ್ತುವಾಗಿ ಬಳಸಬಹುದು. ಸಾವಯವ ಕೃಷಿಯಲ್ಲಿ ಭತ್ತದ ಹುಲ್ಲು ಮತ್ತು ಭತ್ತದ ಹೊಟ್ಟಿನ ಬೂದಿಯನ್ನು ಕಾಂಪೋಸ್ಟ್ ತಯಾರಿಸಲು ಉಪಯೋಗಿಸಲಾಗುವುದು. ಪ್ರಯೋಗದ ಫಲಿತಾಂಶಭತ್ತದ ಹೊಟ್ಟಿನ ಬೂದಿಯನ್ನು ರಂಜಕವಿಲ್ಲದೆ ಉಪಚರಿಸಿದ ತಾಕಿಗಿಂತ, ಬೂದಿ ಮತ್ತು ರಂಜಕ ಎರಡನ್ನು ಕೊಡದೆ ಇರುವ ತಾಕಿನಲ್ಲಿ ಇಳುವರಿಯು ಹೆಚ್ಚಾಗುತ್ತದೆ. ಬೂದಿಯ ಜತೆ ರಂಜಕವನ್ನು ಡಿಎಪಿ/ ಶಿಲಾರಂಜಕ ರೂಪದಲ್ಲಿ ಉಪಚರಿಸಿದ ತಾಕಿನಲ್ಲಿ ಇಳುವರಿ ಇನ್ನೂ ಹೆಚ್ಚಾಗಿದೆ. ಭತ್ತದ ಹೊಟ್ಟಿನ ಬೂದಿಯನ್ನು ರಂಜಕ ಗೊಬ್ಬರದ ಜತೆಗೆ ಹಾಕಿರುವ ತಾಕಿನಲ್ಲಿ ಭತ್ತದ ತೆನೆ ಬರುವುದು ಮತ್ತು ಹಾಳಾಗುವುದು ಸುಮಾರು 7 ರಿಂದ 10 ದಿನಗಳ ಮುಂಚೆ ಕಂಡುಬಂದಿರುತ್ತದೆ. ಪ್ರತಿ ಹೆಕ್ಟೇರ್ ಗೆ 2 ಟನ್ನಷ್ಟು ಭತ್ತದ ಹೊಟ್ಟಿನ ಬೂದಿಯನ್ನು ಹಾಕುವುದರಿಂದ ಶೇ.34 ರಷ್ಟು ಇಳುವರಿ ಹೆಚ್ಚಾಗಿರುವುದು ಕಂಡುಬರುತ್ತದೆ. ಭತ್ತದ ಹೊಟ್ಟಿನ ಬೂದಿಯನ್ನು ಬಳಸುವಾಗ ಗಮನಿಸಬೇಕಾದ ಮುಖ್ಯಾಂಶಗಳಿವು. ಕಪ್ಪಾಗಿರುವ ಭತ್ತದ ಹೊಟ್ಟಿನ ಬೂದಿಯನ್ನು ಮಾತ್ರ ಉಪಯೋಗಿಸಬೇಕು. ಭತ್ತದ ಹೊಟ್ಟಿನ ಬೂದಿಯನ್ನು ನಾಟಿ ಮಾಡುವಾಗ 2 ವಾರ ಮುಂಚಿತವಾಗಿ ಹಾಕಬೇಕು. ಸುಮಾರು ಅರ್ಧ ಕಿಲೋದಿಂದ ಒಂದು ಕಿಲೋದಷ್ಟು ಬೂದಿಯನ್ನು ಸಸಿ ಮಡಿಗಳಲ್ಲಿ ಪ್ರತಿ ಚದರ ಮೀಟರ್ಗೆ ಬಳಸುವುದರಿಂದ ಆರೋಗ್ಯ ಪೂರ್ಣವಾದ ಮತ್ತು ಸಧೃಡ ಸಸಿಗಳನ್ನು ಬೆಳೆಯಬಹುದು ಎಂದು ತಿಳಿದು ಬಂದಿದೆ. ಭತ್ತದ ಹೊಟ್ಟಿನ ಬೂದಿಯನ್ನು, ಬೇರೆ ಬೆಳೆಗಳಿಗೆ ಉಪಯೋಗಿಸದೆ, ಭತ್ತದ ಬೆಳೆಗೆ ಮಾತ್ರ ಉಪಯೋಗಿಸಿದ್ದಲ್ಲಿ, ಸಿಲಿಕಾನ್ ಮರುಬಳಕೆ ಸಾಧ್ಯವಾದೀತು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 080 - 23622572.
ಅಂತರ್ಜಾಲ-ಟಿವಿ ಬೆಸೆಯುವ ಯತ್ನಸಿರಿಗನ್ನಡ ಸಂಪದ - ಗುರುವಾರ ೦೮:೧೮, ಮಾರ್ಚ್ ೧೧, ೨೦೧೦ ಅಂತರ್ಜಾಲ-ಟಿವಿ ಬೆಸೆಯುವ ಯತ್ನ ಅಂತರ್ಜಾಲವನ್ನು ಟಿವಿಯ ಮೂಲಕವೂ ಲಭ್ಯವಾಗಿಸಿ,ಅಂತರ್ಜಾಲ ಬಳಕೆಯನ್ನು ಕುಟುಂಬದ ಸದಸ್ಯರೆಲ್ಲ ಜತೆ ಅನುಭವಿಸಲು ಅವಕಾಶ ನೀಡುವ ಯತ್ನಗಳು ಹೆಚ್ಚುತ್ತಿವೆ.ಸಾಮಾಜಿಕ ನೆಟ್ವರ್ಕಿಂಗ್ ಅಂತರ್ಜಾಲ ತಾಣಗಳಾದ ಫೇಸ್ಬುಕ್,ಅರ್ಕುಟ್,ಫ್ಲಿಕರ್ ಮುಂತಾದ ತಾಣಗಳಲ್ಲಿ ಜನರು ತಮ್ಮ ಚಿತ್ರಗಳನ್ನು ತಮ್ಮ ಮಿತ್ರರ ಜತೆ ಹಂಚಿಕೊಳ್ಳುತ್ತಾರೆ.ಟಿವಿಯ ಮೂಲಕವೂ ಜನರು ಈ ತಾಣಗಳನ್ನು ಪ್ರವೇಶಿಸಿ,ಚಿತ್ರಗಳನ್ನು ನೋಡಿ ಆನಂದಿಸಲು ಅವಕಾಶವೀಯಲು ವೆರಿಜೋನ್ ಕಂಪೆನಿಯ ಟಿವಿಯಲ್ಲಿ ಸಾಧ್ಯ.ಅದಲ್ಲದೆ ಜನರು ತಾವು ನೋಡುತ್ತಿರುವ ಟಿವಿ ಕಾರ್ಯಕ್ರಮಗಳ ಬಗ್ಗೆ ಪ್ರತಿಕ್ರಿಯೆಯನ್ನು ಈ ತಾಣಗಳಲ್ಲಿ ವ್ಯಕ್ತಪಡಿಸಿದರೆ,ಅದನ್ನು ಟಿವಿಯ ಮೂಲಕವೂ ನೋಡಬಹುದು.ಸ್ಯಾಮ್ಸಂಗ್ ಕಂಪೆನಿಯ ಎಲ್ ಇ ಡಿ ಹೈಡೆಫಿನಿಶನ್ ಟಿವಿಗಳಲ್ಲಿ,ಸ್ಕೈಪ್ ತಂತ್ರಾಂಶವನ್ನು ಅಳವಡಿಸಲಾಗಿದೆ.ಹಾಗಾಗಿ ಸ್ಕೈಪ್ ಬಳಕೆದಾರರು,ಟಿವಿಯ ಮೂಲಕ ಅಂತರ್ಜಾಲ ಫೋನ್ ಕರೆಗಳನ್ನು ಮಾಡಲು ಅವಕಾಶ ಸಿಗುತ್ತದೆ.ಇನ್ನೆರಡು ತಿಂಗಳಲ್ಲಿ ಇಂತಹ ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
 ಮುಂದೆ ಓದಿ...
ಜಮೀನು ವಶಪಡಿಸಿಕೊಳ್ಳುವುದಿಲ್ಲ: ಸಿ.ಎಂ.ಈ ಕನಸು - ಗುರುವಾರ ೦೭:೩೬, ಮಾರ್ಚ್ ೧೧, ೨೦೧೦ ರಾಜ್ಯ - ರಾಷ್ಟ್ರ
ಬೆಂಗಳೂರು:ಹಂಪಿ ಪುನರುತ್ಥಾನಕ್ಕೆ ಕನ್ನಡ ವಿಶ್ವವಿದ್ಯಾನಿಲಯದ ಜಮೀನನ್ನು ವಶಪಡಿಸಿಕೊಳ್ಳುವುದಿಲ್ಲವೆಂದು ಮುಖ್ಯ ಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನಲ್ಲಿ ಆಯವ್ಯಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ವಿಶ್ವವಿದ್ಯಾನಿಲಯದ 85 ಎಕರೆ ಜಮೀನನ್ನು ಹಂಪಿಯ ಅಭಿವೃದ್ಧಿಗೆ ಶ್ರೀ ಕೃಷ್ಣದೇವರಾಯ ಪುನರುತ್ಥಾನ ಟ್ರಸ್ಟ್ ವಶಪಡಿಸಿಕೊಳ್ಳುವ ಬಗ್ಗೆ ಸಾರ್ವಜನಿಕ ಚರ್ಚೆಯಾಗುತ್ತಿದೆ.
ಸಾರ್ವಜನಿಕರ, ಸಾಹಿತಿಗಳ ಭಾವನೆಗೆ ಧಕ್ಕೆಉಂಟುಮಾಡಲು ಇಚ್ಫೆಯಿಲ್ಲ. ಹಾಗಾಗಿ ಅದನ್ನು ಗೌರವಿಸಿ ವಿಶ್ವವಿದ್ಯಾನಿಲಯದ ಒಂದು ಗುಂಟೆ ಜಮೀನನ್ನು ಕೂಡ ಈ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲವೆಂದು ಮುಖ್ಯ ಮಂತ್ರಿಗಳು ತಿಳಿಸಿದರು.
ವಿಶ್ವ ವಿಖ್ಯಾತ ಹಂಪಿಗೆ ಪ್ರವಾಸಿಗರು ಜಗತ್ತಿನ ಮೂಲೆ ಮೂಲೆಯಿಂದಲೂ ಬಂದು ಹಾಳು ಹಂಪೆಯನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಮುಂದಿನ ಪೀಳಿಗೆ ನೆನಪಿಡುವಂತೆ ಹಂಪಿಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಮೀನಿನಲ್ಲಿ ಹಾಗೂ ಅಗತ್ಯ ಬಿದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಿ ಆ ಸ್ಥಳದಲ್ಲಿ ಅಂತರಾಷ್ಟ್ರೀಯ ಉದ್ಯಾನವನ, ವಿಜಯನಗರ ಸಾಮ್ರಾಜ್ಯ ಪರಂಪರೆ ಕೇಂದ್ರ, ಅಧ್ಯಯನ ಪೀಠ ಹಾಗೂ ಕೃಷ್ಣದೇವರಾಯರ ಪುತ್ಧಳಿಯನ್ನು ಸ್ಥಾಪಿಸಲಾಗುವುದೆಂದು ಅವರು ತಿಳಿಸಿದರು.
ರೈತರಿಗೆ ಅನ್ಯಾಯ ಮಾಡುವುದಿಲ್ಲ
ಈ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಸಕರ್ಾರ ಶ್ರಮಿಸುತ್ತಿದೆ. ರೈತರಿಗೆ ಅನ್ಯಾಯ ಮಾಡುವುದಿಲ್ಲ. ಕೈಗಾರಿಕೀಕರಣಕ್ಕಾಗಿ ರೈತರಿಂದ ಖುಷ್ಕಿ ಜಮೀನನ್ನು ವಶಪಡಿಸಿಕೊಳ್ಳದೆ ವ್ಯವಸಾಯಕ್ಕೆ ಯೋಗ್ಯವಲ್ಲದ ಜಮೀನನ್ನು ವಶಪಡಿಸಿಕೊಳ್ಳಲಾಗುವುದು. 20 ವರ್ಷದಲ್ಲಿ ಫಲವತ್ತಾದ ಜಮೀನನ್ನು ಯಾರ ಯಾರ ಕಾಲದಲ್ಲಿ ವಶಪಡಿಸಿಕೊಳ್ಳಲಾಯಿತು ಎಂಬ ಬಗ್ಗೆ ಚರ್ಚೆಯಾಗಲಿ. ರೈತರಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸಿ ಕೈಗಾರಿಕೀಕರಣದ ವೇಗವನ್ನು ತಗ್ಗಿಸಬಾರದು. ರೈತರ ಮಕ್ಕಳಿಗೆ ಉದ್ಯೋಗ ನೀಡಬೇಕಾಗಿದೆ. ರೈತರಿಗೆ ಷೇರು ನೀಡುವ ಬಗ್ಗೆಯೂ ಚರ್ಚೆಯಾಗಲಿ ಎಂದು ಮುಖ್ಯ ಮಂತ್ರಿಗಳು ನುಡಿದರು.
ಜಮೀನು ನೀಡಿಕೆ ಬಗ್ಗೆ ಸಮರ್ಥನೆ
ಆಸ್ಪತ್ರೆ ಕಟ್ಟಲು ಅಮೃತಾನಂದಮಯಿ ಟ್ರಸ್ಟ್ ಜಮೀನು ನೀಡಬೇಕೆಂದು ಕೇಳಿರಲಿಲ್ಲ. ಬಡವರಿಗೆ ಅನುಕೂಲವಾಗಲೆಂದು ಆಸ್ಪತ್ರೆ ನಿರ್ಮಾಣಕ್ಕಾಗಿ 15 ಎಕರೆ ಜಮೀನನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡರು. ಈ ಟ್ರಸ್ಟ್ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 2000 ಮನೆ ನಿರ್ಮಿಸುತ್ತಿದ್ದು ಮತ್ತೆ 1000 ಮನೆ ನಿರ್ಮಿಸಲು ಯೋಜನೆಯನ್ನು ರೂಪಿಸಿದೆ ಎಂದು ತಿಳಿಸಿದರು.
ಇನ್ನು 24x7 ಆರೋಗ್ಯ ಸೇವೆ !ಈ ಕನಸು - ಗುರುವಾರ ೦೭:೨೬, ಮಾರ್ಚ್ ೧೧, ೨೦೧೦ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24x7 ಆರೋಗ್ಯ ಸೇವೆ
ಮಂಗಳೂರು:'ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ' ಎಂಬ ಧ್ಯೇಯವಾಕ್ಯದಡಿ ಆರಂಭವಾದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣರಿಗೆ ಆರೋಗ್ಯ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲೆಯ ಆಯ್ದ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆ ಪ್ರಸೂತಿ ಸೇವೆ ನೀಡುವಂತೆ ವ್ಯವಸ್ಥೆಯನ್ನು ಉನ್ನತೀಕರಿಸಿದೆ.ಮೂಲಭೂತ ಸೌಲಭ್ಯಗಳು ಸೇರಿದಂತೆ ಒಟ್ಟು 3 ಜನ ಶುಶ್ರೂಷಕಿಯರನ್ನು ಈ ಯೋಜನೆಯಡಿ ನೇಮಿಸಲಾಗಿದ್ದು, ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ಮುಖ್ಯ ಕೇಂದ್ರದಲ್ಲಿ ಸದಾ ಲಭ್ಯರಿರುತ್ತಾರೆ. ಗರ್ಭಿಣಿಯರಿಗೆ(ಬಿಪಿಎಲ್ ಗೆ ಸೀಮಿತವಲ್ಲ) ಅಗತ್ಯ ಮಾಡಬೇಕಿರುವ ಎಲ್ಲ ಪರೀಕ್ಷೆಗಳನ್ನು ಈ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
ಮುಖ್ಯವಾಗಿ ದೇಶದಲ್ಲಿ ತಾಯಿ ಮರಣ ಮತ್ತು ಶಿಶುಮರಣ ತಡೆಗೆ ಆದ್ಯತೆ ನೀಡಲಾಗಿದ್ದು, ಈ ವ್ಯವಸ್ಥೆ ಜಾರಿಗೆ ಬಂದಂದಿನಿಂದ ಶೇಕಡ 47ರಿಂದ 44ರಷ್ಟು ಇಳಿಮುಖವಾಗಿದೆ. ಅತಿ ದುರ್ಗಮ ಪ್ರದೇಶಗಳಲ್ಲೂ ಇಂತಹ ಕೇಂದ್ರಗಳಿದ್ದು, ಜನರ ಅನುಕೂಲಕ್ಕಾಗಿ ಹಾಗೂ ಅಂತಹ ಪ್ರದೇಶಗಳಲ್ಲಿ ವೈದ್ಯರು ತಂಗುವಂತೆ ಪ್ರೋತ್ಸಾಹಿಸಲು ಹೆಚ್ಚಿನ ಸವಲತ್ತನ್ನು ಎನ್ ಆರ್ ಎಚ್ ಎಮ್ (ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ)ನಡಿ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಳ್ಯದ ಕೊಲ್ಲಮೊಗರು,ಬೆಳ್ತಂಗಡಿಯ ಕಣಿಯೂರು, ಹತ್ಯಡ್ಕ, ನೆರಿಯಾ,ಮಂಗಳೂರಿನ ನೆಲ್ಲಿಕಾರಿನಲ್ಲಿದೆ. ದುರ್ಗಮವೆಂದು ಗುರುತಿಸಲ್ಪಟ್ಟ 6 ಆರೋಗ್ಯ ಕೇಂದ್ರಗಳು ಬಂಟ್ವಾಳದ ಪೆರುವಾಯಿ, ಕಲ್ಲಡ್ಕ, ದೈವಸ್ಥಳ, ಪುತ್ತೂರಿನ ಶಿರಾಡಿ,ಕೊಳ್ತಿಗೆ, ಮಂಗಳೂರಿನ ಕೊಂಪದವಿನಲ್ಲಿ ಆರೋಗ್ಯ ಕೇಂದ್ರಗಳು ನಿರಂತರವಾಗಿ ಕಾರ್ಯಾಚರಿಸುತ್ತಿದ್ದು ಸೆಪ್ಟೆಂಬರ್ 2008ರಿಂದ ಈ ಯೋಜನೆ ಜಾರಿಗೆ ಬಂದಿದೆ. ಆರೋಗ್ಯ ರಕ್ಷಾ ಸಮಿತಿಯ ಪಾತ್ರ ಇಲ್ಲಿ ಹಿರಿದಾಗಿದ್ದು,ಜನರಿಗೆ ಸೌಲಭ್ಯ ತಲುಪಿಸಲು ಈ ಸಮಿತಿಗಳೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.
ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯರು ಅಧ್ಯಕ್ಷರಾಗಿದ್ದು, ಸ್ಥಳೀಯ ವೈದ್ಯಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರಲ್ಲದೆ ಇತರ 8 ಜನರು ಈ ಸಮಿತಿಯಲ್ಲಿರುತ್ತಾರೆ. ಎನ್ ಆರ್ ಎಚ್ ಎಮ್ ನಡಿ ವೈದ್ಯಕೀಯ ಸೌಲಭ್ಯಕ್ಕೆ ಯಾವುದೇ ಕೊರತೆ ಇರುವುದಿಲ್ಲವಾದ್ದರಿಂದ ಜನರಿಗೆ ವೈದ್ಯಕೀಯ ನೆರವು ಖಚಿತಪಡಿಸಿಕೊಳ್ಳಬಹುದು. ಇದಲ್ಲದೆ ಜಿಲ್ಲೆಯ 13 ಆರೋಗ್ಯಕೇಂದ್ರಗಳಿಗೆ 108 ಸೌಲಭ್ಯವಿದ್ದು, ಇನ್ನು ಆರು 108 ಆಂಬುಲೆನ್ಸ್ ಗಳಿಗೆ ಬೇಡಿಕೆ ಇರಿಸಲಾಗಿದೆ. ಇಂದು ಶಿರ್ತಾಡಿ ಮತ್ತು ಸುರತ್ಕಲ್ ನ 24x7 ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದಾಗ ಅಲ್ಲಿನ ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್ ಮತ್ತು ಡಾ. ಹೇಮಲತಾ ಅವರು ನೂತನ ವ್ಯವಸ್ಥೆಗಳು ಬಂದ ಬಳಿಕ ಆಸ್ಪತ್ರೆಗೆ ಬರುವ ಗರ್ಭಿಣಿಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದರು.ಇದಲ್ಲದೆ ರೋಗಿಗಳ ಅನುಕೂಲಕ್ಕೆ ಹಣದ ಸಮಸ್ಯೆ ಇರುವುದಿಲ್ಲ ಎಂಬುದನ್ನು ವಿವರಿಸಿದರು. ಇದಲ್ಲದೆ ಗರ್ಭಿಣಿಯರಿಗೆ ರಾಜ್ಯ ಸರ್ಕಾರ ಪ್ರಸೂತಿ ಆರೈಕೆಯಡಿ ಆರ್ಥಿಕ ನೆರವು ನೀಡುತ್ತಿದ್ದು, 2008-09ರ ಸಾಲಿನಲ್ಲಿ 625 ಸುರಕ್ಷಿತ ಪ್ರಸವಗಳಾಗಿದೆ ಎಂದರು. ಉಜಿರೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಿಂಗಳಲ್ಲಿ 40 ಕ್ಕೂ ಹೆಚ್ಚು ಹೆರಿಗೆಗಳಾಗಿದ್ದು, ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯಾಧಿಕಾರಿಗಳನ್ನು ನೇಮಿಸಲು ಸೂಚಿಸಿದ್ದಾರೆ ಎಂದು ಜಿಲ್ಲ ಯೋಜನಾ ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ್ ಕೆ.ಎಸ್ ವಿವರಿಸಿದರು. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಷಿನ ಸಂಖ್ಯೆಯಲ್ಲಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಒದಗಿಸಿರುವ ಸೌಲಭ್ಯಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳಬಹುದು.
ವಿದ್ಯೆ ಮಾತ್ರ ಅನುಪಮ ಸೌಂದರ್ಯ ಗೌರವ ತರಬಲ್ಲದುಈ ಕನಸು - ಗುರುವಾರ ೦೭:೧೮, ಮಾರ್ಚ್ ೧೧, ೨೦೧೦ ವಿಶೇಷ ವರದಿ
ಮಿಸೆಸ್ ಇಂಡಿಯಾ ಗ್ಲೋಬ್ 2009 ಮತ್ತು ಮಿಸೆಸ್ ಬ್ಯೂಟಿಫುಲ್ ಫೇಸ್ ಇಂಟರ್ನ್ಯಾಶನಲ್ ಪ್ರಶಸ್ತಿ ವಿಜೇತೆ ಸರಳ ಸಜ್ಜನಿಕೆಯ ಶ್ರೀಮಾರೈಯವರನ್ನು ನೋಡುವಾಗ ಬಣ್ಣದ ಪ್ರಪಂಚದ ಗ್ಲಾಮರಸ್ ವ್ಯಕ್ತಿಗಳು ಇಷ್ಟು ಸರಳವಾಗಿರಲು ಸಾಧ್ಯವೇ? ಎಂಬ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ. ಮೂಲತ ತುಳುವರಾಗಿ ಬಂಟ ಮನೆತನದಲ್ಲಿ ಹುಟ್ಟಿ ಅಮೇರಿಕಾ ದಲ್ಲಿ ಬೆಳೆದ ಶ್ರೀಮಾ ರವರಿಗೆ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರದ ಬಗೆಗೆ ಬಹಳ ಆಸಕ್ತಿ ಕನ್ನಡ ಹೆಚ್ಚು ಬರದಿದ್ದರೂ ಮಾತೃ ಭಾಷೆಯಾದ ತುಳುವಿನಬಗ್ಗೆ ಅತೀವ ಪ್ರೀತಿ ಸರಳ ಸಜ್ಜನಿಕೆಯ ನಯವಿನಯದಿಂದ ತುಂಬಿದ ಶ್ರೀಮಾ ವಿದ್ಯೆ ಮಾತ್ರ ಜೀವನದಲ್ಲಿ ಯಶಸ್ಸು ತಂದುಕೊಡಬಲ್ಲದು ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು.ಉನ್ನತ ಪದವಿಯನ್ನು ಅಲಂಕರಿಸಬೇಕು.
ಹುಡುಗಿಯರು ಯಾರಿಗೂ ಎಂದಿಗೂ ಹೊರೆಯಾಗದಂತೆ ತಮ್ಮನ್ನು ರೂಪಿಸಿಕೊಳ್ಳಬೇಕು.ಸ್ವಾವಲಂಭನೆಯನ್ನು ರೂಪಿಸಿಕೊಳ್ಳುವವರಿಗೆ ಸಮಾಜ ಎಂದಿಗೂ ಗೌರವ ನೀಡುತ್ತದೆ. ಎಲ್ಲರೂ ಉನ್ನತಿಯ ಹಾದಿಯಲ್ಲಿ ಧನಾತ್ಮಕವಾಗಿ ಚಿಂತಿಸುವುದು ಮತ್ತು ದೊಡ್ಡ ಕನಸು ಕಾಣಬೇಕು ಆದರೆ ಕನಸನ್ನು ನನಸುಮಾಡುವ ಏಕಾಗ್ರತೆ ಮತ್ತು ಛಲವನ್ನು ಹೊಂದಿರಬೇಕು ಎನ್ನುತ್ತಾರೆ.ಮುಂಬೈ ಸ್ಟಾಂಡರ್ಡ್ ಚಾರ್ರ್ಟಡ್ ಬ್ಯಾಂಕ್ ನಲ್ಲಿ ಉನ್ನತ ಹುದ್ದೆಯಲ್ಲಿರುವ ಶ್ರೀಮಾ ನಿಟ್ಟೆ ಗುತ್ತು ನೇಮಿರಾಜ ರೈ ಮತ್ತು ವಿಶಾಲಿ ರೈ ಯವರ ಮಗಳು ಮತ್ತು ಖ್ಯಾತ ಅಭಿನೇತ್ರಿ ಐಶ್ವರ್ಯ ರೈ ಯವರ ಅಣ್ಣ ಮೆರಿನ್ ಇಂಜಿನಿಯರ್ ಆಗಿರುವ ಆದಿತ್ಯ ರೈಯವರ ಪತ್ನಿಯಾಗಿದ್ದಾರೆ. ಭಾಗ್ಯವಾನ್ ಮುಲ್ಕಿ
ಭಾಷೆಗಳ ವಿಲೀನ – ಕನ್ನಡ ಮಲಿನ!!!ಆಸುಮನ (ASUMANA) - ಗುರುವಾರ ೦೪:೩೭, ಮಾರ್ಚ್ ೧೧, ೨೦೧೦
ಒಂದು ಮನದ ಭಾವನೆಗಳನ್ನು ಇನ್ನೊಂದು ಮನಕ್ಕೆ ತಲುಪಿಸುವ ಮಾಧ್ಯಮವೇ ಭಾಷೆ. ನಮ್ಮ ದೇಶದಲ್ಲಿ ಇರುವಷ್ಟು ವೈವಿಧ್ಯಮಯ ಭಾಷೆಗಳು ಬೇರೆಲ್ಲೂ ಕಾಣಸಿಗವು ಅನ್ನಬಹುದೇನೋ. ಪ್ರತೀ ಭಾಷೆಯೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದರೆ ಮಾತ್ರ ಆ ಭಾಷೆ ಉಳಿಯಲು ಸಾಧ್ಯ.
ನಮ್ಮ ಭಾಷೆಯಲ್ಲಿ ಪದಪ್ರಯೋಗ ರೀತಿ ಮತ್ತು ಪದಗಳ ಸರಿಯಾದ ಉಚ್ಛಾರವನ್ನು ತಿಳಿದುಕೊಳ್ಳುವಲ್ಲಿ ಆಕಾಶವಾಣಿ ಹಾಗೂ ದೂರದರ್ಶನದ ವಾಹಿನಿಗಳು ಪ್ರಮುಖವಾಗಿ ಸಹಕಾರಿಯಾಗುತ್ತವೆ. ಉದ್ಘೋಷಕರು ಮತ್ತು ವಾರ್ತಾ ಓದುಗರು ಮಾಡುವ ಪದಪ್ರಯೋಗ ಮತ್ತು ಉಚ್ಛಾರಗಳನ್ನು ಶ್ರೋತೃಗಳು ಆಲಿಸಿ, ಅನುಸರಿಸುವುದು ಸಾಮಾನ್ಯ. [...]
ಕೈರೋ ಚಿತ್ರೋತ್ವವದಲ್ಲಿ ಕನ್ನಡ ಚಿತ್ರ ಪುಟಾಣಿ ಪಾರ್ಟಿ ಪ್ರದರ್ಶನಸಾಂಗತ್ಯ - ಗುರುವಾರ ೦೩:೦೬, ಮಾರ್ಚ್ ೧೧, ೨೦೧೦
ಕನ್ನಡಿಗ ರಾಮಚಂದ್ರ ಪಿ.ಎನ್. ನಿರ್ದೇಶಿಸಿದ “ಪುಟಾಣಿ ಪಾರ್ಟಿ” ಮಕ್ಕಳ ಚಲನಚಿತ್ರ ಈಜಿಪ್ಟ್ ನ ಕೈರೋದಲ್ಲಿ ನಡೆಯುತ್ತಿರುವ 20 ನೇ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.
ಮಾ. 4 ರಿಂದ 11 ರವರೆಗೆ ನಡೆದ ಚಲನಚಿತ್ರೋತ್ಸವದಲ್ಲಿ ಭಾರತದ 4 ಚಿತ್ರಗಳೂ ಸೇರಿದಂತೆ ಪೋಲ್ಯಾಂಡ್, ಸೌತ್ ಕೊರಿಯಾ, ಯುಎಸ್ ಎ, ಕೆನಡಾ, ರಷ್ಯಾ, ಬ್ರಿಟನ್, ಪ್ಯಾಲೇಸ್ತೀನ್, ಹಂಗೇರಿ, ಚೀನಾ, ನೆದರ್ ಲ್ಯಾಂಡ್ಸ್,ದಕ್ಷಿಣ ಕೊರಿಯಾ, ಜರ್ಮನಿ ದೇಶಗಳಲ್ಲಿ ತಯಾರಾದ ಚಲನಚಿತ್ರಗಳು ಪ್ರದರ್ಶಿತವಾದವು.
ಭಾರತದ ಪುಟಾಣಿ ಪಾರ್ಟಿ, ರೋಡ್ ರೋಮಿಯೋ, ರಿಕ್ಕಿ ರಾಪರ್, ಫ್ರೂಟ್ [...]
ಭೀಮಸೇನ ಜೋಷಿ ಮಗನ ಹಾಡುಗಾರಿಕೆಅವಧಿ - ಗುರುವಾರ ೦೨:೧೧, ಮಾರ್ಚ್ ೧೧, ೨೦೧೦ ಅಂಕಿತ
———————-
ಅರವಿಂದ ಮುಳಗುಂದ ಸಂಪಾದಿಸಿರುವ
ಭೀಮಸೇನ್ ಜೋಷಿ ಕುರಿತ ಪುಸ್ತಕ
ಭಾರತೀಯ ವಿದ್ಯಾ ಭವನಲ್ಲಿ ೧೩ ರಂದು ಸಂಜೆ ಆರು ಗಂಟೆಗೆ ಬಿಡುಗಡೆಯಾಗಲಿದೆ.
–
ಭೀಮಸೇನ ಜೋಷಿ ಅವರ ಮಗ
ಶ್ರೀನಿವಾಸ್ ಭೀಮ್ ಸೇನ್ ಜೋಶಿಯಿಂದ ಹಾಡುಗಾರಿಕೆ ಇದೆ
–
ಇಲ್ಲಿ ಅಪಾರ ವಿನ್ಯಾಸದ ಮುಖಪುಟ ಇದೆ ನೋಡಿ-

ತಪ್ಪಲ್ಲದ ತಪ್ಪುಗಳುವಿಕಾಸವಾದ - ಗುರುವಾರ ೦೧:೫೪, ಮಾರ್ಚ್ ೧೧, ೨೦೧೦ ಕೆಲದಿನಗಳಿಂದ ಸ್ವಾಮಿ ನಿತ್ಯಾನಂದರ ಬಗ್ಗೆ ಏನೇನೋ ಜೋಕ್ ಸಂದೇಶಗಳು ನನ್ನ ಫೋನ್ ಗೆ ಬಂದಿದ್ದವು. ಇವತ್ತು ಬೆಳಗ್ಗೆ ಅದನ್ನೇ ನಾನು ನನ್ನ ಗೆಳೆಯ ಗೆಳತಿಯರಿಗೆ ಫಾರ್ವರ್ಡ್ ಮಾಡುತ್ತಿದ್ದೆ. ಅದನ್ನು ಕಳಿಸುವಾಗ ಅವರ ಬಗ್ಗೆ , ಆ ಘಟನೆಯ ಬಗ್ಗೆ ಯಾವ ಯೋಚನೆಯೂ ಇಲ್ಲದೇ ಸುಮ್ಮನೇ ತಮಾಷೆಗಾಗಿ ಕಳಿಸುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ಗೆಳತಿ ಫೋನ್ ಮಾಡಿದಳು. ಇದ್ಯಾಕೆ ಹೀಗೆಲ್ಲಾ ಕಳಿಸ್ತಿದ್ದೀಯ, ಮಾಡ್ದೋರ ಪಾಪ ಆಡ್ದೋರ ಬಾಯಲ್ಲಿ ಅಂತಾರೆ, ಹೀಗೆ ಸುಮ್ಮನೇ ಇನ್ನೊಬ್ಬರನ್ನು ತಮಾಷೆ ಮಾಡಿಕೊಳ್ಳುವುದು ತಪ್ಪಲ್ವಾ ಅಂದಳು. ನನಗೂ ಹೌದು ಅನ್ನಿಸಿತು. ತಪ್ಪಾಗಿತ್ತು. ಇದು ಚಿಕ್ಕ ತಪ್ಪು ಎನ್ನಬಹುದು. ನನಗೂ, ಯಾರಿಗೂ ತೊಂದರೆ ಮಾಡದ ಚಿಕ್ಕ ತಪ್ಪು. ಸುಲಭವಾಗಿ ತಿದ್ದಿಕೊಳ್ಳಬಹುದಾದಂತಹ ಅಲ್ಲಿಗೇ ನಿಲ್ಲಿಸಬಹುದಾದಂತಹ ತಪ್ಪು. ಅದಿರಲಿ.
ಜೀವನದಲ್ಲಿ ಒಮ್ಮೊಮ್ಮೆ ಎಂತಹ ತಪ್ಪುಗಳಾಗಿ ಬಿಡುತ್ತವೆಂದರೆ ಅದು ನಮ್ಮ ಜೀವನದ ಗತಿಯನ್ನೇ ಬದಲಾಯಿಸಿಬಿಡುತ್ತವೆ. ಆ ತಪ್ಪು ಮಾಡುವಾಗ ಅದು ನಮಗೆ ನಿಜವಾಗಲೂ ತಪ್ಪು ಅಂತ ಅನ್ನಿಸಿರುವುದಿಲ್ಲ. ನಿಜವಾಗಲೂ ಅದು ಆಗ ’ತಪ್ಪು’ ಅನ್ನುವಂತದ್ದು ಆಗಿರುವುದೇ ಇಲ್ಲ. ಇಲ್ಲಿ ತಪ್ಪು ಅಂದರೆ ಯಾರಿಗೋ ತೊಂದರೆಯಾಗುವ, ಯಾರಿಗೋ ಮೋಸ ಮಾಡಿದ ತಪ್ಪು ಅಂತಲ್ಲ. ನಮ್ಮದೇ ಜೀವನಕ್ಕೆ, ನಮ್ಮದೇ ಬೆಳವಣಿಗೆಗೆ ತೊಡಕಾಗುವಂತಹ, ನಮ್ಮದೇ ನೆಮ್ಮದಿ ಕೆಡಿಸಿಕೊಳ್ಳುವಂತಹ ತಪ್ಪುಗಳು (mistakes). ಅವತ್ತಿನ ಸನ್ನಿವೇಶಕ್ಕೆ ತಕ್ಕನಾಗಿ ಮಾಡಿದ ಕೆಲಸ, ಅವತ್ತು ತೆಗೆದುಕೊಂಡ ತೀರ್ಮಾನ, ಅವತ್ತು ಇಟ್ಟ ಹೆಜ್ಜೆ ತಪ್ಪಾಗಿತ್ತು ಅಂತ ಎಷ್ಟೋ ಕಾಲವಾದ ಮೇಲೆ ಅರಿವಾಗಲು ಶುರುವಾಗುತ್ತದೆ. ಆದರೆ ಕಾಲ ಮೀರಿರುತ್ತದೆ. ಅದು ಎಲ್ಲೋ ತೊಡಗಿಸಿದ ಬಂಡವಾಳ ಇರಬಹುದು, ಆರಿಸಿಕೊಂಡ ಕ್ಷೇತ್ರ, ಉದ್ಯೋಗ ಆಗಿರಬಹುದು, ಬೆಳೆಸಿಕೊಂಡ ಸ್ನೇಹ/ಸಂಬಂಧ/ಸಹವಾಸವಿರಬಹುದು, discontinue ಮಾಡಿದ ಹವ್ಯಾಸ, ಕಲೆ, ಕಳೆದ ಸಮಯ ಮತ್ತಿನ್ನೇನೋ ಆಗಿರಬಹುದು. ಅವು ನಮ್ಮ ನಿರೀಕ್ಷೆಯ ಹೊರತಾಗಿ ನೆಡೆದಾಗ, ನಾವು ಊಹಿಸಿದ ದಾರಿಯಲ್ಲಿ ಸಾಗದಿದ್ದಾಗ, ತೊಂದರೆ ಕೊಡಲಾರಂಭಿಸಿದಾಗ, ಕಳೆದುಕೊಂಡದ್ದು ಮತ್ತೆ ಸಿಗುವುದಿಲ್ಲ ಎಂಬಂತಾದಾಗ ಅಷ್ಟರಲ್ಲಿ ಆಗಬೇಕಾದ ಡ್ಯಾಮೇಜು ಆಗಿಹೋಗಿ ಅದನ್ನು ಸರಿಪಡಿಸಿಕೊಳ್ಳುವ ದಾರಿ ತೀರಾ ಕ್ಷೀಣವಾಗಿರುತ್ತದೆ ಅಥವಾ ಇಲ್ಲವಾಗಿರುತ್ತದೆ. ಹಾಗಂತ ಜೀವನವೇನೂ ಬರಬಾದೆದ್ದಿರುವುದಿಲ್ಲ. ಒಂದು ಸೀದಾ ಸಾದಾ ಹಾದಿಯಲ್ಲಿ ಸಾಗಿಬಂದ ಸಾಧಾರಣ ಬದುಕು, ಭವಿಷ್ಯ ಇನ್ನೂ ಒಳ್ಳೆಯದಾಗಿರುತ್ತಿತ್ತು ಎಂಬಂತಿರುತ್ತದೆ. ಸಾಮರ್ಥ್ಯ ಇದ್ದರೂ ಬಳಸಿಕೊಳ್ಳದೇ, ಮಾಡುವುದನ್ನು ಸರಿಯಾಗಿ ಮಾಡದೇ, ಗೊತ್ತಿದ್ದೂ ಗೊತ್ತಿದ್ದೂ ಹೀಗ್ಯಾಕೆ ಆಗಲು ಬಿಟ್ಟೆವು ಅನ್ನಿಸುತ್ತದೆ.
ಆದರೆ ಅವತ್ತು ತಪ್ಪೆನಿಸದೇ ಹೋದದ್ದು ಇವತ್ತು ಅಷ್ಟೆಲ್ಲಾ ತಪ್ಪು ಅನ್ನಿಸಬೇಕಾದರೆ ಆವತ್ತು ಆ ಹೆಜ್ಜೆ ಏಕೆ ಇಟ್ಟೆವು ಎಂಬುದನ್ನು ಯೋಚಿಸಿದರೆ ಅದಕ್ಕೆ ಕಾರಣಗಳು ಹಲವು. ಅದು ಅಜ್ಞಾನ ಇರಬಹುದು, ಅನಿವಾರ್ಯತೆ ಇರಬಹುದು, ಅನುಭವದ, ದೂರದೃಷ್ಟಿಯ, ಪ್ರೌಢಿಮೆ ಕೊರತೆ ಇರಬಹುದು, ಬದಲಾದ ಸನ್ನಿವೇಶ ಇರಬಹುದು, ಪರಿಸ್ಥಿತಿಯ ಗತಿ ಇರಬಹುದು, ಆತುರಕ್ಕೆ ಬಿದ್ದದ್ದಿರಬಹುದು, ಇದ್ಯಾವುದೂ ಇಲ್ಲದೇ ಸುಮ್ಮನೇ ಆಗಿಹೋಗಿರಬಹುದು. ಈ ರೀತಿಯ ವೈಯಕ್ತಿಕ ತಪ್ಪುಗಳ ಪ್ರಭಾವ ಅನಂತರದ ಹಂತಗಳಲ್ಲಿ ನಮ್ಮ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಜೀವನದ ಮೇಲೂ ಕಾಣಿಸುತ್ತದೆ. ಇಂತಹ ತಪ್ಪುಗಳು ಯಾವ ಪಶ್ಚಾತಾಪಕ್ಕೂ, ಯಾವ ಆತ್ಮವಿಮರ್ಶೆಗೂ ನಿಲುಕದೇ, ಮನಸಿದ್ದರೆ ಮಾರ್ಗ.. ಬದುಕಲು ಕಲಿಯಿರಿ.. ಎಂಬ ಸೂತ್ರಗಳಿಗೂ ಸಿಲುಕದೇ ಒಂದು ಕೊರಗನ್ನು ಉಳಿಸಿಬಿಡುತ್ತವೆ. ಇವು ತಪ್ಪಲ್ಲದ ತಪ್ಪುಗಳು.
*****
ನಂಗೊತ್ತು, ಹೀಗೆಲ್ಲಾ ಬರೆದಿದ್ದಕ್ಕೆ ನೀವೆಲ್ಲಾ ಸ್ವಾಮಿ ವಿಕಾಸಾನಂದ ಅದೂ ಇದೂ ಅಂತೆಲ್ಲಾ ಕಿಚಾಯಿಸ್ತೀರಾ ಅಂತ! :)
೧ ೨ ೩ ೪ ೫ ೬ ೭ ೮ ೯ ೧೦ ಮುಂದೆ› ಕೊನೆ» |